Email message creates panic: ಮಂಗಳೂರಿನ ಆರ್​ಟಿಓ ಕಚೇರಿ ಸ್ಫೋಟಕ್ಕೆ ಕಿಡಿಗೇಡಿಗಳ ಹುನ್ನಾರ : ಆತಂಕ ಸೃಷ್ಠಿಸಿದ ಮೇಲ್​ ಸಂದೇಶ

Email message creates panic: ಮಂಗಳೂರಿನ ಆರ್​ಟಿಓ ಕಚೇರಿಯ ಅಧಿಕೃತ ಮೇಲ್​ಗೆ ಕಿಡಿಗೇಡಿಗಳು ಬಾಂಬ್​ ಬೆದರಿಕೆಯ ಸಂದೇಶ ಕಳುಹಿಸಿದ ಘಟನೆ ವರದಿಯಾಗಿದೆ. ಮಂಗಳೂರಿನ ನೆಹರೂ ಮೈದಾನದ ಸಮೀಪ ಇರುವ ಆರ್​ಟಿಓ ಕಚೇರಿಗೆ ಮೇಲ್​ ಮಾಡಿರುವ ಕಿಡಿಗೇಡಿಗಳು 5 ಕಡೆಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ .

ಮಂಗಳೂರು(Mangaluru) ಆರ್​ಟಿಓ ಕಚೇರಿಯ ಅಧಿಕೃತ ಮೇಲ್​ಗೆ ನಿನ್ನೆ ರಾತ್ರಿಯೇ ಬಾಂಬ್​ ಬೆದರಿಕೆ ಕರೆಯ ಮೇಲ್​ ಬಂದಿತ್ತು. ಆದರೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಇದನ್ನು ಆರ್​ಟಿಓ ಅಧಿಕಾರಿಗಳು ಗಮನಿಸಿದ್ದಾರೆ. ಈ ಮೇಲ್​ನಲ್ಲಿ 5 ಕಡೆಗಳಲ್ಲಿ ಬಾಂಬ್​ ಇರಿಸಿದ್ದೇವೆ ಎಂದು ಕಿಡಿಗೇಡಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್​ಟಿಓ ಕಚೇರಿ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಇದಾದ ಬಳಿಕ ಬಾಂಬ್​ ನಿಷ್ಕ್ರಿಯ ದಳ , ಎಎಸ್​ಸಿಬಿಡಿಎಸ್​ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ .

Also Read: ಬೆಳ್ತಂಗಡಿ : ಅಕ್ರಮ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿ ಬಂಧನ ; ಮನೆ, ಕೊಟ್ಟಿಗೆ ಜಪ್ತಿ

ಮೇಲ್​ನಲ್ಲಿ ಏನಿದೆ ?

aarna aswin sekar@outlook.com ಮೇಲ್ ವಿಳಾಸದಿಂದ ಈ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಆರ್​ಟಿಓನ ಐದು ಕಡೆ ಬಾಂಬ್​ ಸ್ಫೋಟಿಸಲಾಗುವುದು. ಪಾಕಿಸ್ತಾನ ಐಎಸ್ಐ ಸೆಲ್ ಮಾಜಿ LTTE ಗಳ ಜೊತೆ ರಿಮೋಟ್ ಔಟ್ ಆಪರೇಷನ್ ಮಾಡಲು ‌ನಿರ್ಧರಿಸಿದೆ ಎಂದೆಲ್ಲ ಈ ಮೇಲ್​ನಲ್ಲಿ ತಿಳಿಸಲಾಗಿದೆ. ತಮಿಳುನಾಡು ರಾಜಕೀಯ ವಿಚಾರವಾಗಿಯೂ ಬರೆದಿರುವ ಕಿಡಿಗೇಡಿಗಳು ಸಜ್ಜನ್​ ಹೈದರ್​ PAF ಗೆ ಜಿಂದಾಬಾದ್ ಎಂದೂ ಉಲ್ಲೇಖಿಸಿದ್ದಾರೆ. ಈ ಮೇಲ್​ನಲ್ಲಿ ತಮಿಳುನಾಡಿನ ಐಪಿಎಸ್​ ಅಧಿಕಾರಿಗಳ ಹೆಸರನ್ನೂ ಬರೆಯಲಾಗಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories