minister kota srinivasa pujari : ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತ

ಉಡುಪಿ : minister kota srinivasa pujari : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್​ ವಾಹನ ಅಪಘಾತಕ್ಕೆ ಒಳಗಾದ ಘಟನೆಯು ಉಡುಪಿಯ ಸಂತೆಕಟ್ಟೆಯ ಕೆಜಿ ರೋಡ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ವಾಹನ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್​ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಎಸ್ಕಾರ್ಟ್​ ವಾಹನದಲ್ಲಿದ್ದ ಬೆಂಗಾವಲು ಸಿಬ್ಬಂದಿ ಗಣೇಶ್​ ಆಳ್ವ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಬೆಂಗಾವಲು ಸಿಬ್ಬಂದಿ ಗಣೇಶ್​ ಆಳ್ವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.


ಬೆಂಗಾವಲು ವಾಹನದ ಮುಂದೆ ಸಂಚರಿಸಿದ್ದ ಲಾರಿಯು ಸೂಚನೆಯನ್ನು ನೀಡದೇ ತನ್ನ ಪಥ ಬದಲಿಸಿದ ಪರಿಣಾಮ ಬೆಂಗಾವಲು ವಾಹನ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.

ಇದನ್ನು ಓದಿ : Ayushman Card: . ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದೀರಾ ! ಹಾಗಾದರೆ ಇದನ್ನ ಮಿಸ್ ಮಾಡದೇ ಓದಿ

ಇದನ್ನೂ ಓದಿ : Athiya Shetty and KL Rahul : ಆಥಿಯಾ ಶೆಟ್ಟಿ ಹಾಗೂ ಕೆ.ಎಲ್​ ರಾಹುಲ್​ ಮದುವೆ ವಿಚಾರವಾಗಿ ಹೊರಬಿತ್ತು ಬಹುಮುಖ್ಯ ಮಾಹಿತಿ

minister kota srinivasa pujari escort vehicle accident

Comments are closed.