ನಿತ್ಯಭವಿಷ್ಯ : 18-04-2020

0

ಮೇಷರಾಶಿ
ಕುಟುಂಬದಲ್ಲಿ ಏರಿಳಿತಗಳ ಅನುಭವವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉದಾಸೀನ ತೋರಿ ಬಂದೀತು. ಆರ್ಥಿಕ ಸ್ಥಿತಿ ಆಗಾಗ ಆತಂಕಕ್ಕೆ ಕಾರಣವಾಗಲಿದೆ. ಬಂಧು ಬಾಂಧವರಿಂದ ಕಿರಿಕಿರಿ, ನೆರೆಹೊರೆಯವರಿಂದ ಅಪವಾದ, ಗುಪ್ತ ವಿಚಾರಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರವಾಗಿ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಚರ್ಮ ತುರಿಕೆ, ಆಯಾಸ, ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ನೋವು ಸಾಧ್ಯತೆ.

ವೃಷಭರಾಶಿ
ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ, ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಚಿಂತಿತ ಕೆಲಸಗಳು ಅನಿರೀಕ್ಷಿತವಾಗಿ ನೆರವೇರುತ್ತದೆ. ನೆರೆಹೊರೆಯವರ ಬಗ್ಗೆ ಹೆಚ್ಚಿನ ಗಮನವಿರಲಿ. ಉದ್ಯೋಗ ಬದಲಾವಣೆಗೆ ಚಿಂತನೆ, ಬಂಧುಗಳಿಂದ ಆರ್ಥಿಕ ಸಹಾಯ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಬಾಲಾಗ್ರಹ ದೋಷದಿಂದ ಅನಾರೋಗ್ಯ.

ಮಿಥುನರಾಶಿ
ಸ್ವಂತ ಕೆಲಸ ಕಾರ್ಯಗಳಲ್ಲಿ ಎಚ್ಚರ, ವ್ಯಾಪಾರ ವ್ಯವಹಾರದಲ್ಲಿ ಮೋಸ ಸಾಧ್ಯತೆ, ಪ್ರೇಮಿಗಳಿಗೆ ಪ್ರೇಮ ಭಂಗವಾಗಲಿದೆ. ಆರ್ಥಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾಗಲಿವೆ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ತಂದೆಯಿಂದ ಧನ ಸಹಾಯ, ಪೆಟ್ಟಾಗುವ ಸಾಧ್ಯತೆ ಎಚ್ಚರ, ಆಸೆ – ಆಕಾಂಕ್ಷೆ, ಭಾವನೆಗಳಿಗೆ ಧಕ್ಕೆ, ನಂಬಿಕಸ್ಥರಿಂದ ದ್ರೋಹ.

ಕಟಕರಾಶಿ
ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಶಾರೀರಿಕ ಸ್ವತ್ಛತೆಗೆ ಗಮನಹರಿಸ ಬೇಕಾಗುತ್ತದೆ. ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಗಳಿಗೆ ಸಕಾಲ. ಸದುಪಯೋಗಿಸಿಕೊಳ್ಳುವುದು. ಹಿರಿಯರಿಗೆ ಶ್ರೀ ದೇವರ ದರ್ಶನ ಭಾಗ್ಯವಿದೆ. ಆತುರ ನಿರ್ಧಾರದಿಂದ ಕಂಟಕ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಚರ್ಮ ಸಮಸ್ಯೆ, ಸಂತಾನದೋಷ, ಕೆಟ್ಟ ಕನಸು ಬೀಳುವುದು, ಮನಸ್ಸಿನಲ್ಲಿ ಭಯ-ಆತಂಕ.

ಸಿಂಹರಾಶಿ
ಮಿತ್ರರು-ಸಂಗಾತಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಲಿವೆ. ಬಂಧುಮಿತ್ರರ ಆಗಮನ ಸಂತಸವಾಗಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಒದಗಿಬರುತ್ತದೆ. ಹೊಸ ವಸ್ತುಗಳ ಖರೀದಿ, ಪತ್ರ ವ್ಯವಹಾರಕ್ಕೆ ಹಣವ್ಯಯ, ನಿದ್ದೆಯಲ್ಲಿ ದುಸ್ವಪ್ನಗಳು, ದೂರದ ವ್ಯಕ್ತಿಗಳಿಂದ ಅನುಕೂಲ.

ಕನ್ಯಾರಾಶಿ
ಶೀತ, ಕಫ, ಗಂಟಲು ನೋವು, ಮಾಸ ದೋಷದಿಂದ ಕಿರಿಕಿರಿ, ದೈನಂದಿನ ಬದುಕಿನಲ್ಲಿ ತುಸು ಚೇತರಿಕೆ ತರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಮರುಳಾಗದಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗಲಿದೆ. ವ್ಯಾಪಾರ – ಉದ್ಯೋಗಕ್ಕೆ ಮಿತ್ರರಿಂದ ಸಹಕಾರ, ಕೊಟ್ಟ ಸಾಲ ವಾಪಸ್ಸು ನೀಡುವರು, ಸೇವಕರು-ಕೆಲಸಗಾರರ ಕೊರತೆ ನೀಗುವುದು.

ತುಲಾರಾಶಿ
ಉದ್ಯೋಗ-ಸ್ಥಳ ಬದಲಾವಣೆಗೆ ಮನಸ್ಸು, ಉತ್ತಮ ಅವಕಾಶಗಳು ಪ್ರಾಪ್ತಿ, ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಿದ್ದರೂ ಖರ್ಚುವೆಚ್ಚಗಳನ್ನು ನಿಯಂತ್ರಿಸಬೇಕಾಗುತ್ತದೆ. ದೂರ ಸಂಚಾರದಲ್ಲಿ ಶುಭವಾರ್ತೆ. ಮಕ್ಕಳಿಂದ ಅನುಕೂಲ, ಭವಿಷ್ಯದ ಆತಂಕ, ಭಾವನೆಗಳಿಗೆ ಧಕ್ಕೆ.

ವೃಶ್ಚಿಕರಾಶಿ
ತಂದೆಯಿಂದ ನೋವು, ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾದೀತು. ಶುಭ ಕಾರ್ಯಗಳಿಗಾಗಿ ಓಡಾಟ ತರುತ್ತದೆ. ದಾಯಾದಿಗಳಿಂದ ದೂರವಿದ್ದಷ್ಟು ಉತ್ತಮವೆನ್ನಬಹುದು. ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಗುಪ್ತ ವಿಚಾರಗಳು ಬಯಲಾಗುವುದು, ಚುಚ್ಚು ಮದ್ದುಗಳಿಂದ ತೊಂದರೆ, ಕುಟುಂಬದ ಗೌರವಕ್ಕೆ ಚ್ಯುತಿ, ನರ ದೌರ್ಬಲ್ಯ, ಚರ್ಮ ಸಮಸ್ಯೆ.

ಧನಸ್ಸುರಾಶಿ
ಪಾಲುದಾರಿಕೆಯಲ್ಲಿ ಅಧಿಕ ಧನ ಸಂಪತ್ತು, ನಿಮ್ಮ ಕೋಪತಾಪ, ಉದ್ವೇಗಗಳಿಗೆ ಮನಸ್ಸನ್ನು ಕಡಿವಾಣ ಹಾಕಿ ಹಿಡಿತದಲ್ಲಿ ಇಟ್ಟು ಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು. ಅನಿರೀಕ್ಷಿತ ಉದ್ಯೊಗ ಬದಲಾವಣೆ, ಉತ್ತಮ ಅವಕಾಶ ಲಭಿಸುವುದು, ಪ್ರಯಾಣದಲ್ಲಿ ಎಚ್ಚರಿಕೆ, ಅನ್ಯರು ಮಾಡಿದ ತಪ್ಪಿಗೆ ನಿಮಗೆ ಶಿಕ್ಷೆ, ಸೋಲು, ನಷ್ಟ, ನಿರಾಸೆ ಕಾಡುವುದು.

ಮಕರರಾಶಿ
ಕುತ್ತಿಗೆ, ಸೊಂಟ ನೋವು, ಗಂಟು ಸಮಸ್ಯೆ, ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮ ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನೀವೇ ವಹಿಸಬೇಕಾಗುತ್ತದೆ. ಮಾತಾಪಿತೃಗಳ ಸಹಕಾರ ನಿಮಗಿರುತ್ತದೆ. ಸ್ನೇಹಿತರಿಂದ ಪಡೆದ ಸಾಲದಿಂದ ಅವಮಾನ, ದಾಂಪತ್ಯದಲ್ಲಿ ಸಂಶಯ, ನೀವಾಡುವ ಮಾತಿನಿಂದ ಕುಟುಂಬದಲ್ಲಿ ವೈಮನಸ್ಸು, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.

ಕುಂಭರಾಶಿ
ಸ್ವಯಂಕೃತ ಅಪರಾಧದಿಂದ ಅನಾರೋಗ್ಯ, ಸಾಂಸಾರಿಕವಾಗಿ ಪರಸ್ಪರ ಕೊಡುವ ಮನೋಭಾವನೆಯಿಂದ ಒಂದು ತರಹದ ಹೇಳಲಾಗದ ಸಮಾಧಾನ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಮಕ್ಕಳಿಂದ ಕಲಹ ಸಾಧ್ಯತೆ, ನೆರೆಹೊರೆಯವರು ಶತ್ರುಗಳಾಗುವರು, ಕೋರ್ಟ್ ಕೇಸ್‍ಗಳಿಂದ ತೊಂದರೆ, ಸಾಲ ಬಾಧೆ, ಮಾನಸಿಕ ಕಿರಿಕಿರಿ.

ಮೀನರಾಶಿ
ಮಕ್ಕಳಲ್ಲಿ ಹಠಮಾರಿತನ, ಮನಸ್ಸಿಗೆ ಬೇಸರ, ಸತ್ಯವನ್ನು ಬಿಚ್ಚು ಮಾತುಗಳಲ್ಲಿ ಹೇಳಿ ನಿಷ್ಠುರಕ್ಕೆ ಕಾರಣರಾಗದಿರಿ. ಆಗಾಗ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು. ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ.

Leave A Reply

Your email address will not be published.