pratap simha : ಟಿಪ್ಪುಗೆ ಹೆದರಲಿಲ್ಲ, ಇನ್ನು ಸಿದ್ದು ಸುಲ್ತಾನನಿಗೆ ಹೆದರುತ್ತೀವಾ : ಪ್ರತಾಪ್​ ಸಿಂಹ ವ್ಯಂಗ್ಯ

ಮೈಸೂರು : pratap simha : ಆಗಸ್ಟ್​ 26ರಂದು ಕಾಂಗ್ರೆಸ್​ ಮಡಿಕೇರಿ ಚಲೋ ಮಾಡುತ್ತಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್​ ಸಿಂಹ, ಟಿಪ್ಪು ಸುಲ್ತಾನ ಕೊಡಗಿಗೆ ಬಂದಾಗಲೇ ಹೆದರಲಿಲ್ಲ, ಇನ್ನು ಸಿದ್ದು ಸುಲ್ತಾನ್​ ಕೊಡಗಿಗೆ ಬಂದರೆ ಹೆದರಿ ಬಿಡ್ತೇವಾ..? ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಮಾತ್ರವಲ್ಲ ಆಗಸ್ಟ್​ 26ರಂದು ಮಂಡ್ಯ, ಮೈಸೂರು, ಹಾಸನ ಮಾತ್ರವಲ್ಲ ಪಕ್ಕದ ಕೇರಳದಲ್ಲಿರುವ ನಿಮ್ಮ ಸಾಕು ಮಕ್ಕಳನ್ನೂ ಕರೆದುಕೊಂಡು ಕೊಡಗಿಗೆ ಬನ್ನಿ ಅಂತಾ ಸವಾಲ್​ ಎಸೆದಿದ್ದಾರೆ.


ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿದ್ದಾನಾ ಎಂಬ ಸಿದ್ದರಾಮಯ್ಯ ಪ್ರಶ್ನೆ ವಿಚಾರವಾಗಿಯೂ ಇದೇ ವೇಳೆ ತಿರುಗೇಟು ನೀಡಿದ ಪ್ರತಾಪ್​ ಸಿಂಗ್​, ನಿಮ್ಮ ಶ್ರೀಮತಿಯವರು ಚಾಮುಂಡೇಶ್ವರಿ ಭಕ್ತೆಯಾಗಿದ್ದಾರೆ. ಅವರೂ ದೇವಸ್ಥಾನಕ್ಕೆ ಮಾಂಸ ತಿಂದು ಬರ್ತಾರಾ ಅಂತಾ ಕೇಳಿ ನೋಡಿ. ಅವರು ಹೌದು ಎಂದು ಹೇಳಿದರೆ ಆಮೇಲೆ ಅದನ್ನು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಗುಡುಗಿದರು

.
ಮೊನ್ನೆ ದಾವಣಗರೆರೆಯಲ್ಲಿ ಸಿದ್ದರಾಮೋತ್ಸವ ನಡೆದಾಗ ಕಾರ್ಯಕರ್ತರಿಗೆ ಏಕೆ ನೀವು ಸಿಹಿ ಊಟ ಹಾಕಿಸಿದಿರಿ..? ಸಿದ್ದರಾಮಯ್ಯ ಪದೇ ಪದೇ ಈ ರೀತಿ ಮಾಡ್ತಾರೆ. 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ. ಅದೇ ಕಾರಣಕ್ಕೆ ಮುಂದೆ ದಸರಾ ಉದ್ಘಾಟನೆ ಮಾಡಲು ಚಾಮುಂಡೇಶ್ವರಿ ಅವಕಾಶವನ್ನು ನೀಡಲೇ ಇಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆಯನ್ನು ಒಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು .


ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದಿದ್ದ ಸಂಪತ್​ ಬಿಜೆಪಿ ಕಾರ್ಯಕರ್ತ ಎಂಬ ಆರೋಪದ ವಿಚಾರವಾಗಿ ಸ್ಪಷ್ಟನೆ ನೀಡಿದ ಫೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗಲು ಸಾಧ್ಯವಿಲ್ಲ. ಬಂಧಿತನಾಗಿರುವ ಸಂಪತ್​ ಚುನಾವಣೆಯಲ್ಲಿ ಕಾಂಗ್ರೆಸ್​ ಪರವಾಗಿ ಕೆಲಸ ಮಾಡಿದ್ದಾನೆ ಎಂದು ಹೇಳಿದರು .


ಸಾವರ್ಕರ್​ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಯತೀಂದ್ರಗೆ ಠಕ್ಕರ್​ ನೀಡಿದ ಸಂಸದ ಪ್ರತಾಪ್​ ಸಿಂಹ, ನೂಲಿನಂತೆ ಸೀರೆ, ಅಪ್ಪನಂತೆ ಮಗ, ಇವರಿಂದ ನಮಗೆ ಸಾವರ್ಕರ್​​ಗೆ ಸರ್ಟಿಫಿಕೇಟ್​ ಬೇಕಾಗಿಲ್ಲ ಎಂದು ಹೇಳಿದರು.


ಮಾಂಸ ತಿನ್ನಬೇಡಿ ಎಂದು ಯಾವ ದೇವರೂ ಹೇಳಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಜಮೀರ್​ ಅಹಮದ್​ ಹಾಗೂ ಅವರ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಿ. ಅದನ್ನು ತಿನ್ನಬೇಡಿ ಅಂತಾ ಕೂಡ ಯಾವ ದೇವರೂ ಹೇಳಿಲ್ಲ. ಆದರೆ ನೀವು ಆ ರೀತಿ ಹೇಳಿಲ್ಲ. ಏಕೆಂದರೆ ನಿಮಗೆ ಆ ರೀತಿ ಹೇಳಲು ಧೈರ್ಯವಿಲ್ಲ ಎಂದು ಅಣಕಿಸಿದರು.

ಇದನ್ನು ಓದಿ : Muslim female students : ಹಿಜಾಬ್​ಗೆ ಅನುಮತಿ ಕೊಡದ ಕಾಲೇಜುಗಳಿಂದ ಟಿಸಿ ಹಿಂಪಡೆದ ಮುಸ್ಲಿಂ ವಿದ್ಯಾರ್ಥಿನಿಯರು

ಇದನ್ನೂ ಓದಿ : Daali Dhananjay Birthday : ಹುಟ್ಟುಹಬ್ಬ ಮಾಡಿಕೊಳ್ಳಲ್ಲ ಎಂದ ಡಾಲಿಧನಂಜಯ್: ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು ಗೊತ್ತಾ

pratap simha reacts congress madikerichalo

Comments are closed.