Naleen Kumar Kateel:‘ಸೋನಿಯಾ ಗಾಂಧಿಗೆ ಹಣ ನೀಡಿ ಸಿಎಂ ಆಗಿದ್ದವರು ಸಿದ್ದರಾಮಯ್ಯ’ : ನಳೀನ್​ಕುಮಾರ್​ ಕಟೀಲ್​ ಆರೋಪ

ವಿಜಯಪುರ: Naleen Kumar Kateel :ರಾಜ್ಯದಲ್ಲಿ ಪಿಎಫ್​ಐ ಹಾಗೂ ಎಸ್​ಡಿಪಿಐನಂತಹ ಸಂಘಟನೆಗಳು ಬೆಳೆಯಲು ಮೊದಲ ಕಾರಣವೇ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದಲೇ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸಿದ್ದರಾಮಯ್ಯ ಅಧಿಕಾರವಾಧಿಯಲ್ಲಿಯೇ ರಾಜ್ಯದಲ್ಲಿ ದೇಶ ವಿರೋಧಿ ಸಂಘಟನೆಗಳು ಹೆಚ್ಚೆಚ್ಚು ಬೆಳೆದುಕೊಂಡಿದೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.


ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರವನ್ನು ಕೈಗೊಂಡಿದೆ. ದೇಶಾದ್ಯಂತ ಎನ್​ಐಎ ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ನಿವಾಸದ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರನ್ನು ಬಂಧಿಸಲಾಗಿದೆ. ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಬೇಕು ಅಂತಾ ದೇಶಭಕ್ತರು ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ನಾವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡ್ತಿದ್ದೇವೆ. ರಾಜ್ಯದಲ್ಲಿ ಇಂತಹ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿ ಇಡಲು ಕಟ್ಟುನಿಟ್ಟಿನ ಕ್ರಮದ ಜೊತೆಯಲ್ಲಿ ಗಟ್ಟಿ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ಪಿಎಫ್​ಐ ಮೇಲಿನ ರಾಜಕೀಯ ಪ್ರೇರಿತ ಎಂಬ ಆರೋಪದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಎಲ್ಲದ್ದಕ್ಕೂ ರಾಜಕೀಯ ಪ್ರೇರಿತ ಅಂತಾರೆ. ಭಯೋತ್ಪಾದನೆ ಮಾಡಲು ರಾಜಕೀಯವಾಗಿ ಪ್ರೇರಣೆ ನೀಡಿದವರು ಯಾರು..? ಎಂದು ನಳೀನ್​ ಕುಮಾರ್​ ಕಟೀಲ್​ ಪ್ರಶ್ನೆ ಮಾಡಿದ್ದಾರೆ.


ಸಿದ್ದರಾಮಯ್ಯ ಒಬ್ಬ ಪೇ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಯಾರಾದರೂ ಪೇಮೆಂಟ್​ ಮುಖ್ಯಮಂತ್ರಿ ಅಂತಾ ಇದ್ದರೆ ಅದು ಕೇವಲ ಸಿದ್ದರಾಮಯ್ಯ ಮಾತ್ರ. ಪೇಮೆಂಟ್​ ಮಾಡಿಕೊಂಡು ಸಿದ್ದರಾಮಯ್ಯ ಸಿಎಂ ಕುರ್ಚಿ ಏರಿದ್ದರು. ಸೋನಿಯಾ ಗಾಂಧಿಗೆ ಪೇಮೆಂಟ್​ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್​ರಂತಹ ಸೀನಿಯರ್​ಗಳು ಹಾಗೂ ಡಿಕೆ ಶಿವಕುಮಾರ್​ ಮತ್ತು ದೇಶಪಾಂಡೆಯಂತಹ ನಾಯಕರು ಇರುವಾಗಲೇ ಸಿದ್ದರಾಮಯ್ಯ ರಾಜ್ಯದ ಸಿಎಂ ಗದ್ದುಗೆ ಏರಿದ್ದು ಪೇಮೆಂಟ್​ ಮಾಡಿಕೊಂಡು. ಮೇಡಂಗೆ ಕಾಲ್​ ಮಾಡಿ ಪೇಮೆಂಟ್​ ಮಾಡಿ ಸಿಎಂ ಕುರ್ಚಿ ಭದ್ರಮಾಡಿಕೊಂಡವರು ಸಿದ್ದರಾಮಯ್ಯ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಪೇ ಸಿಎಂ ಎಂಬ ಮಾತಿನಲ್ಲಿ ಎರಡು ಅರ್ಥವಿದೆ. ಒಂದು ಪೇ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ. ಪೇಮೆಂಟ್​ ಮಾಡಿದ ಸಿಎಂ ಪೇ ಸಿಎಂ ಹಾಗೂ ಪೇಮೆಂಟ್​ ಪಡೆದ ಮೇಡಂ ಪೇ ಕಾಂಗ್ರೆಸ್​ ಮೇಡಂ ಎಂದು ಲೇವಡಿ ಮಾಡಿದ್ದಾರೆ.


ಸಿದ್ದರಾಮಯ್ಯ ಏನೋ ರಾಜ್ಯದಲ್ಲಿ ಪೇಸಿಎಂ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಆದರೆ ಈ ಅಭಿಯಾನದಿಂದ ಡಿಕೆಶಿ ಬುದ್ಧಿವಂತಿಕೆಯಿಂದಲೇ ಹಿಂದೆ ಇದ್ದಾರೆ. ಸಿದ್ದರಾಮಯ್ಯರನ್ನು ಹೊಡೆಯಬೇಕು ಅಂತಾನೇ ಡಿಕೆಶಿ ಸಿದ್ದರಾಮಯ್ಯರಿಂದಲೇ ಪೇಸಿಎಂ ಅಭಿಯಾನ ಮಾಡಿಸುತ್ತಿದ್ದಾರೆ. ನಮ್ಮ ಬಾಯಲ್ಲಿ ಸಿದ್ದರಾಮಯ್ಯ ವಿರುದ್ಧ ಮಾತು ಬರಲಿ ಅಂತಾನೇ ಡಿಕೆಶಿ ಈ ಪ್ಲಾನ್​ ಮಾಡಿದ್ದಾರೆ. ಪೇ ಸಿಎಂ ಅಭಿಯಾನ ಇರೋದೇ ಸಿದ್ದರಾಮಯ್ಯ ವಿರುದ್ಧ, ಆದರೆ ಡಿಕೆಶಿ ಇದನ್ನು ನೇರವಾಗಿ ಹೇಳದೇ ಈ ರೀತಿ ಮಾಡ್ತಿದ್ದಾರೆ ಎಂದು ಟಾಂಗ್​ ನೀಡಿದ್ದಾರೆ.

ಇದನ್ನು ಓದಿ : Madhuri Dixit: ತಾಯ್ತನದ ಸವಾಲುಗಳನ್ನು ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್​

ಇದನ್ನೂ ಓದಿ: Oscar Award : ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್- ಮರೆಯಲಾರದ ಅನುಭವ ಎಂದ ನಿರ್ದೇಶಕ

‘Siddaramaiah was the CM who paid money to Sonia Gandhi’: Naleen Kumar Kateel alleges

Comments are closed.