ನದಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ 12 ಮಂದಿ ನೀರುಪಾಲು

ಲಕ್ನೋ : ಸ್ನಾನ ಮಾಡಲು ನದಿಗೆ ಇಳಿದ ಒಂದೇ ಕುಟುಂಬದ 12 ಮಂದಿ ನೀರು ಪಾಲಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ನಡೆದಿದೆ.

Sarayu river ayodhya
ನದಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ 12 ಮಂದಿ ನೀರುಪಾಲು 3

ಅಯೋಧ್ಯೆಯಲ್ಲಿರುವ ಶ್ರೀರಾಮನ ದರ್ಶನ ಪಡೆಯುವ ಸಲುವಾಗಿ ಆಗ್ರಾ ಮೂಲದ ಒಂದೇ ಕುಟುಂಬದ 15 ಮಂದಿ ಆಗಮಿಸಿದ್ದರು. ಇಲ್ಲಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆಯಲ್ಲಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದರಿಂದಾಗಿ ಓರ್ವ ವ್ಯಕ್ತಿ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಇದರಿಂದಾಗಿ ಕೊಚ್ಚಿ ಹೋದಾತನ ರಕ್ಷಣೆಗೆ ಇಳಿದ ಇತರರು ಕೂಡ ನೀರುಪಾಲಾಗಿದ್ದಾರೆ.

Sarayu river ayodhya 2
ನದಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ 12 ಮಂದಿ ನೀರುಪಾಲು 4

ಕೂಡಲೇ ರಕ್ಷಣೆಗೆ ಧಾವಿಸಿದ ಸ್ಥಳೀಯರು ಮೂವರನ್ನು ರಕ್ಷಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದುದೆ ಘಟನೆಗೆ ಕಾರಣ ಎನ್ನಲಾಗುತ್ತಿದೆ.

Comments are closed.