ನಿತ್ಯಭವಿಷ್ಯ -07-04-2020

0

ಮೇಷರಾಶಿ
ಸತಿಪತಿಗಳ ಸಾಮರಸದಿಂದ ಗೃಹ ಸ್ವರ್ಗವೆನಿಸಲಿದೆ. ಯತ್ನ ಕಾರ್ಯಗಳಲ್ಲಿ ಜಯ, ಆತ್ಮೀಯರೊಂದಿಗೆ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ. ಮಕ್ಕಳಿಗೆ ಕಫ‌ ಬಾಧೆ ಸಮಸ್ಯೆ ತಂದೀತು. ದೂರದೃಷ್ಟಿಯಿಂದ ಅವಘಡವೊಂದು ತಪ್ಪಲಿದೆ. ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ
ಸ್ವಲ್ಪ ಪ್ರಯತ್ನದಿಂದ ಉತ್ತಮ ಫಲ, ಮಾನಸಿಕ ನೆಮ್ಮದಿ, ಪರರ ಮಾತಿಗೆ ಕಿವಿಗೊಡಬೇಡಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸಾಂಸಾರಿಕವಾಗಿ ಮದುವೆಯ ಪ್ರಸಾವಗಳು ಗರಿಗೆದರೀತು. ಗೃಹಿಣಿಯ ಆಕಾಂಕ್ಷೆಗಳು ಹಂತ ಹಂತವಾಗಿ ನೆರೆವೇರುತ್ತದೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಬೇಕು.

ಮಿಥುನರಾಶಿ
ಪ್ರವಾಸ ಕೈಗೊಳ್ಳಲು ಇದು ಸಕಾಲವಲ್ಲ ಹಿರಿಯರಿಗೆ ಆರೋಗ್ಯದ ಏರುಪೇರು ಕಾಣಿಸ ಬಹುದು. ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ, ಸ್ವಂತ ಉದ್ಯಮಸ್ಥರಿಗೆ ಅನುಕೂಲ, ಹಣಕಾಸು ಲಾಭ, ವಿವಾಹ ಯೋಗ, ಆರೋಗ್ಯದಲ್ಲಿ ಚೇತರಿಕೆ. ಆದುದರಿಂದ ಮುಖ್ಯವಾಗಿ ವಿವೇಚನೆಯಿಂದ ಕಾರ್ಯ ಸಾಧಿಸುವುದು ಅಗತ್ಯ

ಕಟಕರಾಶಿ
ಯಂತ್ರ ಜೀವಿಗಳಿಗೆ ಕ್ಷೇಶ ಹೆಚ್ಚು. ವಾದ-ವಿವಾದಗಳಿಂದ ದೂರವಿರಿ, ಋಣ ಬಾಧೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಪ್ರೀತಿ. ಸಂಚಾರ ದಿಂದ ಕ್ಷೇಶ ತೋರಿಬರುತ್ತದೆ. ಕಾರ್ಯ ಒತ್ತಡದಿಂದ ಮನಸ್ಸಿಗೆ ಕೋಪ ತಾಪಗಳು ಅಧಿಕವಾದೀತು. ದಿನಾಂತ್ಯ ಶುಭ ವಾರ್ತೆ ಇದೆ.

ಸಿಂಹರಾಶಿ
ಮಾತಿನಲ್ಲಿ ಸಂಯಮವಿರಲಿ. ಅಧಿಕಾರಿಗಳು ವೃತ್ತಿರಂಗದಲ್ಲಿ$ ಬದಲಾವಣೆಯನ್ನು ಬಯಸಲಿದ್ದಾರೆ.ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಯರಿಗೆ ಸೌಖ್ಯ, ಇಲ್ಲ ಸಲ್ಲದ ಅಪವಾದ, ಸ್ಥಳ ಬದಲಾವಣೆ. ರಿಪೇರಿ ಕೆಲಸ ಕಾರ್ಯಗಳಿಗಾಗಿ ಧನ ವ್ಯಯವಾಗಲಿದೆ ಸಂಚಾರದಲ್ಲಿ ಜಾಗ್ರತೆ.

ಕನ್ಯಾರಾಶಿ
ಯೋಚಿಸಿ ನಿರ್ಧಾರ ಕೈಗೊಳ್ಳಿ, ಮಕ್ಕಳಿಂದ ಶುಭ ಸುದ್ದಿ, ಶತ್ರುಗಳ ಬಾಧೆ, ಶೀತ ಸಂಬಂಧಿತ ರೋಗ.ಪರಿಹಾರ: ಅಂಧ ಮಕ್ಕಳಿಗೆ ಅನ್ನದಾನ ಮಾಡಿ. ಸರಕಾರಿ ಕಾರ್ಯಕರ್ತರಿಗೆ ಯೋಗ್ಯ ಪುರಸ್ಕಾರ ದೊರಕೀತು. ಸಾಂಸಾರಿಕವಾಗಿ ಸಣ್ಣ ಪುಟ್ಟ ವಿಚಾರದಲ್ಲಿ ಮನಸ್ತಾಪವಾದೀತು. ಅವಿವಾಹಿತರಿಗೆ ವಿವಾಹ ಯೋಗದ ಸಾಧ್ಯತೆ ಕಂಡು ಬರುತ್ತದೆ.

ತುಲಾರಾಶಿ
ಸಾಂಸಾರಿಕವಾಗಿ ಬಂಧುಗಳು, ಮಿತ್ರರು, ಧನಸಹಾಯವನ್ನು ನೀಡಿಯಾರು. ಅಧಿಕ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ. ಪರಿಹಾರ: ದುರ್ಗಾ ಸಪ್ತಶತಿ ಪಾರಾಯಣ ಮಾಡಿ. ಸರಕಾರಿ ಕೆಲಸ ಕಾರ್ಯಗಳು ಶೀಘ್ರವಾಗಿ ಮುಗಿಯಲಿದೆ. ಕಾರ್ಮಿಕರ ಅಲಕ್ಷ್ಯದಿಂದಾಗಿ ಸಮಸ್ಯೆಗಳು ಕಂಡು ಬಂದಾವು.

ವೃಶ್ಚಿಕರಾಶಿ
ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಬಡ ವಿದ್ಯಾರ್ಥಿಗಳಿಗೆ ಅನುಕೂಲ, ಆರ್ಥಿಕ ನೆರವು, ಮಾನಸಿಕ ನೆಮ್ಮದಿ. ಧರ್ಮ ಕಾರ್ಯಗಳಲ್ಲಿ ಧನವ್ಯಯ ಕಂಡುಬಂದೀತು. ನಿರುದ್ಯೋಗಿಗಳಿಗೆ ಉದ್ಯೋಗದ ಸಮಸ್ಯೆ ತೋರಿಬರಲಿದೆ. ಆರ್ಥಿಕ ಅಡಚಣೆ ಕಡಿಯಾದರೂ ಅತೀ ಹೆಚ್ಚಿನ ಜಾಗ್ರತಿ ವಹಿಸುವುದು ಅಗತ್ಯ.

ಧನುರಾಶಿ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಧಿಕವಾದ ಖರ್ಚು, ಆತ್ಮೀಯರ ಭೇಟಿ. ದೀರ್ಘ‌ಕಾಲದ ಕೆಲಸಕಾರ್ಯಗಳು ಸ್ಥಗಿತಗೊಳ್ಳಲಿದೆ. ಕೆಲಸಗಾರರಿಗೆ ವರ್ಗಾವಣೆಯ ಯೋಗ ತಂದೀತು. ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಂಡು ಬರಲಿದೆ. ಹಾಲು, ಹೈನು ವ್ಯವಹಾರದಲ್ಲಿ ನಷ್ಟವಾದೀತು.

ಮಕರರಾಶಿ
ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಸಮಾಧಾನ ಸಿಗಲಾರದು. ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ವಿರೋಧಿಗಳಿಂದ ತೊಂದರೆ. ಧನ ವಿನಿಯೋಗ ಅಧಿಕವಾಗಿ ತೋರಿಬರುವುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಸಂಚಾರದಲ್ಲಿ ಜಾಗ್ರತೆ.

ಕುಂಭರಾಶಿ
ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಾಧಾರಣ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಮಾನಸಿಕ ವ್ಯಥೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ. ಆಗಾಗ ಅಜೀರ್ಣದ ಸಮಸ್ಯೆಗಳು ಕಂಡು ಬರುತ್ತದೆ. ಮೇಲಧಿಕಾರಿಗಳಿಗೆ ಜವಾಬ್ದಾರಿಯು ಹೆಚ್ಚಲಿದೆ. ರೈತಾಪಿ ಜನರಿಗೆ ಕಾಯುವಂತಾದೀತು. ದೇವತಾ ಕಾರ್ಯಗಳ ಚಿಂತನೆಯು ನಡೆಯಲಿದೆ.

ಮೀನರಾಶಿ
ಸಾಂಸಾರಿಕವಾಗಿ ಮಾನಸಿಕ ಉದ್ವೇಗ ಹೆಚ್ಚಲಿದೆ. ಆತುರ ಸ್ವಭಾವದಿಂದ ಎಡವಟ್ಟು, ದೂರದ ಆಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಉಪದೇಶ, ಸಲಹೆ. ಕ್ರಯ ವಿಕ್ರಯಗಳಲ್ಲಿ ನಿರೀಕ್ಷಿತ ಲಾಭವಿರದು. ದುಡುಕು ವರ್ತನೆಯಿಂದ ಕಾರ್ಯ ಹಾನಿಯಾಗದಂತೆ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ.

Leave A Reply

Your email address will not be published.