Former CM HD Kumaraswamy: ಬಿಜೆಪಿ – ಕಾಂಗ್ರೆಸ್​ ನಡುವಿನ ದ್ವೇಷದಿಂದ ರಾಜ್ಯದಲ್ಲಿ ಅಮಾಯಕರು ಬಲಿ : ಹೆಚ್​​ಡಿಕೆ ಕಿಡಿ

ರಾಮನಗರ : HD Kumaraswamys outrage : ಸರ್ಕಾರವು ಸರಿಯಾಗಿ ನಡೆಯುತ್ತಿಲ್ಲ. ಇನ್ನು ಆರೇಳು ತಿಂಗಳು ಬಾಕಿ ಇದೆ ಎಂದು ಹೇಗೋ ತಳ್ಳಿಕೊಂಡು ಹೋಗ್ತಿದ್ದೇವೆ ಎಂಬ ಕಾನೂನು ಸಚಿವ ಮಾಧುಸ್ವಾಮಿ ಆಡಿಯೋವೊಂದು ವೈರಲ್​ ಆಗಿದ್ದು ವಿಪಕ್ಷಗಳ ಪಾಲಿಗೆ ಬಿಜೆಪಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಇಂದು ಈ ವಿಚಾರವಾಗಿ ಚೆನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಚಿವ ಮಾಧುಸ್ವಾಮಿ ಹೇಳಿಕೆಯೇ ಸಾಕ್ಷಿ ಎಂದಿದ್ದಾರೆ.

ವೈರಲ್​ ಆಗಿರುವ ಫೋನ್​ ಸಂಭಾಷಣೆಯಲ್ಲಿ ಮಾಧುಸ್ವಾಮಿ ನಿಜವನ್ನೇ ಹೇಳಿದ್ದಾರೆ. ಇದು ಸಚಿವರು ಮಾತ್ರವಲ್ಲ ಸಾರ್ವಜನಿಕವಾಗಿಯೂ ಸಹ ಸರ್ಕಾರದ ಮೇಲೆ ಇದೇ ಭಾವನೆಯಿದೆ. ಮಂತ್ರಿಮಂಡಲದಲ್ಲಿ ಅವರವರ ಮೇಲೆ ಅವರಿಗೆ ವಿಶ್ವಾಸವಿಲ್ಲ. ಮಾಧುಸ್ವಾಮಿ ಹೇಳಿಕೆಯಂತೆಯೇ ಇನ್ನೂ ಹಲವು ಸಚಿವರ ಹೇಳಿಕೆಗಳನ್ನೂ ನಾವು ಗಮನಿಸಿದ್ದೇವೆ. ಮಾಧುಸ್ವಾಮಿ ಹೇಳಿದಂತೆ ಈ ಸರ್ಕಾರವನ್ನು ತಳ್ಳಿಕೊಂಡೇ ಹೋಗಲಾಗ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದಿರುವ ಗಲಭೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಹೆಚ್​.ಡಿ ಕುಮಾರಸ್ವಾಮಿ, ಪ್ರಾಮಾಣಿಕವಾಗಿ ದುಡಿಯುವವರನ್ನು ಬಿಟ್ಟು ಬೇರೆಯವರನ್ನು ಮೆರೆಸುವ ಕೆಲಸ ನಡೆಯುತ್ತಿದೆ.ಇಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಎರಡೂ ರಾಷ್ಟ್ರೀಯ ಪಕ್ಷಗಳೇ ಕಾರಣ. ಇವರಿಬ್ಬರ ನಡುವಿನ ದ್ವೇಷದಿಂದ ಇಂದು ರಾಜ್ಯದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ರೀತಿ ಅಂಧರೆ ಇದೇನಾ..? ಎಂದು ಪ್ರಶ್ನೆ ಮಾಡಿದ್ದಾರೆ .

ಒಂದು ಕಡೆ ನೋಡಿದರೆ ಬಾವುಟ ಹಿಡಿದುಕೊಂಡು ದೇಶಕ್ಕೆ ಕೊಡುಗೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತೀರಿ. ಮತ್ತೊಂದು ಕಡೆ ಈ ರೀತಿಯಾಗಿ ಗಲಭೆ ನಡೆಯುತ್ತಿದೆ. ಆದರೆ ಇವುಗಳಿಗೆ ಪರಿಹಾರವನ್ನು ಹುಡುಕುವ ಕೆಲಸವನ್ನು ಯಾರೂ ಮಾಡುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಹಿನ್ನೆಲೆಯನ್ನು ನೀವೆಲ್ಲ ಸೇರಿ ಹಾಳು ಮಾಡುತ್ತಿದ್ದೀರಿ ಎಂದು ಬಿಜೆಪಿ ಹಾಗೂ ಕಾಂಗ್ರೆಸ್​ ವಿರುದ್ಧ ಹೆಚ್​.ಡಿ ಕುಮಾರಸ್ವಾಮಿ ಕಿಡಿಕಾಡಿದ್ದಾರೆ.

ಇದನ್ನು ಓದಿ : Savarkar controversy : ನಮ್ಮ ಮೆಟ್ರೋಗೂ ಕಾಲಿಟ್ಟ ಸಾರ್ವಕರ್ ವಿವಾದ : ಪೋಟೋ ಅಳವಡಿಕೆಗೆ ವಿರೋಧ

ಇದನ್ನೂ ಓದಿ : Deadly attack on Hindu youth : ಶಿವಮೊಗ್ಗ ಚಾಕು ಇರಿತ ಪ್ರಕರಣ ಬೆನ್ನಲ್ಲೇ ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Former CM HD Kumaraswamys outrage against the BJP government

Comments are closed.