ನಿತ್ಯಭವಿಷ್ಯ : 22-05-2020

0

ಮೇಷರಾಶಿ
ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಲಾಭಸ್ಥಾನದ ರಾಹುವಿನಿಂದ ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಆರ್ಥಿಕವಾಗಿ ಹಿನ್ನಡೆ ತಂದೀತು. ದಾಂಪತ್ಯದಲ್ಲಿ ಸಿಹಿ ಸುದ್ದಿ ಕೇಳಿ ಸಂತಸವಾದೀತು. ಸ್ಥಿರಾಸ್ತಿ-ವಾಹನ ನೋಂದಣಿಗೆ ಅವಕಾಶ, ಮೇಲಾಧಿಕಾರಿಗಳಿಂದ ಸಹಕಾರ, ಮಕ್ಕಳಿಂದ ನೆಮ್ಮದಿ, ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ, ಆರ್ಥಿಕ ಸಂಕಷ್ಟ ನಿವಾರಣೆ.

ವೃಷಭರಾಶಿ
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ, ವೃತ್ತಿರಂಗದಲ್ಲಿ ಉದ್ಯೋಗಸ್ಥರಿಗೆ ಜವಾಬ್ದಾರಿ ಹೆಚ್ಚಲಿದೆ. ಕಾರ್ಮಿಕ ವರ್ಗದವರಿಗೆ ಸ್ಥಳ ಬದಲಾವಣೆಯಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ತೆರಿಗೆ ಅಧಿಕವಾದೀತು. ಆರೋಗ್ಯದಲ್ಲಿ ಗಮನವಿರಲಿ. ಸ್ವಯಂಕೃತ ಅಪರಾಧಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆ, ಆಕಸ್ಮಿಕ ದುರ್ಘಟನೆ, ಮಾನಸಿಕ ನೆಮ್ಮದಿಗೆ ಭಂಗ.

ಮಿಥುನರಾಶಿ
ಬಂಧುಗಳಿಗಾಗಿ ವೆಚ್ಚ, ಸ್ಥಿರಾಸ್ತಿ ವ್ಯವಹಾರಕ್ಕೆ ಖರ್ಚು, ಗೃಹ-ಸ್ಥಳ ಬದಲಾವಣೆಗೆ ಮನಸ್ಸು, ವೃತ್ತಿರಂಗದಲ್ಲಿ ಹಳೇ ಶತ್ರುಗಳು ದ್ವೇಷ ಸಾಧಿಸಿಯಾರು. ವೃತ್ತಿರಂಗದಲ್ಲಿ ಅಧಿಕಾರ ಪ್ರಾಪ್ತಿಯಿದ್ದರೂ ನಿಭಾಯಿಸಲು ಅಸಮರ್ಥರಾಗುವಿರಿ. ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಅಧಿಕ ಧನವ್ಯಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪೆಟ್ಟಾಗುವ ಸಾಧ್ಯತೆ ಎಚ್ಚರಿಕೆ.

ಕಟಕರಾಶಿ
ಕೃಷಿಕರಿಗೆ ಅಧಿಕ ಲಾಭ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಧಾರ್ಮಿಕ ಹಾಗೂ ಶುಭಮಂಗಲ ಕಾರ್ಯಗಳ ಚಿಂತನೆ ಚಾಲನೆಗೆ ಬಂದೀತು. ಅಧಿಕಾರಿ ವರ್ಗದವರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಗೃಹನಿರ್ಮಾಣ ಕಾರ್ಯಗಳಿಗೆ ವಿಳಂಬವಾಗಬಹುದು. ಅಹಂಭಾವದ ಮಾತುಗಳು, ಮಿತ್ರರಿಗೆ ನೋವು ನೀಡುವಿರಿ.

ಸಿಂಹರಾಶಿ
ಸಾಂಸಾರಿಕವಾಗಿ ತುಸು ಸಮಾಧಾನ ಸಿಕ್ಕರೂ ಕಿರಿಕಿರಿ ತಪ್ಪದು. ಆಧ್ಯಾತ್ಮಿಕ ಆಸಕ್ತಿಯನ್ನು ನಡೆಸಿಕೊಳ್ಳುವುದು ಅತೀ ಅಗತ್ಯವಿದೆ. ಧನಾಗಮನ ಉತ್ತಮವಿದ್ದರೂ ವ್ಯಯಕ್ಕೆ ಹಲವು ಮಾರ್ಗಗಳು ಗೋಚರಿಸಿಯಾವು. ಭೂ ಖರೀದಿ, ಗೃಹ ನಿರ್ಮಾಣ ಕಾರ್ಯಕ್ಕಾಗಿ ಓಡಾಟ, ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದ ಅನಗತ್ಯವಾದ ಅಪವಾದ ಕಾಡಲಿದೆ.

ಕನ್ಯಾರಾಶಿ
ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಸ್ವಂತ ಉದ್ಯಮದಲ್ಲಿ ಅನಾನುಕೂಲ, ಆರ್ಥಿಕ ಸಮತೋಲನ ತಪ್ಪಿ ಆತಂಕಕ್ಕೆ ಕಾರಣ ವಾಗಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಯೋಗವು ಕಂಡು ಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ. ದೃಢ ನಿರ್ಧಾರದಿಂದ ಉತ್ತಮ ಫ‌ಲ. ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಮನಸ್ಸಿನಲ್ಲಿ ಆತಂಕ, ಚಿಂತೆಯಿಂದ ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.

ತುಲಾರಾಶಿ
ಆಕಸ್ಮಿಕ ಉದ್ಯೋಗದಲ್ಲಿ ತೊಂದರೆ, ಸಮಾಜದಲ್ಲಿ ಅವಮಾನ ಪ್ರಸಂಗವನ್ನು ಅನುಭವಿಸಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ. ಗೃಹ ನಿರ್ಮಾಣ ಕಾರ್ಯಕ್ಕೆ ಇದು ಉತ್ತಮ ಸಮಯವಲ್ಲ. ಕಿರು ಸಂಚಾರವಿದೆ. ಉದ್ಯೋಗ ಬದಲಾವಣೆಗೆ ಮನಸ್ಸು, ಸಾಲಗಾರರಿಂದ ಸಮಸ್ಯೆ, ಆತ್ಮಗೌರವಕ್ಕೆ ಚ್ಯುತಿ, ಅದೃಷ್ಟ ಒಲಿಯುವುದು.

ವೃಶ್ಚಿಕರಾಶಿ
ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶುಭಮಂಗಲ ಕಾರ್ಯಕ್ಕಾಗಿ ಓಡಾಟವಿರುತ್ತದೆ. ಸಮಸ್ಯೆಗಳು ಹಂತ ಹಂತವಾಗಿ ಉಪಶಮನವಾಗಲಿವೆ. ತುಸು ಆರೋಗ್ಯದ ಬಗ್ಗೆ ಗಮನಹರಿಸಿರಿ. ಧನಾಗಮನಕ್ಕೆ ಕೊರತೆ ಇಲ್ಲವಾದರೂ ಖರ್ಚುಗಳು ಅಧಿಕ.ಮಿತ್ರರೊಂದಿಗೆ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ ಶಮನ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಮನಸ್ಸಿನಲ್ಲಿ ಮಂದಹಾಸ ಮೂಡುವುದು.

ಧನಸ್ಸುರಾಶಿ
ಮೇಲಾಧಿಕಾರಿ-ರಾಜಕೀಯ ವ್ಯಕ್ತಿಗಳ ಭೇಟಿ, ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನ ಬಲದ ಪ್ರತಿಫ‌ಲ ಸಿಗಲಿದೆ. ಸಾಹಿತಿಗಳಿಗೆ, ಕಲಾವಿದರಿಗೆ ಶ್ರಮರಹಿತ ಪ್ರತಿಫ‌ಲ ಸಿಗಲಿದೆ. ಅಧಿಕಾರಿ ವರ್ಗದೊಡನೆ ಭಿನ್ನಾಭಿಪ್ರಾಯಕ್ಕೆ ಕಾರಣರಾಗದಂತೆ ಜಾಗ್ರತೆ ಇರಲಿ. ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಕಾಟ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ಗುರು ಉಪದೇಶ ಕೇಳಲು ಮನಸ್ಸು.

ಮಕರರಾಶಿ
ಮಕ್ಕಳಿಂದ ಆಕಸ್ಮಿಕ ಅವಘಡ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ. ಉದ್ಯೋಗಸ್ಥರಿಗೆ ನಿರೀಕ್ಷಿತ ಉದ್ಯೋಗ ಬದಲಾವಣೆ ಇದೆ. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ಸಂಚಾರದಲ್ಲಿ , ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ರಾಜಕೀಯ ವ್ಯಕ್ತಿಗಳ ಸಹಾಯ ಬೇಡುವಿರಿ, ಕಾರ್ಯ ಯಶಸ್ಸಿಗಾಗಿ ಓಡಾಟ, ಕಲ್ಪನೆ, ಭಾವನ ಲೋಕದಲ್ಲಿ ವಿಹಾರ, ಮನಸ್ಸಿನಲ್ಲಿ ದೂರಾಲೋಚನೆ.

ಕುಂಭರಾಶಿ
ಸಾಲಗಾರರ ಕಾಟದಿಂದ ತೊಂದರೆ, ಆಸ್ತಿ-ವಾಹನ ಮಾರಾಟ ಮಾಡಲು ಚಿಂತನೆ, ನಿರುದ್ಯೋಗಿಗಳು ಉದ್ಯೋಗದ ಅನ್ವೇಷಣೆ ಗಾಗಿ ಪರಸ್ಥಳಕ್ಕೆ ತೆರಳುವ ಸಾಧ್ಯತೆ ಇದೆ. ಸರಕಾರಿ ಇಲಾಖೆಯಿಂದ ಸಮಸ್ಯೆಗಳು ಕಂಡುಬಾರದಂತೆ ಜಾಗ್ರತೆ ವಹಿಸಿರಿ. ಒಟ್ಟಿನಲ್ಲಿ ಸುಖ ದುಃಖದ ಸಮ್ಮಿಶ್ರ ಫ‌ಲವಿದೆ. ಪ್ರಯಾಣದಲ್ಲಿ ವಸ್ತು ಕಳವು, ಬಂಧುಗಳಿಂದಲೇ ಶತ್ರುಗಳು ಅಧಿಕವಾಗುವರು,

ಮೀನರಾಶಿ
ವಿದ್ಯಾಭ್ಯಾಸ, ಕ್ರೀಡೆ, ಮನೋರಂಜನೆಗಾಗಿ ಪ್ರಯಾಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು, ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತಂದೀತು. ಸಾಮಾಜಿಕ ಕಾರ್ಯದಲ್ಲಿ ನಿಮ್ಮ ಕ್ರಿಯಾಶೀಲತೆಗೆ ಯಶಸ್ಸು ಸಿಗಲಿದೆ. ಸಂಚಾರಗಳು ಆಗಾಗ ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ಉಷ್ಣ ಬಾಧೆ, ರಕ್ತ ದೋಷ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಯತ್ನ ಕಾರ್ಯಗಳಲ್ಲಿ ಶುಭ, ಪರಿಶ್ರಮದಿಂದ ಜಯ ಲಭಿಸುವುದು.

Leave A Reply

Your email address will not be published.