ಹಸೆ‌ಮಣೆ‌ ಏರಿದ್ದ ಅಣ್ಣನ ಕೈಯಲ್ಲಿದ್ದ ತಾಳಿ ಕಸಿದು ವಧುವಿಗೆ ಕಟ್ಟಿದ ತಮ್ಮ..!!!

ಚೆನ್ನೈ : ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತೆ ಅನ್ನೋ ಮಾತೊಂದಿದೆ. ಈ ಸ್ಟೋರಿ ನೋಡಿದ್ರೆ ಈ ಮಾತು ಅಕ್ಷರಶಃ ನಿಜ ಅನ್ನಿಸುತ್ತೆ. ಅಣ್ಣನ‌ ಮದುವೆಗೆ ಸಿದ್ದತೆ ನಡೆದು, ವಧು ವರ ಹಸೆಮಣೆ ಏರಿದ್ದರು. ಇನ್ನೇನು ತಾಳಿ ಕಟ್ಟಬೇಕು ಅನ್ನೋ ಹೊತ್ತಲ್ಲಿ,‌ ಅಣ್ಣನ ಕೈಯಲ್ಲಿದ ತಾಳಿ ಕಸಿದು ತಮ್ಮ ವಧುವಿಗೆ ತಾಳಿ ಅಚ್ಚರಿಯ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ತಮಿಳುನಾಡಿನ ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ಮದುವೆ ಯೊಂದು ನಡೆಯುತಿತ್ತು. ಮದುವೆಯ ಮಂಟಪದಲ್ಲಿ ವಧು ವರರು‌ ಹಸೆಮಣೆ ಏರಿದ್ದರು. ಪುರೊಕಹಿತರು ವೇದ ಮಂತ್ರ ಪಠಿಸುತ್ತಿದ್ದರು. ಸಂಬಂಧಿಕರು ಶುಭ‌ಹಾರೈಸಲು ಕಾತರರಾಗಿದ್ದರು. ವರ‌ ಇನ್ನೇನು ವಧುವಿಗೆ ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಆ ವೇಳೆಯಲ್ಲಿ ನೆರೆದಿದ್ದವರಿಗೆ ಅಲ್ಲೊಂದು ಅಚ್ಚರಿ‌ ಕಾದಿತ್ತು.

ಪುರೋಹಿತರು ವರನ ಕೈಗೆ ತಾಳಿಕೊಟ್ಟು ವಧುವಿಗೆ ಕಟ್ಟುವಂತೆ ಸೂಚಿಸಿದ್ದಾರೆ. ಮದುಮಗ ತಾಳಿ ಕೈಯಲ್ಲಿ ಹಿಡಿದು ವಧುವಿಗೆ ಕಟ್ಟಲು ಮುಂದಾಗಿದ್ದ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ತಮ್ಮ ಅಣ್ಣನ ಕೈಯಲ್ಲಿ ಇದ್ದ ತಾಳಿಯನ್ನು ಕಸಿದಿದ್ದಾನೆ. ಎಲ್ಲರೂ ನೋಡ‌ ನೋಡುತ್ತಿದ್ದಂತೆಯೇ ವಧುವಿಗೆ ತಾಳಿಕಟ್ಟಿದ್ದಾನೆ. ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಮದುವೆ ನಡೆದು ಹೋಗಿತ್ತು.

ಅಷ್ಟಕ್ಕೂ ವಧು ಹಾಗೂ ವರನ‌ ತಮ್ಮ ಪರಸ್ಪರ ಪ್ರೀತಿಸಿತ್ತಿದ್ದರು. ಈ ವಿಚಾರ‌ ಮನೆಯವರಿಗೆ ಗೊತ್ತೇ ಇರಲಿಲ್ಲ. ಮದುವೆಯ ವಿಚಾರ ಮನೆಗೆ ತಿಳಿಸುವ‌ ಮೊದಲೇ ಪ್ರಿಯತಮನ ಅಣ್ಣನ ಜೊತೆಗೆ ವಧುವಿನ ಮದುವೆ‌ ನಿಗದಿಯಾಗಿತ್ತು. ಕೊನೆಗೆ ಇಬ್ಬರ ಮದುವೆಗೆ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ವರ ಮಾತ್ರ ‌ಅವಮಾನಿತನಾಗಿ‌ ಮದುವೆ‌ ಮಂಟಪದಿಂದ ಹೊರ ನಡೆಸಿದ್ದಾನೆ.

Comments are closed.