ನಿತ್ಯಭವಿಷ್ಯ : 22-06-2020

0

ಮೇಷರಾಶಿ
ಸ್ನೇಹಿತರಿಂದ ಸಹಾಯ, ಹಣಕಾಸು ವಿಚಾರದಲ್ಲಿ ಎಚ್ಚರ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿ ಖರೀದಿ ಯೋಗ. ಸಾಮಾಜಿಕವಾಗಿ ನಿಮ್ಮ ಗೌರವ, ಪ್ರತಿಷ್ಠೆಗೆ ಧಕ್ಕೆ ತರಲಿದೆ. ಉದರ ಸಂಬಂಧಿ ಸಮಸ್ಯೆ ಬಂದೀತು. ರಾಜಕೀಯ ವರ್ಗದವರಿಗೆ ಮನಸ್ಸು ಸ್ಥಿರವಿರಲಾರದು. ಜೋಪಾನವಾಗಿರಿ.

ವೃಷಭರಾಶಿ
ಕಾರ್ಯರಂಗದಲ್ಲಿ ಶತ್ರುಗಳ ಹಿನ್ನಡೆ ತೋರಿಬಂದರೂ ನಮ್ಮ ಜಾಗ್ರತೆ ನಾವು ಮಾಡಬೇಕು. ಮಹಿಳೆಯರಿಗೆ ಶುಭ ದಿನ, ಸಾಲಗಳಿಂದ ದೂರು ಉಳಿಯುವುದು ಉತ್ತಮ, ಕೆಲಸದಲ್ಲಿ ಅಧಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು, ನೆಮ್ಮದಿ ಇಲ್ಲದ ಜೀವನ. ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಅವಕಾಶಗಳು ದೊರಕಲಿವೆ. ಅನ್ಯರ ಮಾತಿನಿಂದ ತಪ್ಪು ಅಭಿಪ್ರಾಯ ಬಂದೀತು.

ಮಿಥುನರಾಶಿ
ನಿರೀಕ್ಷಿತ ಕೆಲಸ ಕಾರ್ಯಗಳು ನಿಮ್ಮಿಚ್ಛೆಯಂತೆ ನಡೆಯಲಾರವು. ಶ್ರಮಕ್ಕೆ ತಕ್ಕ ಫಲ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ, ಹಿತ ಶತ್ರುಗಳಲ್ಲಿ ತೊಂದರೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವಾಸಸ್ಥಳದ ಬದಲಾವಣೆಯ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉತ್ಸಾಹಹೀನರಾದಾರು.

ಕಟಕರಾಶಿ
ಗುರು ಹಿರಿಯರ ಭೇಟಿ, ಸಾಧಾರಣ ಲಾಭ, ಸಣ್ಣ ಮಾತಿನಿಂದ ಕಲಹ, ಭವಿಷ್ಯದ ಆಲೋಚನೆ, ಆದಾಯ ಕಡಿಮೆ, ಅಧಿಕವಾದ ಖರ್ಚು. ಪ್ರವಾಸ ಯೋಗದಿಂದ ಕಾರ್ಯಸಾಧನೆ ಯಾಗಲಿದೆ. ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧ ಗಳು ಕಂಕಣಬಲವನ್ನು ಒದಗಿಸಿಕೊಡಲಿವೆ. ಸಾಮಾಜಿಕವಾಗಿ ನಿಮ್ಮ ಕ್ರಿಯಾಶೀಲಕ್ಕೆ ಪ್ರಶಂಸೆ ಸಲ್ಲಲಿದೆ.

ಸಿಂಹರಾಶಿ
ವಿದ್ಯಾರ್ಥಿಗಳ ಕೌಶಲಕ್ಕೆ ಉತ್ತಮ ಫ‌ಲಿತಾಂಶ ಹಾಗೂ ಅವಕಾಶಗಳು ಒದಗಿ ಬಂದಾವು. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ಹಣಕಾಸು ನಷ್ಟ, ನಂಬಿಕಸ್ಥರಿಂದ ಮೋಸ, ಮಕ್ಕಳಿಂದ ನೆಮ್ಮದಿ ಲಭಿಸುವುದು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ನೂತನ ವ್ಯಾಪಾರ, ವ್ಯವಹಾರಗಳನ್ನು ನಡೆಸಿಕೊಂಡು ಹೋಗಲು ದೈವಾನುಗ್ರಹವು ನಿಮ್ಮನ್ನು ಪ್ರೇರೇಪಿಸಲಿದೆ.

ಕನ್ಯಾರಾಶಿ
ಧನಾದಾಯವು ಉತ್ತಮವಿದ್ದರೂ ಅನಿರೀಕ್ಷಿತ ಖರ್ಚುವೆಚ್ಚಗಳಿಂದ ಆತಂಕಕ್ಕೆ ಕಾರಣವಾದೀತು. ಪರರಿಂದ ಸಹಾಯ, ಮನಸ್ಸಿನಲ್ಲಿ ಗೊಂದಲ, ವಿದೇಶ ಪ್ರಯಾಣ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ. ವ್ಯಾಪಾರಿ ವರ್ಗದವರು ತಮ್ಮ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಜಾಗ್ರತೆ ಇರಲಿ.

ತುಲಾರಾಶಿ
ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಅಲ್ಪ ಕಾರ್ಯ ಸಿದ್ಧಿ, ನೀವಾಡುವ ಮಾತಿನಿಂದ ಅನರ್ಥ, ನಾನಾ ರೀತಿಯ ತೊಂದರೆ, ವೃಥಾ ತಿರುಗಾಟ. ವೃತ್ತಿರಂಗದಲ್ಲಿ ನೆಮ್ಮದಿ ಕಡಿಮೆಯಾಗಲಿದೆ. ಆರೋಗ್ಯಕ್ಕೆ ಆಗಾಗ ತಪಾಸಣೆ ಅಗತ್ಯವಿರುತ್ತದೆ. ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆಯ ಕೊರತೆ ಕಂಡುಬರುವುದು. ತಾಳ್ಮೆ ಇರಲಿ.

ವೃಶ್ಚಿಕರಾಶಿ
ವ್ಯಾಪಾರಿ ವರ್ಗದವರು ಹೆಚ್ಚಿನ ಹೂಡಿಕೆ ಮಾಡಬೇಕಾದೀತು. ಸ್ತ್ರೀಯರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹಯೋಗ, ಕೃಷಿಕರಿಗೆ ಲಾಭ, ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿ ಸಮಾಧಾನ ತರಲಿದೆ.

ಧನುರಾಶಿ
ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ವಿವಾಹ ಯೋಗ, ಸ್ವಗೃಹ ವಾಸ. ಮುಖ್ಯವಾಗಿ ಸಾಂಸಾರಿಕ, ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ. ಆತ್ಮವಿಶ್ವಾಸದಿಂದ ಮುನ್ನಡೆಯುವುದು ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ರೂಪದಲ್ಲಿ ಅದೃಷ್ಟ ಖುಲಾಯಿಸಲಿದೆ.

ಮಕರರಾಶಿ
ನಿರೀಕ್ಷಿತ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ನೀಚ ಜನರಿಂದ ದೂರವಿರಿ, ದ್ರವ್ಯ ಲಾಭ, ಬಂಧುಗಳಲ್ಲಿ ಮನಃಸ್ತಾಪ, ಆರೋಗ್ಯ ವೃದ್ಧಿ, ಹಿರಿಯರಿಂದ ಹಿತವಚನ. ನಿಮ್ಮ ಪ್ರಯತ್ನಬಲ, ಕ್ರಿಯಾಶೀಲವನ್ನು ಮುಂದುವರಿಸಿಕೊಂಡು ಹೋಗುವುದು ಅತೀ ಅಗತ್ಯ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಫ‌ಲ ಸಿಗಲಿದೆ.

ಕುಂಭರಾಶಿ
ಪ್ರಿಯ ಜನರ ಭೇಟಿ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆಯಿಂದ ಮುಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ. ವಾಹನ ಯಂತ್ರಗಳ ಬಗ್ಗೆ ಅತೀ ಹೆಚ್ಚಿನ ಜಾಗ್ರತೆ ವಹಿಸಿರಿ. ಪತ್ನಿಯ ಪ್ರೀತಿ, ಸಹಕಾರಗಳು ಮನೆಯಲ್ಲಿ ಶಾಂತಿ, ಸಮಾಧಾನ ತರಲಿವೆ. ನಿರುದ್ಯೋಗಿಗಳಿಗೆ ಅಲೆದಾಟವು ತಪ್ಪಿದ್ದಲ್ಲ. ದಿನಾಂತ್ಯ ಶುಭವಿದೆ.

ಮೀನರಾಶಿ
ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಷ್ಟಾರ್ಥ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಅಧಿಕವಾದ ಕೋಪ, ಮಕ್ಕಳಿಂದ ಸಹಾಯ, ಮಾತಿನಲ್ಲಿ ಹಿಡಿತವಿರಲಿ. ಆರ್ಥಿಕವಾಗಿ ಸಮಸ್ಯೆಗಳು ನಿವಾರಣೆ ಯಾಗಲಿವೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಉತ್ತಮ ಫ‌ಲಿತಾಂಶವನ್ನು ಪಡೆದು ಸಂಪನ್ನರಾದಾರು.

Leave A Reply

Your email address will not be published.