ಮದ್ಯ ಸಿಗಲಿಲ್ಲವೆಂದು ಸ್ಯಾನಿಟೈಸರ್ ಕುಡಿದು 7 ಮಂದಿ ಸಾವು…!!!

ಮುಂಬೈ : ಲಾಕ್‍ಡೌನ್ ಘೋಷಣೆಯ ಬೆನ್ನಲ್ಲೇ  ಮದ್ಯದಂಗಡಿಗಳು ಬಂದ್ ಆಗಿದೆ. ಮದ್ಯಪ್ರಿಯರು ಅಂಗಡಿಗಳತ್ತ ಹೆಜ್ಜೆ ಹಾಕಿ ನಿರಾಸೆ ಯಿಂದ ಹಿಂದಿರು ಗುತ್ತಿದ್ದಾರೆ. ಅದ್ರಲ್ಲೂ ಮದ್ಯ ಸಿಗದ ಹಿನ್ನೆಲೆಯಲ್ಲಿ 7 ಮಂದಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಏಳು ಜನರು ಸಹ ಸಾವನ್ನಪ್ಪಿದ್ದಾರೆ.

drinks injures to health

ಮಹಾರಾಷ್ಟ್ರದ ತೆಲಿಫೀಲ್ ಮತ್ತು ಆಯತ್ ನಗರಗಳಲ್ಲಿ ಈ ಘಟನೆ ನಡೆದಿದೆ. ದತ್ತಾ ಲಾಂಜೇವಾರ್ ಮತ್ತು ನೂತನ್ ಎಂಬವರು ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದರು. ರಾತ್ರಿ ತಲೆನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಲಿದ್ದಾರೆ. ಇನ್ನು ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಎಂಬವರು ಮೃತಪಟ್ಟಿದ್ದಾರೆ.

ಮೃತಪಟ್ಟವರ ಮೃತ ದೇಹಗಳ ಮರಣೋತ್ತರ ಕಾರ್ಯ ನಡೆಸಲಾಗು ತ್ತಿದೆ. ಪ್ರತ್ಯೇಕ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.