woman was assaulted by her relatives:ಆಸ್ತಿ ವಿಚಾರಕ್ಕೆ ನಡುರಸ್ತೆಯಲ್ಲಿ ಮಹಿಳೆ ಮೇಲೆ ಸಂಬಂಧಿಕರಿಂದ ಹಲ್ಲೆ

ವಿಜಯಪುರ : woman was assaulted by her relatives : ಲೋಕದಲ್ಲಿ ಹೆಚ್ಚಾಗಿ ಹೆಣ್ಣು, ಹೊನ್ನು, ಮಣ್ಣು ಇದಕ್ಕಾಗಿಯೇ ಮಾನವರ ಮಧ್ಯೆ ಸಂಘರ್ಷ ನಡೆದಿರುವುದು ಹೆಚ್ಚು. ವಿಜಯಪುರ ಜಿಲ್ಲೆಯಲ್ಲಿಯೂ ಆಸ್ತಿ ವಿಚಾರವಾಗಿ‌ ಮಹಿಳೆಯೊಬ್ಬರಿಗೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ನಡು ರಸ್ತೆಯಲ್ಲೇ ಮಹಿಳೆಗೆ ಅಮಾನವೀಯವಾಗಿ ಹಲ್ಲೆ ಮಾಡಿ‌ ಮಹಿಳೆಯ ಸಂಬಂಧಿಕರೆ ಈ ದುಷ್ಕ್ರತ್ಯ ಎಸಗಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಜಲಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾದೇವಿ ಪೀರಾಪೂರ ಹಲ್ಲೆಗೊಳಗಾದ ಮಹಿಳೆ ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರವಾಗಿ ಹಳೆ ದ್ವೇಷದಿಂದಾಗಿ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಮಹಾದೇವಿ ಹೊಲದಲ್ಲಿ ಒಬ್ಬರೇ ಇದ್ದಾಗ ಆನಂದ ಬಿರಾದಾರ ಎಂಬ ವ್ಯಕ್ತಿ ಕೈಹಿಡಿದು ಎಳೆದಾಡಿದ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಮೂವರು ಸಂಬಂಧಿಕರು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೂದಲು, ಬಟ್ಟೆ ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಪ್ರಾರಂಭದಲ್ಲಿ ಆನಂದ ಬಿರಾದಾರನಿಂದ ತಪ್ಪಿಸಿಕೊಂಡು ಮಹಾದೇವಿ ಓಡಿ ಬಂದಿದ್ದಾರೆ. ಆದ್ರೆ ಜಮೀನಿನಿಂದ ಓಡಿಕೊಂಡು ಮನೆಗೆ ಬರುವಾಗ ಮಹಿಳೆಯನ್ನು ತಡೆದು ಮೂವರು ಸೇರಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಆನಂದ ಬಿರಾದಾರ, ಶ್ರೀಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಸೇರಿ ಹಲ್ಲೆ ಮಾಡಿದ್ದಾರೆ.

ಮಹಾದೇವಿ ಅವರ ಗಂಡನ ಮನೆ ಸುರಪೂರ ತಾಲೂಕಿನ ವಂದಗನೂರ ಗ್ರಾಮದಲ್ಲಿದೆ. ಮಹಾದೇವಿ ಅವರಿಗೆ ಜಲಪುರ ಗ್ರಾಮದಲ್ಲಿ ತನ್ನ ತಾಯಿ ಮನೆಯಿಂದ 1ಎಕರೆ ಜಮೀನಿದ್ದು, ಇವರಿಗೆ ಸಹೋದರಿಯೊಬ್ಬರು ಇದ್ದಾರೆ. ಮಹಾದೇವಿ, ಬಸಮ್ಮ ಇಬ್ಬರು ಹೆಣ್ಣು ಮಕ್ಕಳಾಗಿದ್ದು ಇಬ್ಬರನ್ನು ಮದುವೆ ಮಾಡಿಕೊಡಲಾಗಿದೆ. ಇದರಲ್ಲಿ ಶ್ರೀಶೈಲ ಬಿರಾದಾರ ಸೇರಿದಂತೆ ಹಲ್ಲೆ ನಡೆಸಿರುವ ಮಹಾದೇವಿ ಸಂಬಂಧಿಗಳು ಇವರ 1 ಎಕರೆ ಜಮೀನಿನ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ಮಹಾದೇವಿ ಗಂಡನ ಮನೆಯಿಂದ ಬಂದು ತವರುಮನೆ ಜಲಪುರದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಆಸ್ತಿ ವಿಚಾರವಾಗಿ ಮಹಾದೇವಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಆಸ್ತಿಗಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿರೋದು ಖಂಡನೀಯ.

ಇದನ್ನು ಓದಿ : Woman Delivered Baby : ಫೋನ್​ ಚಾರ್ಜರ್​ ಬಳಸಿ ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಇದನ್ನೂ ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು

A woman was assaulted by her relatives in the middle of a property dispute

Comments are closed.