ನಿತ್ಯಭವಿಷ್ಯ : 25-04-2020

0

ಮೇಷರಾಶಿ
ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿಲ್ಲವಾದರೂ ನಷ್ಟವಾಗದು. ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವಿರುತ್ತದೆ. ಕೆಲವೊಂದು ಉತ್ತಮ ಅವಕಾಶಗಳು ನಿರುದ್ಯೋಗಿಗಳಿಗೆ ಒದಗಿಬರುತ್ತವೆ. ಮಕ್ಕಳಲ್ಲಿ ಮಂದತ್ವ, ನೋವು ನಷ್ಟ ನಿರಾಸೆ, ಆಸೆ-ಆಕಾಂಕ್ಷೆಗಳಿಗೆ ಧಕ್ಕೆ, ದುಶ್ಚಟಗಳಿಂದ ನಷ್ಟ.

ವೃಷಭರಾಶಿ
ಪಿತ್ರಾರ್ಜಿತ ಆಸ್ತಿಯಿಂದ ಲಾಭ, ನಿಮ್ಮ ಸಾಮರ್ಥ್ಯದ ಬಗ್ಗೆ ಉತ್ತಮ ಅವಕಾಶಗಳು ಗೋಚರಕ್ಕೆ ಬರುತ್ತವೆ. ಆಕಸ್ಮಿಕ ಧನಾಗಮನದಿಂದ ಕಾರ್ಯಸಾಧನೆಯಾಗಲಿದೆ. ನೀವು ನಡೆಸುವ ಪ್ರಯತ್ನಬಲದಿಂದ ವಿಮುಖರಾಗದಿರಿ ಜಾಗ್ರತೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ವಾಹನ ಖರೀದಿಗೆ ಮನಸ್ಸು, ಗೃಹ ನಿರ್ಮಾಣಕ್ಕೆ ಚಿಂತನೆ, ಉದ್ಯೋಗದಲ್ಲಿ ಅನುಕೂಲ, ತಂದೆಯಿಂದ ಲಾಭ, ಬಂಧುಗಳಿಂದ ಉತ್ತಮ ಸಹಕಾರ.

ಮಿಥುನರಾಶಿ
ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕವಾಗಿ ತೊಡಕುಗಳು ಕಂಡುಬಂದಾವು. ಯಾವುದೇ ಕೆಲಸ ಕಾರ್ಯಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆಯಿಂದ ವರ್ತಿಸುವುದು. ಹಣಕಾಸು ಹಿನ್ನಡೆ, ದೂರ ಪ್ರಯಾಣ, ರಾಜಕೀಯ-ಸರ್ಕಾರಿ ಅಧಿಕಾರಿಗಳ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸ್ಥಳ ಬದಲಾವಣೆಯ ಆಲೋಚನೆ, ಪಿತ್ತ ಬಾಧೆ, ತಲೆ ನೋವು, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಿತ್ರರು-ಬಂಧುಗಳಿಂದ ಲಾಭ ನಿರೀಕ್ಷೆ.

ಕಟಕರಾಶಿ
ಸ್ವಂತ ವ್ಯಾಪಾರದಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಸಮಸ್ಯೆ, ಗೆಳೆಯರ ವರ್ತನೆ ತಲೆಗೆಡಿಸುವಂತಾದೀತು ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಪವಾದವನ್ನು ಅನು ಭವಿಸಬೇಕಾದೀತು. ನಿರುದ್ಯೋಗಿಗಳು ಕೊರಗುತ್ತಾ ಕೂರದೆ ಹೆಚ್ಚಿನ ಪ್ರಯತ್ನಬಲ ಹಾಕಬೇಕಾಗುತ್ತದೆ. ಸರ್ಕಾರದಿಂದ ತೊಂದರೆ ಸಾಧ್ಯತೆ, ರಾಜಕೀಯ ವ್ಯಕ್ತಿಗಳಲ್ಲಿ ಮನಃಸ್ತಾಪ, ತಂದೆಯೊಂದಿಗೆ ವೈಮನಸ್ಸು, ಶೀತ- ಕಫ ಬಾಧೆ, ಉದ್ಯೋಗ ಸ್ಥಳದಲ್ಲಿ ಶತ್ರಕಾಟ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ.

ಸಿಂಹರಾಶಿ
ಪಿತ್ತ, ಗ್ಯಾಸ್ಟ್ರಿಕ್, ಉದರ ಬಾಧೆ, ಶತ್ರುಗಳು-ಸಾಲಗಾರರಿಂದ ತೊಂದರೆ, ಮಕ್ಕಳೊಂದಿಗೆ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಾಂಸಾರಿಕವಾಗಿ ಕಿರಿಕಿರಿ ತಪ್ಪಲಾರದು. ವೃತ್ತಿರಂಗದಲ್ಲಿ ಕಳೆದುಕೊಂಡ ಅವಕಾಶವನ್ನು ಪುನಃ ಪಡೆಯುವಿರಿ. ಆರ್ಥಿಕವಾಗಿ ಚೇತರಿಕೆ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಮಂದತ್ವ, ಮರೆವು, ಕಲಹ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆಸೆ-ಆಕಾಂಕ್ಷೆಗಳು ಹೆಚ್ಚು.

ಕನ್ಯಾರಾಶಿ
ವಿದ್ಯಾಭ್ಯಾಸದಲ್ಲಿ ಒತ್ತಡ, ಮಿತ್ರರಿಂದ ನಷ್ಟ, ತಂದೆಯಿಂದ ಲಾಭ, ಆರ್ಥಿಕವಾಗಿ ಹೆಚ್ಚಿನ ಖರ್ಚುವೆಚ್ಚ ಕಂಡು ಬಂದೀತು. ಯಾವುದೇ ಕೆಲಸ ಮಾಡುವ ಮೊದಲು ಯೋಚಿಸಿ ಮುನ್ನಡೆಯುವ ಅಗತ್ಯವಿದೆ. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ಮುನ್ನಡೆಯಲಿವೆ. ಸಂಗಾತಿಯಲ್ಲಿ ಅಹಂಭಾವದ ನಡವಳಿಕೆ, ಪಾಲುದಾರಿಕೆಯಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಸೋಲು, ನಷ್ಟ, ನಿರಾಸೆ, ಉದ್ಯೋಗದಲ್ಲಿ ಒತ್ತಡ, ಚಿಂತೆಯಿಂದ ನಿದ್ರಾಭಂಗ, ನೀವಾಡುವ ಮಾತಿನಿಂದ ತೊಂದರೆ.

ತುಲಾರಾಶಿ
ಉದ್ಯೋಗದಲ್ಲಿ ಪ್ರಗತಿ, ಸ್ಥಳ ಬದಲಾವಣೆಯಿಂದ ಅನುಕೂಲ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಭಾವನೆಗಳಿಗೆ ನಿರಾಸೆಯಾಗುವ ಕಾಲವಿದು ಹಾಗೂ ಬೇಜವಾಬ್ದಾರಿಯ, ಗೊತ್ತುಗುರಿಯಿಲ್ಲದ ಕೆಲಸಕಾರ್ಯಗಳು ಹೆಚ್ಚಿನ ಸಮಸ್ಯೆಗಳನ್ನು ತಂದುಕೊಡಲಿವೆ. ಅಸಡ್ಡೆ ಮಾಡದಿರಿ. ಕೆಲಸಗಾರರ ಕೊರತೆ ನಿವಾರಣೆ, ದಾಯಾದಿಗಳಿಂದ ಕಿರಿಕಿರಿ, ಬಂಧುಗಳು-ಸೊಸೆಯಿಂದ ನೋವು, ಸಂಗಾತಿಯಲ್ಲಿ ಅಹಂಭಾವ ನಡವಳಿಕೆ.

ವೃಶ್ಚಿಕ
ಉದ್ಯೋಗಾವಕಾಶದಲ್ಲಿ ಹಿನ್ನಡೆ, ಸಂಗಾತಿಯಿಂದ ಅನುಕೂಲ, ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಫ‌ಲ ಸಿಗಲಿದೆ. ಭವಿಷ್ಯಕ್ಕೆ ಉತ್ತಮ ಯೋಜನೆ ರೂಪಿಸಲು ಇದು ಸಕಾಲ. ಧನ ಸಂಗ್ರಹ ನಿಮಗೆ ಲಾಭಕರವಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸದಲ್ಲಿ ಒತ್ತಡ, ಮಾತಿನಿಂದ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಶತ್ರುಗಳು ದಮನ, ಉದ್ಯೋಗದಲ್ಲಿ ಹಿಂಬಡ್ತಿ.

ನಸ್ಸುರಾಶಿ
ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ರಕ್ತ ಸಂಬಂಧಿಗಳಲ್ಲಿ ಮನಃಸ್ತಾಪ, ತಂದೆಯ ನಡವಳಿಕೆಯಲ್ಲಿ ಬದಲಾವಣೆ, ಸಾಂಸಾರಿಕವಾಗಿ ಸಂತಸದ ವಾತಾವರಣವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಉತ್ತಮ ಫ‌ಲಸಿಗಲಿದೆ. ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದಾಗಿ ಕಾರ್ಯಸಾಧನೆಗೆ ಅಡ್ಡಿಯಾಗಲಿದೆ. ಪ್ರಯಾಣದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಭವಿಷ್ಯದ ಚಿಂತೆಯಿಂದ ಬೇಸರ, ವಾಹನದಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ತ, ಉಷ್ಣ ಬಾಧೆ.

ಕರರಾಶಿ
ಆಕಸ್ಮಿಕ ದೂರ ಪ್ರಯಾಣ, ಆರೋಗ್ಯ ವ್ಯತ್ಯಾಸದಿಂದ ವಿಶ್ರಾಂತಿ ಬಯಸುವಿರಿ, ಆಶಾವಾದಿಗಳಾಗಿ ಭರವಸೆಯಿಂದ ಮುಂದುವರಿಯಿರಿ. ರಾಜಕೀಯ ವರ್ಗದವರು ತಾವೇ ಆತ್ಮವಿಮರ್ಶೆ ಮಾಡಬೇಕಾದೀತು. ನಿಮ್ಮ ಸಕಾಲದ ಸ್ಫೂರ್ತಿಯಿಂದ ಕೆಲಸಕಾರ್ಯಗಳು ಮುನ್ನಡೆಯಲಿವೆ. ಪ್ರಯಾಣದಲ್ಲಿ ಎಚ್ಚರಿಕೆ, ಬಂಧುಗಳಿಂದ ತೊಂದರೆ, ಕಾರಣವಿಲ್ಲದೇ ಸ್ಥಿರಾಸ್ತಿ ತಗಾದೆ, ದಾಂಪತ್ಯದಲ್ಲಿ ವೈಮನಸ್ಸು, ಮಾನಸಿಕ ಒತ್ತಡ, ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ.

ಕುಂಭರಾಶಿ
ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಅನಾವಶ್ಯಕವಾಗಿ ಹೆಚ್ಚಿನ ಯೋಚನೆಯಲ್ಲೇ ಮಗ್ನರಾಗುತ್ತೀರಿ. ಹೊಸಬರ ಬಗ್ಗೆ ಜಾಗ್ರತೆ ವಹಿಸಿರಿ. ಅನಿರೀಕ್ಷಿತ ರೂಪದಲ್ಲಿ ಹಳೆಯ ಮಿತ್ರರ ಭೇಟಿಯಾದೀತು. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ಮಾತೃವಿನಿಂದ ಮನಃಸ್ತಾಪ-ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಸರ್ಕಾರಿಂದ ಸಂಪೂರ್ಣ ಸಹಕಾರ, ಪತ್ರ ವ್ಯವಹಾರಗಳಲ್ಲಿ ಜಯ.

ಮೀನರಾಶಿ
ವೃತ್ತಿರಂಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ. ಯೋಗ್ಯ ವಯಸ್ಕರಿಗೆ ಯೋಗ್ಯ ಸಂಬಂಧಗಳು ಕೂಡಿ ಬರುವ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ಕೆಲವೊಮ್ಮೆ ವಿಷವೂ ಅಮೃತವಾದೀತು. ಅಧಿಕ ಉಷ್ಣ, ಪಿತ್ತ ಬಾಧೆ, ಬೆನ್ನು ನೋವು, ವಿಪರೀತ ಆಯಾಸ, ಶತ್ರುಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ತಂದೆಯ ಬಂಧುಗಳಿಂದ ಬೇಸರ, ಮಕ್ಕಳಲ್ಲಿ ಪ್ರಗತಿ-ಬುದ್ಧಿಮಾತು, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ.

Leave A Reply

Your email address will not be published.