groom collapses : ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಹೃದಯಾಘಾತಕ್ಕೊಳಗಾದ ವರ ಸಾವು

ವಿಜಯಪುರ : groom collapses : ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹಿರಿಯರು ಹೇಳೋದನ್ನು ಕೇಳಿರ್ತೆವೆ. ಆದರೆ ಎಲ್ಲರ ಜೀವನದಲ್ಲಿಯೂ ಈ ಮಾತು ಸತ್ಯವಾಗಲೇಬೇಕು ಎಂದೇನಿಲ್ಲ. ಕೆಲವೊಮ್ಮೆ ಕೆಲವರ ಬಾಳಲ್ಲಿ ಮದುವೆ ಎನ್ನುವುದು ದುರಂತ ಕೂಡ ಆಗಬಹುದು. ಈ ಮಾತಿಗೆ ಸಾಕ್ಷಿ ಎಂಬಂತೆ ಮದುವೆ ಮೆರವಣಿಗೆಯೊಂದಿಗೆ ಹೊರಟಿದ್ದ ವಾಹನ ಅಪಘಾತಕ್ಕೀಡಾಗುವಂತಹ ಸುದ್ದಿಗಳನ್ನು ನಾವು ಕೇಳಿಯೇ ಇರ್ತೇವೆ. ವಿಜಯನಗರದ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿಯೂ ಸಹ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಘನಘೋರ ದುರಂತ ಸಂಭವಿಸಿದೆ.

ಆತ ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು . ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ನೇಹಿತರು, ಕುಟುಂಬಸ್ಥರು ಹಾಗೂ ಬಂಧುಗಳು ನೆರೆದಿದ್ದರು. ಆದರೆ ವಿಧಿಯಾಟ ಆತನ ಹಣೆಯಲ್ಲಿ ಮತ್ತೊಂದನ್ನೇ ಬರೆದಿತ್ತು. ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ನಿಂತಿದ್ದ 26 ವರ್ಷದ ವರ ಹೊನ್ನೂರುಸ್ವಾಮಿಗೆ ಎದೆ ನೋವು ಕಾಣಿಸಿಕೊಂಡಿದೆ. ಇದ್ದಕ್ಕಿದಂತೆಯೇ ಆತ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ .

ಕೂಡಲೇ ಕುಟುಂಬಸ್ಥರೆಲ್ಲ ಸೇರಿ ಹೊನ್ನೂರು ಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೊನ್ನೂರು ಸ್ವಾಮಿಗೆ ಲೋ ಬಿಪಿ ಆಗಿದ್ದರಿಂದ ಇವರನ್ನು ಕೂಡಲೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಕುಟುಂಬಸ್ಥರು ಹೊನ್ನೂರುಸ್ವಾಮಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ಮಾರ್ಗ ಮಧ್ಯದಲ್ಲಿಯೇ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಇಂದು ಹೊನ್ನೂರುಸ್ವಾಮಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು . ಆದರೆ ಮಧು ಮಗನೇ ಮೃತಪಟ್ಟ ಹಿನ್ನೆಲೆಯಲ್ಲಿ ಸಂಭ್ರಮದ ಮನೆಯಲ್ಲಿ ದುಃಖದ ಕಾರ್ಮೋಡ ಕವಿದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿ ಇರಬೇಕಿದ್ದ ಕುಟುಂಬಸ್ಥರು ವರನ ಅಂತ್ಯಕ್ರಿಯೆಯನ್ನು ನಡೆಸುವಂತಾಗಿದೆ.

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

ಇದನ್ನೂ ಓದಿ : Mangalore : ಕೇವಲ ಕಿಸ್​ ಮಾತ್ರವಲ್ಲ, ಸೆಕ್ಸ್​ ಕೂಡ ಮಾಡಿದ್ದ ವಿದ್ಯಾರ್ಥಿಗಳು : ತನಿಖೆ ವೇಳೆ ಹೊರಬಿತ್ತು ಸೆಕ್ಸ್​ ವಿಡಿಯೋದ ಅಸಲಿಯತ್ತು

ಇದನ್ನು ಓದಿ : cm bommai : ರಾಜ್ಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಚಟುವಟಿಕೆ : ಮಹತ್ವದ ಸುಳಿವು ನೀಡಿದ ಸಿಎಂ ಬೊಮ್ಮಾಯಿ

groom collapses during reception and died at vijayanagara

Comments are closed.