ವಿಜಯಪುರ: Naleen Kumar Kateel :ರಾಜ್ಯದಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐನಂತಹ ಸಂಘಟನೆಗಳು ಬೆಳೆಯಲು ಮೊದಲ ಕಾರಣವೇ ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರಿಂದಲೇ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸಿದ್ದರಾಮಯ್ಯ ಅಧಿಕಾರವಾಧಿಯಲ್ಲಿಯೇ ರಾಜ್ಯದಲ್ಲಿ ದೇಶ ವಿರೋಧಿ ಸಂಘಟನೆಗಳು ಹೆಚ್ಚೆಚ್ಚು ಬೆಳೆದುಕೊಂಡಿದೆ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರವನ್ನು ಕೈಗೊಂಡಿದೆ. ದೇಶಾದ್ಯಂತ ಎನ್ಐಎ ಪಿಎಫ್ಐ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಿವಾಸದ ಮೇಲೆ ದಾಳಿ ನಡೆಸುತ್ತಿದೆ. ಅಲ್ಲದೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರನ್ನು ಬಂಧಿಸಲಾಗಿದೆ. ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಬೇಕು ಅಂತಾ ದೇಶಭಕ್ತರು ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ನಾವು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡ್ತಿದ್ದೇವೆ. ರಾಜ್ಯದಲ್ಲಿ ಇಂತಹ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿ ಇಡಲು ಕಟ್ಟುನಿಟ್ಟಿನ ಕ್ರಮದ ಜೊತೆಯಲ್ಲಿ ಗಟ್ಟಿ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಪಿಎಫ್ಐ ಮೇಲಿನ ರಾಜಕೀಯ ಪ್ರೇರಿತ ಎಂಬ ಆರೋಪದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಎಲ್ಲದ್ದಕ್ಕೂ ರಾಜಕೀಯ ಪ್ರೇರಿತ ಅಂತಾರೆ. ಭಯೋತ್ಪಾದನೆ ಮಾಡಲು ರಾಜಕೀಯವಾಗಿ ಪ್ರೇರಣೆ ನೀಡಿದವರು ಯಾರು..? ಎಂದು ನಳೀನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಒಬ್ಬ ಪೇ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಯಾರಾದರೂ ಪೇಮೆಂಟ್ ಮುಖ್ಯಮಂತ್ರಿ ಅಂತಾ ಇದ್ದರೆ ಅದು ಕೇವಲ ಸಿದ್ದರಾಮಯ್ಯ ಮಾತ್ರ. ಪೇಮೆಂಟ್ ಮಾಡಿಕೊಂಡು ಸಿದ್ದರಾಮಯ್ಯ ಸಿಎಂ ಕುರ್ಚಿ ಏರಿದ್ದರು. ಸೋನಿಯಾ ಗಾಂಧಿಗೆ ಪೇಮೆಂಟ್ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ರಂತಹ ಸೀನಿಯರ್ಗಳು ಹಾಗೂ ಡಿಕೆ ಶಿವಕುಮಾರ್ ಮತ್ತು ದೇಶಪಾಂಡೆಯಂತಹ ನಾಯಕರು ಇರುವಾಗಲೇ ಸಿದ್ದರಾಮಯ್ಯ ರಾಜ್ಯದ ಸಿಎಂ ಗದ್ದುಗೆ ಏರಿದ್ದು ಪೇಮೆಂಟ್ ಮಾಡಿಕೊಂಡು. ಮೇಡಂಗೆ ಕಾಲ್ ಮಾಡಿ ಪೇಮೆಂಟ್ ಮಾಡಿ ಸಿಎಂ ಕುರ್ಚಿ ಭದ್ರಮಾಡಿಕೊಂಡವರು ಸಿದ್ದರಾಮಯ್ಯ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಪೇ ಸಿಎಂ ಎಂಬ ಮಾತಿನಲ್ಲಿ ಎರಡು ಅರ್ಥವಿದೆ. ಒಂದು ಪೇ ಸಿದ್ದರಾಮಯ್ಯ, ಇನ್ನೊಂದು ಪೇ ಕಾಂಗ್ರೆಸ್ ಮೇಡಂ. ಪೇಮೆಂಟ್ ಮಾಡಿದ ಸಿಎಂ ಪೇ ಸಿಎಂ ಹಾಗೂ ಪೇಮೆಂಟ್ ಪಡೆದ ಮೇಡಂ ಪೇ ಕಾಂಗ್ರೆಸ್ ಮೇಡಂ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಏನೋ ರಾಜ್ಯದಲ್ಲಿ ಪೇಸಿಎಂ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಆದರೆ ಈ ಅಭಿಯಾನದಿಂದ ಡಿಕೆಶಿ ಬುದ್ಧಿವಂತಿಕೆಯಿಂದಲೇ ಹಿಂದೆ ಇದ್ದಾರೆ. ಸಿದ್ದರಾಮಯ್ಯರನ್ನು ಹೊಡೆಯಬೇಕು ಅಂತಾನೇ ಡಿಕೆಶಿ ಸಿದ್ದರಾಮಯ್ಯರಿಂದಲೇ ಪೇಸಿಎಂ ಅಭಿಯಾನ ಮಾಡಿಸುತ್ತಿದ್ದಾರೆ. ನಮ್ಮ ಬಾಯಲ್ಲಿ ಸಿದ್ದರಾಮಯ್ಯ ವಿರುದ್ಧ ಮಾತು ಬರಲಿ ಅಂತಾನೇ ಡಿಕೆಶಿ ಈ ಪ್ಲಾನ್ ಮಾಡಿದ್ದಾರೆ. ಪೇ ಸಿಎಂ ಅಭಿಯಾನ ಇರೋದೇ ಸಿದ್ದರಾಮಯ್ಯ ವಿರುದ್ಧ, ಆದರೆ ಡಿಕೆಶಿ ಇದನ್ನು ನೇರವಾಗಿ ಹೇಳದೇ ಈ ರೀತಿ ಮಾಡ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಇದನ್ನು ಓದಿ : Madhuri Dixit: ತಾಯ್ತನದ ಸವಾಲುಗಳನ್ನು ಹಂಚಿಕೊಂಡ ನಟಿ ಮಾಧುರಿ ದೀಕ್ಷಿತ್
ಇದನ್ನೂ ಓದಿ: Oscar Award : ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್- ಮರೆಯಲಾರದ ಅನುಭವ ಎಂದ ನಿರ್ದೇಶಕ
‘Siddaramaiah was the CM who paid money to Sonia Gandhi’: Naleen Kumar Kateel alleges
Comments are closed.