ವಂದೇ ಭಾರತ್​ ರೈಲು ವಿವಾದ : ಮಂಗಳೂರಿಗರಿಗೆ ಭಾರೀ ನಿರಾಶೆ

ಮಂಗಳೂರು : ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎಂಬಂಥಾ ಸ್ಥಿತಿಯಲ್ಲಿ ಸದ್ಯ ಮಂಗಳೂರಿಗರಿದ್ದಾರೆ. ಏಕೆಂದರೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್​ ಸೆಕ್ಷನ್​ ವಿದ್ಯುದೀಕರಣ […]

Vande Bharta Train Controversy

ಮಂಗಳೂರು : ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎಂಬಂಥಾ ಸ್ಥಿತಿಯಲ್ಲಿ ಸದ್ಯ ಮಂಗಳೂರಿಗರಿದ್ದಾರೆ. ಏಕೆಂದರೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲು ಮಾರ್ಗದಲ್ಲಿ ಬಾಕಿಯಿದ್ದ ಘಾಟ್​ ಸೆಕ್ಷನ್​ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿತ್ತು. ಇನ್ನು ವಂದೇ ಭಾರತ್​ ರೈಲಿನ ಸೌಲಭ್ಯ ಅನುಭವಿಸಬಹುದು. ರಾಜಧಾನಿಗೆ ತ್ವರಿತ ಪ್ರಯಾಣ ಕೈಗೊಳ್ಳಬಹುದು ಎಂದೆಲ್ಲಾ ಕನಸು ಕಂಡಿದ್ದ ಕರಾವಳಿಗರಿಗೆ ಭಾರೀ ನಿರಾಶೆಯುಂಟಾಗಿದೆ.

ಹೌದು..! ಕರ್ನಾಟಕದ ಕರಾವಳಿಯ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಮಂಗಳೂರಿನಲ್ಲಿ ವಂದೇ ಭಾರತ್​ ರೈಲು ನಿಲುಗಡೆಯಾಗುತ್ತಿಲ್ಲ. ಭಾರತೀಯ ರೈಲ್ವೆ ಇಲಾಖೆಯ ಈ ನಿರ್ಧಾರ ಕರಾವಳಿಗರಿಗೆ ಶಾಕ್​ ಉಂಟು ಮಾಡಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ವಂದೇ ಭಾರತ್​ ರೈಲು ಕರ್ನಾಟಕದ ಕರಾವಳಿಯಲ್ಲಿಯೂ ನಿಲುಗಡೆ ಇರಲಿದೆ ಎಂದು ಹೇಳಿದ್ದರು. ಮಂಗಳೂರು ರೈಲ್ವೆ ನಿಲ್ದಾಣದಿಂದ ಹಾದು ಹೋಗುತ್ತಿದ್ದರೂ ಇಲ್ಲಿ ಸ್ಟಾಪ್​ ನೀಡದೇ ಇರುವುದು ಮಂಗಳೂರಿಗರ ಕೆಂಗಣ್ಣಿಗೆ ಗುರಿ ಮಾಡಿದೆ.

ಇದನ್ನೂ ಓದಿ: ಕಾರ್ಕಳ : ಅಂಬೇಡ್ಕರ್​ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ : ಹಲವು ಬೇಡಿಕೆಗಳ ಈಡೇರಿಕೆಯ ಅಭಯ

ಯಶವಂತಪುರ ಮಡಂಗಾವ್​ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪುತ್ತದೆ. ಅಂತೆಯೇ ಮಡಂಗಾವ್​ನಿಂದ ಬೆಳಗ್ಗೆ 5:15ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುತ್ತದೆ. ಈ ರೈಲಿನಲ್ಲಿ ಸುಬ್ರಹ್ಮಣ್ಯದಲ್ಲಿ ಮಾತ್ರ ನಿಲುಗಡೆಗೆ ಸೂಚಿಸಲಾಗಿದೆ. ಪಡೀಲ್​ ರೈಲ್ವೆ ನಿಲ್ದಾಣ ಮಾರ್ಗದಲ್ಲಿಯೇ ಹಾದು ಹೋಗುತ್ತಿದ್ದರೂ ಸಹ ಮಂಗಳೂರಿಗರಿಗೆ ಸ್ಟಾಪ್​ ನೀಡದೇ ಇರುವುದು ವಿವಾದಕ್ಕೆ ದಾರಿ ಮಾಡಿದೆ. ಉಡುಪಿ ಹಾಗೂ ಕಾರವಾರ ನಿಲ್ದಾಣಗಳಲ್ಲಿಯೂ ನಿಲುಗಡೆ ನೀಡದೇ ಇರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

About The Author

Scroll to Top