tumkur farmer gets new vehicle :ಮಹೀಂದ್ರಾ ಶೋರೂಂನಲ್ಲಿ ಅವಮಾನಕ್ಕೊಳಗಾಗಿದ್ದ ರೈತನ ಮನೆ ತಲುಪಿದ ಹೊಸ ಗೂಡ್ಸ್​ ವಾಹನ

tumkur farmer gets new vehicle :ಮಹೀಂದ್ರಾ ಶೋರೂಂಗೆ ಹೊಸ ಗೂಡ್ಸ್​ ವಾಹನ ಖರೀದಿಗೆಂದು ತೆರಳಿದ್ದ ತುಮಕೂರಿನ ರಾಮನಪಾಳ್ಯದ ರೈತನ ಮನೆಗೆ ಮಹೀಂದ್ರಾ ಕಂಪನಿಯು ಹೊಸ ಗೂಡ್ಸ್​ ವಾಹನವನ್ನು ಕಳುಹಿಸಿಕೊಟ್ಟಿದೆ. ನಿನ್ನೆ ರೈತ ಕೆಂಪೇಗೌಡ ನಿವಾಸಕ್ಕೆ ಗೂಡ್ಸ್​ ವಾಹನವನ್ನು ತಲುಪಿಸಿದ ಮಹೀಂದ್ರಾ ಈ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.


ಜನವರಿ 21ರಂದು ವಾಹನ ಖರೀದಿಗೆ ಆಗಮಿಸಿದ್ದ ರೈತ ಕೆಂಪೇಗೌಡ ಹಾಗೂ ಅವರ ಸಿಬ್ಬಂದಿಗೆ ಮಹೀಂದ್ರಾ ಶೋರೂಂನಲ್ಲಿ ಆದ ಅನುಭವದ ಬಗ್ಗೆ ನಾವು ಕ್ಷಮೆಯಾಚಿಸುತ್ತಿದ್ದೇವೆ.ನಾವು ನೀಡಿದ ಭರವಸೆಯಂತೆಯೆ ಈ ಘಟನೆ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ಹಾಗೂ ಈ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಕೆಂಪೇಗೌಡರಿಗೆ ಮಹೀಂದ್ರಾ ಕುಟುಂಬಕ್ಕೆ ಸ್ವಾಗತ ಎಂದು ಮಹೀಂದ್ರಾ ಟ್ವೀಟ್ ಮಾಡಿದೆ.


ಈ ಟ್ವೀಟ್​ನ್ನು ಶೇರ್​ ಮಾಡಿರುವ ಆನಂದ್​ ಮಹೀಂದ್ರಾ ನನ್ನ ಕಡೆಯಿಂದಲೂ ಕೆಂಪೇಗೌಡರಿಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.


ತುಮಕೂರಿನ ರಾಮನಪಾಳ್ಯದಲ್ಲಿ ಬೊಲೆರೋ ಗೂಡ್ಸ್​ ವಾಹನ ಖರೀದಿ ಮಾಡಲೆಂದು ಯುವರೈತರಾದ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಕೆಂಪೇಗೌಡರಿಗೆ ಮಹೀಂದ್ರಾ ಶೋರೂಂನ ಸಿಬ್ಬಂದಿ ಅವಮಾನ ಮಾಡಿದ್ದರು. ಹತ್ತು ರೂಪಾಯಿ ಹಣ ನೀಡುವ ಯೋಗ್ಯತೆ ಇಲ್ಲ ಎಂದು ಮಹೀಂದ್ರಾ ಸೇಲ್ಸ್​ ಏಜೆಂಟ್​​ ಕೇಂಪೇಗೌಡರಿಗೆ ಅವಮಾನ ಮಾಡಿದ್ದರು. ಇದರಿಂದ ವಿಪರೀತ ಕೋಪಗೊಂಡಿದ್ದ ಕೆಂಪೇಗೌಡ ಕೇವಲ 1 ಗಂಟೆ ಅವಧಿಯಲ್ಲಿ ಹಣವನ್ನು ಹೊಂದಿಸಿದ್ದರು. ಆದರೂ ಕೂಡ ವಾಹನ ನೀಡಲು ನಿರಾಕರಿಸಿದ್ದ ಸೇಲ್ಸ್​ ಏಜೆಂಟ್​ ಮೂರ್ನಾಲ್ಕು ದಿನಗಳಲ್ಲಿ ನೀಡುತ್ತೇವೆ ಎಂದು ಬೇಜವಾಬ್ದಾರಿಯ ಮಾತುಗಳನ್ನಾಡಿದ್ದರು. ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಮಹೀಂದ್ರಾ ಕಂಪನಿಯ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

tumkur farmer gets new vehicle anand mahindra tweets and wishes him updates here

ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಇದನ್ನೂ ಓದಿ : bs yediyurappa grand daughter soundarya : ಸೌಂದರ್ಯ ಆತ್ಮಹತ್ಯೆ ಪ್ರಕರಣ: ನಿಜಕ್ಕೂ ಅಪಾರ್ಟ್​ಮೆಂಟ್​ನಲ್ಲಿ ನಡೆದದ್ದೇನು..?ಇಲ್ಲಿದೆ ಡಿಟೈಲ್ಸ್​

Comments are closed.