ನಿತ್ಯಭವಿಷ್ಯ : 05-06-2020

0

ಮೇಷರಾಶಿ
ಉತ್ತಮ ಅವಕಾಶಗಳು ವೃತ್ತಿರಂಗದಲ್ಲಿ ಒದಗಿ ಬರುತ್ತವೆ.ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಸ್ಥಿರಾಸ್ತಿ-ವಾಹನದಿಂದ ಲಾಭ, ಮಾತೃವಿನಿಂದ ಅನುಕೂಲ, ಉದ್ಯೋಗದಲ್ಲಿ ಒತ್ತಡ, ಕಿರಿಕಿರಿ, ಮಿತ್ರರಿಂದ ಸಮಸ್ಯೆ, ಕುಟುಂಬಸ್ಥರಿಂದ ತೊಂದರೆ, ಲಾಭ ಪ್ರಮಾಣ ಕುಂಠಿತ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು.

ವೃಷಭರಾಶಿ
ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತಲೆ ಹೋಗಲಿದೆ.ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಬಂಧುಗಳಿಂದ ಕಿರಿಕಿರಿ, ಸಂಗಾತಿಯಿಂದ ನೋವು, ಗೌರವಕ್ಕೆ ಧಕ್ಕೆ, ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ, ಪ್ರಯಾಣದಲ್ಲಿ ಆಲಸ್ಯ, ಕೆಲಸದಲ್ಲಿ ನಿಧಾನ ಬೆಳವಣಿಗೆ. ಹಿರಿಯರಿಂದ ಸಾಮಾಜಿಕವಾಗಿ ಗೌರವ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು.

ಮಿಥುನರಾಶಿ
ಆರ್ಥಿಕ ವಿಚಾರದಲ್ಲಿ ಇತರರಿಂದ ವಂಚನೆ ತಾಪತ್ರಯಗಳು ಕೂಡಾ ಕಂಡು ಬಂದಾವು.ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನು ಎದುರಿಸುವಂತಾದೀತು. ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೇ ಶತ್ರುಗಳಾಗುವರು, ವಾದ-ವಿವಾದ ಹೆಚ್ಚಾಗುವುದು, ಗ್ಯಾಸ್ಟ್ರಿಕ್, ಆರೋಗ್ಯದಲ್ಲಿ ವ್ಯತ್ಯಾಸ. ನಿಮ್ಮ ಪ್ರಯತ್ನ ಬಲಕ್ಕೆ ಆತ್ಮವಿಶ್ವಾಸಕ್ಕೆ ಹೆಚ್ಚಿನ ಒತ್ತು ಕೊಡಿರಿ.ಸಾಧನೆ ಆದೀತು.

ಕಟಕರಾಶಿ
ಉತ್ತಮ ದೈವಾನುಗ್ರಹವಿದ್ದು ಉದ್ಯೋಗ, ಸ್ವಯಂಕೃತ ಅಪರಾಧದಿಂದ ಅಶಾಂತಿ, ಅವಮಾನವಾಗುವ ಸಾಧ್ಯತೆ, ದುಶ್ಚಟಗಳಿಂದ ತೊಂದರೆ, ವಿಕೃತ ಆಸೆಗಳಿಗೆ ಮನಸ್ಸು ಪ್ರಚೋದನೆ, ಮಕ್ಕಳ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು. ವ್ಯವಹಾರಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಅದ್ಯಾಪನ ವೃತ್ತಿಯಲ್ಲಿ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ.ಸಾಂಸಾರಿಕವಾಗಿ ವಾದ, ವಿವಾದಗಳಿಂದ ದೂರವಿದ್ದಷ್ಟು ಉತ್ತಮ.

ಸಿಂಹರಾಶಿ
ಆರ್ಥಿಕವಾಗಿ ಪರಿಸ್ಥಿತಿಯು ಉತ್ತಮಗೊಳ್ಳುತ್ತಾ ಹೊಗಲಿದೆ. ಸ್ಥಿರಾಸ್ತಿ-ವಾಹನದಿಂದ ನಷ್ಟ, ತಾಯಿಯನ್ನು ದೂರ ಮಾಡಿಕೊಳ್ಳುವಿರಿ, ದೀರ್ಘಕಾಲದ ರೋಗ ಬಾಧೆ, ಚರ್ಮ ಸಮಸ್ಯೆ, ಶರೀರದಲ್ಲಿ ನೋವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಆದರೆ ಹಿಡಿತ ಗಟ್ಟಿಯಾಗಿರಲಿ. ಸಾಂಸಾರಿಕವಾಗಿ ಸಮಾಧಾನ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಮುಂಭಡ್ತಿ ತರಲಿದೆ.

ಕನ್ಯಾರಾಶಿ
ಕುಟುಂಬ ವರ್ಗದವರಿಂದ ಸಹಕಾರ ಸಿಗಲಿದೆ. ಆಗಾಗ ಆರ್ಥಿಕ ತಾಪತ್ರಯಗಳು ಕಾರ್ಯಚರಣೆಗೆ ಅಡ್ಡಿಯಾದಾವು. ಮಕ್ಕಳಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ನೆಮ್ಮದಿ, ಸ್ಥಿರಾಸ್ತಿ ತಗಾದೆ ನಿವಾರಣೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರು-ಕುಂಬಸ್ಥರು ಶತ್ರುವಾಗುವರು. ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಅನಗತ್ಯವಾಗಿ ಸಮಸ್ಯೆ ತೋರಿ ಬಂದೀತು. ಜಾಗ್ರತೆ ಮಾಡಿರಿ.

ತುಲಾರಾಶಿ
ಕಾರ್ಯರಂಗದಲ್ಲಿ ಮಿಶ್ರಫ‌ಲಗಳಿಂದ ತಾತ್ಕಾಲಿಕವಾಗಿ ಮಾನಸಿಕ ನೆಮ್ಮದಿ ದೊರೆತರೂ ಸಮಾಧಾನ ವಿರಲಾರದು. ಉದ್ಯೋಗ ಸ್ಥಳದಲ್ಲಿ ಒತ್ತಡ, ಮಿತ್ರರು-ಸಂಗಾತಿಯೊಂದಿಗೆ ವಾಗ್ವಾದ, ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಕಾರ್ಮಿಕರಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಲಾಭ. ಶುಭಕಾರ್ಯಗಳ ಸಿದ್ಧಿಗಾಗಿ ಆಗಾಗ ಸಂಚಾರ ಕೈಗೊಳ್ಳಬೇಕಾದೀತು. ಗೃಹದಲ್ಲಿ ಪತ್ನಿಯಿಂದ ಕಿರಿಕಿರಿ ಕಂಡು ಬರಲಿದೆ.

ವೃಶ್ಚಿಕರಾಶಿ
ನಾನಾ ಮೂಲಗಳಿಂದ ವ್ಯಾಪಾರ, ವ್ಯವಹಾರ ಗಳಲ್ಲಿ ದಾರಾಳವಾಗಿ ಹಣ ಕೈ ಸೇರಿದರೂ ಹೆಚ್ಚಿನ ಜಾಗ್ರತೆ ಅಗತ್ಯವಿದೆ. ಪ್ರಯಾಣದಲ್ಲಿ ಅಡೆತಡೆ-ನಿರಾಸಕ್ತಿ, ನರದೌರ್ಬಲ್ಯ, ಹೊಟ್ಟೆ ನೋವು, ಆರೊಗ್ಯದಲ್ಲಿ ವ್ಯತ್ಯಾಸ, ಮನಸ್ಸಿಗೆ ನಿರಾಸೆ-ಜಿಗುಪ್ಸೆ, ಆಲಸ್ಯ ಮನೋಭಾವ, ಒತ್ತಡ ಜೀವನ, ಆಸ್ತಿ ವಿಚಾರದಲ್ಲಿ ತಗಾದೆ. ಕೆಲಸಕಾರ್ಯಗಳಲ್ಲಿ ನಿರೀಕ್ಷೆಯ ರೀತಿಯಿಂದ ಯಶಸ್ಸು ಅನುಭವಕ್ಕೆ ಬರಲಿದೆ.ಯಾವುದಕ್ಕೂ ಅತುರತೆ ಸಲ್ಲದು.

ಧನುರಾಶಿ
ವೃತ್ತಿರಂಗದಲ್ಲಿ ಸಮಸ್ಯೆಗಳ ಮೇಲೆ ಹತೋಟಿ ಸಾಧಿಸುವ ಅವಕಾಶ ವಿರುತ್ತದೆ. ಆಕಸ್ಮಿಕ ಧನ ನಷ್ಟ, ನಂಬಿಕಸ್ಥರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಉಸಿರಾಟದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ವ್ಯವಹಾರಗಳಲ್ಲಿ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ಕೆಲಸಕಾರ್ಯಗಳನ್ನು ಸುತ್ತು ಬಳಸಿಯೇ ಕಾರ್ಯಸಾಧಿಸುವ ಅವಕಾಶ ವಿರುತ್ತದೆ. ಸ್ನೇಹಿತರಿಂದ ಸಲುಗೆಯ ದುರುಪಯೋಗವಾಗದಂತೆ ಜಾಗ್ರತೆ ಮಾಡಿರಿ.

ಮಕರರಾಶಿ
ಆರ್ಥಿಕಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳಿಲ್ಲ. ಅದರೂ ಕೆಲಸದಲ್ಲಿ ಅನಿರೀಕ್ಷಿತ ಅವಕಾಶಗಳು ಒದಗಿ ಬರಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಉದ್ಯೋಗಾವಕಾಶ, ಆರ್ಥಿಕ ಸಹಾಯ ಲಭಿಸುವುದು, ಉತ್ತಮ ಗೌರವ, ಕೀರ್ತಿ ಪ್ರಾಪ್ತಿ, ದೀರ್ಘಕಾಲದ ಆಸೆ ಈಡೇರುವುದು. ಸಂಚಾರದಿಂದ ಕಾರ್ಯದಲ್ಲಿ ಸಿದ್ದಿಯಾಗಲಿದೆ. ದಾಂಪತ್ಯದಲ್ಲಿ ಪತ್ನಿ ಮಕ್ಕಳಿಂದ ಪ್ರೀತಿ ವಿಶ್ವಾಸ ದೊರಕಲಿದೆ.

ಕುಂಭರಾಶಿ
ಕೆಲವೊಂದು ಖರ್ಚುವೆಚ್ಚಗಳಿಂದ ಆರ್ಥಿಕ ಪರಿಸ್ಥಿತಿಯು ಕೆಡಲಿದೆ. ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಲಾಭ-ನಷ್ಟ ಸಮ ಪ್ರಮಾಣ, ಶೀತ, ಕಫ, ರಕ್ತ ದೋಷ, ಅಜೀರ್ಣ ಸಮಸ್ಯೆ, ಅನಾರೋಗ್ಯ, ಬಾಡಿಗೆದಾರರಿಂದ ಕಿರಿಕಿರಿ, ಕಾರ್ಮಿಕರಿಂದ ನಷ್ಟ. ಸರಕಾರಿ ಕೆಲಸಕಾರ್ಯಗಳಲ್ಲಿ ವಿಳಂಬ ತೋರಿ ಬಂದು ಮಾನಸಿಕ ಶಾಂತಿ ಕದಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಂಡು ಬರುವುದು. ಶುಭವಿದೆ.

ಮೀನರಾಶಿ
ವ್ಯವಹಾರಿಕವಾಗಿ ಹಿತಶತ್ರುಗಳ ಕಾಟವಿದ್ದರೂ ಜಾಣ್ಮೆಯಿಂದ ನಡೆದಲ್ಲಿ ಮುನ್ನಡೆ ತೋರಿ ಬರಲಿದೆ. ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ದೂರಾಗುವ ಆಲೋಚನೆ, ದುರ್ಘಟನೆಗಳಿಂದ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವತಾ ಕಾರ್ಯದಲ್ಲಿ ಭಾಗಿ. ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡುವಿರಿ. ಕಾರ್ಯಕ್ಷೇತ್ರದಲ್ಲಿ ಮುಖ್ಯವಾಗಿ ಸರಕಾರಿ ಕೆಲಸಕಾರ್ಯಗಳಲ್ಲಿ ಅನಾವಶ್ಯಕವಾಗಿ ಸಮಸ್ಯೆಗಳು ಕಾಡಲಿವೆ.

Leave A Reply

Your email address will not be published.