ನಿತ್ಯಭವಿಷ್ಯ : 21-04-2020

0

ಮೇಷರಾಶಿ
ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಕುಂಠಿತ, ಆತ್ಮೀಯರೇ ಶತ್ರುಗಳಾಗುವರು, ಉದ್ಯಮ ರಂಗದಲ್ಲಿ ತೀವ್ರತರದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಕೆಲಸ ಕಾರ್ಯಗಳು ದೈವಾನುಗ್ರಹ ವಿಲ್ಲದೆ ನಿಧಾನ ಗತಿಯಿಂದ ನಡೆಯಲಿವೆ. ಪ್ರತಿಯೊಂದು ಕೆಲಸಗಳನ್ನು ಹಲವು ಬಾರಿ ಯೋಚಿಸಿ ಪ್ರಯತ್ನಿಸಿ. ದೇಹದಲ್ಲಿ ವಿಪರೀತ ಆಯಾಸ, ನರ, ಚರ್ಮ ಸಮಸ್ಯೆ, ವಿಪರೀತ ತಲೆ ನೋವು, ಅಶುಭ ಯೋಗ ಫಲ.

ವೃಷಭರಾಶಿ
ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲವೊಂದು ವಿಚಾರದಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲವಾದೀತು. ಆರ್ಥಿಕವಾಗಿ ಕೆಲವೊಂದು ಬೇಡಿಕೆಗಳು ಈಡೇರಲಿವೆ. ಹೊಸ ಚಿಂತನೆ, ಯೋಜನೆಗಳ ಅನುಷ್ಠಾನಕ್ಕೆ ಸದ್ಯದಲ್ಲೇ ಅವಕಾಶಗಳು ಒದಗಿ ಬರಲಿವೆ. ನೆಮ್ಮದಿ ಇಲ್ಲದ ಜೀವನ, ಸಂಸಾರದಲ್ಲಿ ವೈಮನಸ್ಸು, ಉನ್ನತ ವಿದ್ಯಾಭ್ಯಾಸದ ಚಿಂತೆ, ಆತ್ಮೀಯರು ದೂರ ಮಾಡುವರು, ಕೆಲಸದಲ್ಲಿ ಆತಂಕ ನಿರಾಸಕ್ತಿ.

ಮಿಥುನರಾಶಿ
ಕೈಗೊಂಡ ಕಾರ್ಯಗಳಲ್ಲಿ ಆತಂಕಗಳು ಕಂಡು ಬಂದರೂ ಪ್ರಯತ್ನ ಬಲ ನಿಮಗೆ ಸಾಧಕವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ನಿರೀಕ್ಷಿತ ಫ‌ಲಿತಾಂಶವು ಸಿಗಲಿದೆ. ರಾಹು ಪ್ರತಿಕೂಲವಾಗಿದ್ದು ಆರೋಗ್ಯದ ಜಾಗ್ರತೆ ವಹಿಸಿರಿ. ಶತ್ರುಗಳ ಕಾಟ ಹೆಚ್ಚಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ, ರೋಗ ಬಾಧೆ, ಅಧಿಕವಾದ ಉಷ್ಣ, ಮಾಟ-ಮಂತ್ರ ತಂತ್ರದಿಂದ ಆತಂಕ, ದಿನಾಂತ್ಯದಲ್ಲಿ ಅಲ್ಪ ನೆಮ್ಮದಿಯ ಭಾವನೆ.

ಕಟಕರಾಶಿ
ಕುಟುಂಬಕ್ಕಾಗಿ ಅಧಿಕ ಖರ್ಚು, ಆರ್ಥಿಕವಾಗಿ ಸಾಲಬಾಧೆ, ಮನಕ್ಲೇಶ, ಧನವ್ಯಯದಿಂದಾಗಿ ಮಾನಸಿಕ ಕಿರಿಕಿರಿ ತಪ್ಪಲಾರದು. ಆತ್ಮೀಯರೊಂದಿಗೆ ಕಲಹ, ನಿಷ್ಠೂರ, ದುಡುಕಿನಿಂದ ಸಾಂಸಾರಿಕ ಜೀವನಕ್ಕೆ ಸಮಸ್ಯೆಯಾದೀತು. ನವದಂಪತಿಗಳಿಗೆ ಕಿರಿಕಿರಿ ಇದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಅನಾರೋಗ್ಯ ಕಾಡುವುದು, ವಿದ್ಯಾಭ್ಯಾಸ ಮುಂದುವರೆಸಲು ಅಡೆತಡೆ, ಸ್ತ್ರೀಯರ ವಿಚಾರದಲ್ಲಿ ಎಚ್ಚರ ಅನಾನುಕೂಲ, ಬಂಧುಗಳಲ್ಲಿ ಮನಃಸ್ತಾಪ.

ಸಿಂಹರಾಶಿ
ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಸ್ವೀಕರಿಸುವಂತಾದೀತು. ಲಾಭಸ್ಥಾನಗತನಾದ ಶನಿಯು ಕೆಲವೊಂದು ಅನುಕೂಲವನ್ನು ಮಾಡಿಕೊಡಲಿದ್ದಾನೆ. ಮುಖ್ಯವಾಗಿ ಆರ್ಥಿಕ ದೃಢತೆ ಕಾರ್ಯಸಾಧನೆಗೆ ಅನುಕೂಲವಾದೀತು. ಮನೆಯಲ್ಲಿ ವೈಮನಸ್ಸು, ಕಲಹ, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ದೇಹದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು, ಆತುರ ಸ್ವಭಾವದಿಂದ ಕಾರ್ಯದಲ್ಲಿ ಹಿನ್ನಡೆ.

ಕನ್ಯಾರಾಶಿ
ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಮನಸ್ಸಿಗೆ ಬೇಸರ, ಯಾವುದೇ ಕೆಲಸವನ್ನು ಯೋಚಿಸಿ, ಚಿಂತಿಸಿ ಮಾಡಬೇಕಾಗುತ್ತದೆ. ಸಾಂಸಾರಿಕವಾಗಿ ಬಂಧುಮಿತ್ರರು ಹಿತಶತ್ರುಗಳಾದರು. ಆರ್ಥಿಕವಾಗಿ ಹಣದ ಅಡಚಣೆ ಕಾರ್ಯಸಾಧನೆಗೆ ಅಡ್ಡಿಯಾದೀತು. ದಿನಾಂತ್ಯ ಶುಭವಿದೆ. ಆತಂಕ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ ಹೆಚ್ಚಾಗುವುದು, ವಿಪರೀತ ಹಣ ಖರ್ಚು, ಆಕಸ್ಮಿಕ ಸಮಸ್ಯೆ ಎದುರಾಗುವುದು, ಕೇಸ್ ದಾಖಲಾಗುವ ಸಾಧ್ಯತೆ.

ತುಲಾರಾಶಿ
ಕೆಲವೊಂದು ಮೂಲಗಳಿಂದ ಉತ್ತಮ ಆದಾಯವು ಕೈಸೇರಲಿದೆ. ಉದ್ಯೋಗ ರಂಗದಲ್ಲಿ ಬದಲಾವಣೆಗಳಿಗೆ ಅವಕಾಶಗಳಿರುತ್ತವೆ. ವಾಹನಗಳಿಂದ, ಯಂತ್ರಗಳಿಂದ ದೂರವಿದ್ದಷ್ಟು ಉತ್ತಮ. ದಿನಾಂತ್ಯ ಅತಿಥಿಗಳು ಬಂದಾರು. ಮಕ್ಕಳ ವಿಚಾರವಾಗಿ ಚಿಂತೆ, ಕುಟುಂಬದಲ್ಲಿ ವಾಗ್ವಾದ, ಹಣಕಾಸು ವಿಚಾರದಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ಸ್ನೇಹಿತರೊಂದಿಗೆ ದೂರ ಪ್ರಯಾಣ.

ವೃಶ್ಚಿಕರಾಶಿ
ಕೆಲಸ ಕಾರ್ಯದಲ್ಲಿ ಜಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಉದ್ಯೋಗ ರಂಗದಲ್ಲಿ ಮುಂಭಡ್ತಿ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಮಾನಸಿಕವಾಗಿ ತುಸು ಸಮಾಧಾನ ತಂದುಕೊಡಲಿದೆ. ವ್ಯರ್ಥವಾದ ಅಲೆದಾಟದಿಂದ ಧನಹಾನಿಯಾದೀತು. ವಾಹನ ಖರೀದಿಯ ಯೋಗವಿದೆ. ಒಂಟಿತನ ಬಯಸುವಿರಿ, ಮಿತ್ರರಿಂದ ಅನುಕೂಲ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಆತಂಕ-ವ್ಯಥೆ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಇಂದು ಸಾಧಾರಣ ಫಲ.

ಧನಸ್ಸುರಾಶಿ
ಗೃಹದಲ್ಲಿ ಶುಭ ಕಾರ್ಯದ ಚಿಂತನೆ ನಡೆಯಲಿದೆ. ಧನವ್ಯಯವಿದ್ದರೂ ಧಾನಾಗಮನಕ್ಕೆ ತೊಂದರೆ ಇರದು. ಉದರ ಸಂಬಂಧಿ ವ್ಯಾಧಿಗಳು ತೋರಿಬರದಂತೆ ಜಾಗ್ರತೆ ವಹಿಸಿರಿ. ಹತ್ತಿರದ ನೆಂಟರಿಂದ ಸಹಕಾರ ಸಿಗಲಿದೆ. ನೆರೆಹೊರೆ, ಬಂಧುಗಳಿಂದ ನಿಂದನೆ, ಸ್ವಾಭಿಮಾನಕ್ಕೆ ಧಕ್ಕೆಯಾಗುವುದು, ಮಕ್ಕಳಲ್ಲಿ ಚಟುವಟಿಕೆ ಕಡಿಮೆ, ಹಣಕಾಸು ವಿಚಾರದಲ್ಲಿ ಮೋಸ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆತ್ಮೀಯ ಮಿತ್ರರು ದೂರವಾಗುವರು.

ಮಕರರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಸಮಸ್ಯೆ, ರ್ಥಿಕವಾಗಿ ವಿವಿಧ ಮೂಲಗಳಿಂದ ಧನಾಗಮನಕ್ಕೆ ಪ್ರಯತ್ನಿಸಬೇಕಾದೀತು. ಶನಿಯು ವ್ಯಯಕಾರನಾದರೂ ಸ್ವಕ್ಷೇತ್ರಾಧಿಪತಿಯಾದ ಕಾರಣ ಕೆಲವೊಂದು ಅನುಕೂಲವನ್ನು ಮಾಡಿಕೊಟ್ಟಾನು. ದಂಪತಿಗಳಿಗೆ ಶುಭ ವಾರ್ತೆ. ನೆಮ್ಮದಿ ಇಲ್ಲದ ಜೀವನ, ಕುಟುಂಬದಲ್ಲಿ ಅಶಾಂತಿ ವಾತಾವರಣ, ಬುದ್ಧಿ ಮಂದತ್ವ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹ, ಅವಿವಾಹಿತರಿಗೆ ಕಂಕಣ ಭಾಗ್ಯ.

ಕುಂಭರಾಶಿ
ಕುಟುಂಬದಲ್ಲಿ ಕಲಹ, ಅಶಾಂತಿ, ಮಾಟ ಮಂತ್ರದ ಭೀತಿ, ಯಂತ್ರ ಹಾಗೂ ವಾಹನದಿಂದ ಅಪಾಯದ ಸಾಧ್ಯತೆ ಇದೆ. ಸಾಂಸಾರಿಕವಾಗಿ ಅನಾವಶ್ಯಕ ಕಿರಿಕಿರಿಯನ್ನು ಅನುಭವಿಸಿಸಲಿದ್ದೀರಿ. ಆಹಾರ, ನೀರಿನ ಬಗ್ಗೆ ವಿಶೇಷ ಜಾಗ್ರತೆ ವಹಿಸಿದ್ದಲ್ಲಿ ಒಳ್ಳೆಯದು. ಜಾಗ್ರತೆ ವಹಿಸಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ಈ ದಿನ ಮಿಶ್ರ ಫಲ ಯೋಗ.

ಮೀನರಾಶಿ
ಹಂತ ಹಂತವಾಗಿ ಕಾರ್ಯಸಾಧನೆಯಾಗಲಿದೆ. ಸಾಂಸಾರಿಕವಾಗಿ ನೆಮ್ಮದಿ ಇಲ್ಲವಾದರೂ ಸಮಾಧಾನದಿಂದ ಮುನ್ನಡೆದಲ್ಲಿ ಉತ್ತಮ. ಮಕ್ಕಳಿಂದ ಸಮಾಧಾನ ಸಿಗಲಿದೆ. ಶ್ರೀದೇವರ ಅನುಗ್ರಹಕ್ಕಾಗಿ ಖರ್ಚು ತಂದೀತು. ದಾಂಪತ್ಯದಲ್ಲಿ ವೈಮನಸ್ಸು, ಸ್ಥಿರಾಸ್ತಿ ಯೋಗ, ವಾಹನ ಚಾಲನೆಯಲ್ಲಿ ಎಚ್ಚರ, ವ್ಯವಹಾರದಲ್ಲಿ ಅನುಕೂಲ, ಹಣಕಾಸು ಲಾಭ, ನೆಮ್ಮದಿಯ ದಿನ ನಿಮ್ಮದಾಗುವುದು.

Leave A Reply

Your email address will not be published.