Minister Dr. K Sudhakar: ಸಚಿವ ಡಾ.ಕೆ ಸುಧಾಕರ್​ ಬಳಿ ಡ್ಯಾಗರ್​ ಹಿಡಿದು ಬಂದ ವ್ಯಕ್ತಿಯ ಬಂಧನ

ಚಿಕ್ಕಬಳ್ಳಾಪುರ : Minister Dr. K Sudhakar : ರಾಜ್ಯದಲ್ಲಿ ಮೊದಲೇ ಸರಣಿ ಕೊಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಾದರ ಮೇಲೊಂದರಂತೆ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಿದೆ. ಈ ಎಲ್ಲದರ ನಡುವೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಶರ್ಟ್​ನ ಒಳಗಡೆ ಡ್ಯಾಗರ್ ಹಿಡಿದು ಬಂದಿದ್ದ ವ್ಯಕ್ತಿಯನ್ನು ಗುಡಿಬಂಡೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಈ ಗ್ರಾಮದಲ್ಲಿ ಸಚಿವ ಡಾ. ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿದ್ದಾನೆ. ಈತನನ್ನು ಗಂಗರಾಜು ಎಂದು ಗುರುತಿಸಲಾಗಿದ್ದು ಈತನನ್ನು ಗುಡಿಬಂಡೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಚಿವ ಡಾ.ಕೆ ಸುಧಾಕರ್​ಗೆ ಇದರ ಅರಿವಿರಲಿಲ್ಲ. ಅವರು ಜನರನ್ನು ಮಾತನಾಡಿಸುತ್ತಿದ್ದ ಸಂದರ್ಭದಲ್ಲಿ ಗಂಗರಾಜು ಜನರನ್ನು ತಳ್ಳಿದ್ದಾನೆ. ಅಲ್ಲದೇ ಶರ್ಟ್​ನ ಒಳಗಡೆ ಡ್ಯಾಗರ್​ ಇಟ್ಟುಕೊಂಡು ಸಚಿವರ ಹತ್ತಿರಕ್ಕೆ ಬಂದಿದ್ದಾನೆ. ಆದರೆ ಈತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸುತ್ತಿದ್ದ ಗುಂಡಿಬಂಡೆ ಠಾಣಾ ಪೊಲೀಸರು ಗಂಗರಾಜುವನ್ನು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಯಾವ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿದ್ದ..? ಈತನ ಉದ್ದೇಶ ಏನಾಗಿತ್ತು..? ಈತ ಡ್ಯಾಗರ್​ ಹಿಡಿದು ಸಚಿವರ ಸಮೀಪಕ್ಕೆ ಬಂದಿದ್ದಾದರೂ ಏಕೆ ..? ಎಂಬೆಲ್ಲ ಪ್ರಶ್ನೆಗಳಿಗೆ ವಿಚಾರಣೆಯ ಮೂಲಕ ಉತ್ತರ ತಿಳಿಯಬೇಕಿದೆ.

ಇದನ್ನು ಓದಿ : Dr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ : ಸಚಿವ ಡಾ. ಅಶ್ವತ್ಥ ನಾರಾಯಣ ಗುಡುಗು

ಇದನ್ನೂ ಓದಿ : Siddaramaiah : ಬಿಜೆಪಿ ಸರ್ಕಾರಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳಿ ಮರುಕ್ಷಣವೇ ಹೇಳಿಕೆ ವಾಪಸ್​ ಪಡೆದ ಸಿದ್ದರಾಮಯ್ಯ

ಇದನ್ನೂ ಓದಿ : KCET ಫಲಿತಾಂಶ 2022 ನಾಳೆ ಪ್ರಕಟ : ಫಲಿತಾಂಶಕ್ಕಾಗಿ kea.kar.nic.in ಕ್ಲಿಕ್‌ ಮಾಡಿ

ಇದನ್ನೂ ಓದಿ : closure of shops : ದಕ್ಷಿಣ ಕನ್ನಡದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಜೆ 6 ಗಂಟೆಗೆ ಬಂದ್​ : ಜಿಲ್ಲಾಧಿಕಾರಿ ಆದೇಶ

Arrest of a person carrying a dagger near Minister Dr. K Sudhakar

Comments are closed.