ನಿತ್ಯಭವಿಷ್ಯ : 28-04-2020

0

ಮೇಷರಾಶಿ
ಮಾತೃವಿನಿಂದ ಲಾಭ, ಇಲ್ಲ ಸಲ್ಲದ ತಕರಾರು, ಹಿತ ಶತ್ರುಗಳ ಬಾಧೆ, ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಶುಭ ಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯವಾದೀತು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಪ್ರತಿಷ್ಠೆ , ಗೌರವದ ಕಾರಣ ಖರ್ಚು ಬಂದೀತು. ವಿದ್ಯಾಭ್ಯಾಸದಲ್ಲಿ ಅಲ್ಪ ತೊಂದರೆ, ಸ್ನೇಹಿತರ ಭೇಟಿ.

ವೃಷಭರಾಶಿ
ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದೇಹಾರೋಗ್ಯದಲ್ಲಿ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಸೇರಲಿದೆ. ದಿಟ್ಟತನದ ಪ್ರವೃತ್ತಿಯಿಂದ ಕಾರ್ಯಸಾಧನೆಯಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ತೋರಿಬಂದು ಶಾಂತಿ ಸಿಗಲಿದೆ. ಮಕ್ಕಳ ಬಗ್ಗೆ ಗಮನವಿರಲಿ, ಧರ್ಮ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ಮಿಥುನರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ, ಹಿರಿಯರ ಬೆಂಬಲ, ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಯೋಗವಿದೆ. ಸಾಂಸಾರಿಕವಾಗಿ ಹಿರಿಯರಿಗೆ ವಿಶ್ರಾಂತಿ ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ದೊರಕಲಿದೆ. ಮಿತ್ರರಿಂದ ನಂಬಿಕೆ ದ್ರೋಹ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಹಿತ ಶತ್ರುಗಳ ಕಾಟ.

ಕಟಕರಾಶಿ
ಇಷ್ಟ ವಿರೋಧಿ ವರ್ತನೆಯಿಂದ ಮಾನಸಿಕವಾಗಿ ಸಮಾಧಾನ ತರದು. ಉದ್ಯೋಗದಲ್ಲಿ ಇಚ್ಛಿತ ಬದಲಾವಣೆಯ ಸಂಭವವಿದೆ. ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ ಓಡಾಟವಿರುತ್ತದೆ. ಕೃಷಿಕರಿಗೆ ಅಧಿಕ ಲಾಭ, ಅನಿರೀಕ್ಷಿತ ಖರ್ಚು, ವಾಹನದಿಂದ ಕಂಟಕ, ಶತ್ರುಗಳ ಧ್ವಂಸ, ನಾನಾ ರೀತಿಯ ಚಿಂತೆ, ದಾಯಾದಿಗಳ ಕಲಹ. ದಿನಾಂತ್ಯ ಶುಭ ವಾರ್ತೆ ಇದೆ.

ಸಿಂಹರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಧನಾರ್ಜನೆಯ ವಿವಿಧ ರೀತಿಯ ಸಂಗ್ರಹ ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಮಕ್ಕಳ ಆರೋಗ್ಯ ಹಾಗೂ ಅಭ್ಯಾಸದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಶುಭಮಂಗಲ ಕಾರ್ಯಗಳಿಗೆ ಅವಕಾಶ ಒದಗೀತು. ವಿರೋಧಿಗಳಿಂದ ಕುತಂತ್ರ, ಆಸ್ತಿ ವಿಚಾರದಲ್ಲಿ ಸ್ವಲ್ಪ ಕಲಹ, ಚಂಚಲ ಮನಸ್ಸು, ಕಾರ್ಯಗಳಲ್ಲಿ ವಿಘ್ನ, ಈ ದಿನ ಮೌನವಹಿಸುವುದು ಉತ್ತಮ.

ನ್ಯಾರಾಶಿ
ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಸಮಾಜದಲ್ಲಿ ಉತ್ತಮ ಗೌರವ ಪ್ರಾಪ್ತಿ, ಒತ್ತಡದ ನಡುವೆಯೂ ಕಾರ್ಯ ನಿರ್ವಹಣೆ ಮಾಡಬೇಕಾದೀತು. ಸದ್ಯದ ಪರಿಸ್ಥಿತಿಯಲ್ಲಿ ವಿರೋಧಿಗಳಿಂದ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಕಾರಣಾಂತರಗಳಿಂದ ಗೃಹದಿಂದ ದೂರ ಉಳಿಯಬೇಕಾದೀತು. ವ್ಯವಹಾರದಲ್ಲಿ ಮುನ್ನಡೆ, ಅನ್ಯರಿಗೆ ಉಪಕಾರ ಮಾಡುವ ಮನಸ್ಸು.

ತುಲಾರಾಶಿ
ಸ್ತ್ರೀಯರಿಗೆ ವಿಶೇಷ ಲಾಭ, ನಿಧಾನಗತಿಯಿಂದ ಸಾಗಲಿರುವ ಕಾರ್ಯ ಯೋಜನೆ ಕಿರಿಕಿರಿ ಎನಿಸಲಿದೆ. ಸ್ಥಗಿತಗೊಂಡ ಕೆಲಸ ಕಾರ್ಯಗಳು ಅನುಷ್ಠಾನಕ್ಕೆ ಬಂದೀತು. ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದ ನಿರೀಕ್ಷಿತ ಫ‌ಲ ದೊರಕದು. ಕೆಲಸದಲ್ಲಿ ಒತ್ತಡ ಹೆಚ್ಚು, ಶತ್ರುಗಳ ಬಾಧೆ, ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ, ಹಣಕಾಸು ಲಾಭ.

ವೃಶ್ಚಿಕರಾಶಿ
ವಾದ-ವಿವಾದಗಳಲ್ಲಿ ಸೋಲು ನಿರಾಸೆ, ವ್ಯಾಪಾರ, ವ್ಯವಹಾರಗಳಲ್ಲಿ ಕುಟುಂಬ ವರ್ಗದವರ ಶುಭ ಕಾರ್ಯಗಳಿಗೆ ಬಂಧುಮಿತ್ರರ ಸಹಕಾರ ಸಿಗಲಿದೆ. ದೈವಾನುಗ್ರಹವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ನಿಮ್ಮನ್ನು ಕಾಡಲಿವೆ. ಪ್ರಭಾವಿ ವ್ಯಕ್ತಿಗಳ ಭೇಟಿ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗದಲ್ಲಿ ಒತ್ತಡ, ಹೆಚ್ಚಿನ ಕಾರ್ಯ ಚಟುವಟಿಕೆ.

ಧನಸ್ಸುರಾಶಿ
ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ಅಲ್ಪ ವಿಳಂಬ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಈ ದಿನ ತಾಳ್ಮೆ ಅತ್ಯಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ವೃತ್ತಿರಂಗದಲ್ಲಿ ಅಧಿಕಾರೀ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ವಿದ್ಯಾರ್ಥಿಗಳು ಉದಾಸೀನತೆಯನ್ನು ಬಿಡತಕ್ಕದ್ದು. ಹಣಕಾಸಿನ ವಿಚಾರದಲ್ಲಿ ಹೆಚ್ಚಿಗೆ ಗಮನಹರಿಸಿರಿ. ವ್ಯವಹಾರಿಕ ಒಪ್ಪಂದಗಳಲ್ಲಿ ಎಚ್ಚರ.

ಮಕರರಾಶಿ
ಸೇವಕರಿಂದ ಸಹಾಯ, ಅನಗತ್ಯ ದ್ವೇಷ ಸಾಧಿಸುವಿರಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅಧಿಕಾರಿಗಳಿಂದ ಪ್ರಶಂಸೆ, ಆಗಾಗ ಕಿರಿಕಿರಿ ತೋರಿಬಂದರೂ ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಶತ್ರುಭಯ ನಿವಾರಣೆಯಾಗಿ ಮುನ್ನಡೆಗೆ ಸಾಧಕವಾಗಲಿದೆ. ಸದ್ಯದಲ್ಲೇ ಇಚ್ಛಿತ ನಿರ್ಧಾರ ನೆರವೇರಲಿದೆ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನಿರೀಕ್ಷಿತ ಖರ್ಚು ಹೆಚ್ಚು.

ಕುಂಭರಾಶಿ
ಮಾನಸಿಕ ಒತ್ತಡ, ದುಃಖ, ನೋವು ಹೆಚ್ಚಾಗುವುದು, ಪತಿ-ಪತ್ನಿಯಲ್ಲಿ ಸಂತೋಷ ಸಮಾಗಮ, ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ, ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆಯ ಅತೀ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ಬಲದಿಂದ ಉತ್ತಮ ಫ‌ಲಿತಾಂಶ ಸಿಗಲಿದೆ. ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ ಖರ್ಚು ತಂದೀತು. ವಿದ್ಯಾರ್ಥಿಗಳಿಗೆ ಅನುಕೂಲ ವಾತಾವರಣ, ದಿನಾಂತ್ಯದಲ್ಲಿ ನೆಮ್ಮದಿಯ ಭಾವ.

ಮೀನರಾಶಿ
ಇಷ್ಟಾರ್ಥ ಸಿದ್ಧಿ, ಆರೋಗ್ಯ ವೃದ್ಧಿ, ಸಮಾಜದಲ್ಲಿ ಉತ್ತಮ ಗೌರವ, ಹಣಕಾಸು ಲಾಭ, ವೃತ್ತಿರಂಗದಲ್ಲಿ ಚಿಂತನೆ ಹಾಗೂ ಕಾರ್ಯಗಳಲ್ಲಿ ವಿರೋಧಾಭಾಸ ಕಂಡುಬರಲಿದೆ. ದಿಟ್ಟತನದ ದೃಢ ನಿರ್ಧಾರಗಳಿಂದ ಮುನ್ನಡೆಯನ್ನು ಸಾಧಿಸಲಿದ್ದೀರಿ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಸಂಗ್ರಹವಾಗಲಿದೆ. ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ.

Leave A Reply

Your email address will not be published.