rain damage in Bangalore: ರಾಜ್ಯ ರಾಜಧಾನಿಯಲ್ಲಿ ನೆರೆ ಹಾನಿ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್ನಿಂದ ಸಮಿತಿ ರಚನೆ
ಬೆಂಗಳೂರು :rain damage in Bangalore : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿದೆ. ಮಹದೇವಪುರ ಹಾಗೂ ಬೆಳ್ಳಂದೂರು ವ್ಯಾಪ್ತಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಈ ರೀತಿಯ ನೆರೆ ಪರಿಸ್ಥಿತಿ ಉಂಟಾಗಲು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಾಡಲಾದ ಒತ್ತುವರಿ ಕಾರಣ ಎಂದು ಹೇಳಿದೆ. ಈ ಎಲ್ಲದರ ನಡುವೆ ರಾಜ್ಯ ಕಾಂಗ್ರೆಸ್ ಮಳೆ ಹಾಗೂ ಪ್ರವಾಹ ಹಾನಿಯ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲು ಬೆಂಗಳೂರಿನಲ್ಲಿ ವಿಶೇಷ ಸಮಿತಿಯೊಂದನ್ನು ರಚನೆ ಮಾಡಿದೆ.
ರಾಜ್ಯ ಕಾಂಗ್ರೆಸ್ನಿಂದ ನಿರ್ಮಿತವಾದ ಈ ಸಮಿತಿಯಲ್ಲಿ ಕೃಷ್ಣ ಬೈರೇಗೌಡ, ಪದ್ಮಾವತಿ ಸೇರಿದಂತೆ ಅನೇಕ ಸದಸ್ಯರಿದ್ದು ಈ ಸಮಿತಿಯ ನೇತೃತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ವಹಿಸಿದ್ದಾರೆ. ಬೆಂಗಳೂರಿನ ಜನತೆಯಿಂದ ಮುಂದಿನ 15 ದಿನಗಳ ಒಳಗಾಗಿ ಆನ್ಲೈನ್ ಮುಖಾಂತರ ನೆರೆ ಹಾನಿ ಕುರಿತಂತೆ ಅಭಿಪ್ರಾಯವನ್ನು ಸಂಗ್ರಹಿಸಲು ಈ ಸಮಿತಿಯು ಮುಂದಾಗಿದೆ.
ಈ ವಿಚಾರವಾಗಿ ಇಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬೆಂಗಳೂರಿನ ಜನತೆಯ ಪಾಲಿಗೆ ನಾವು ಧ್ವನಿಯಾಗಲು ನಿರ್ಧರಿಸಿದ್ದೇವೆ. ಪ್ರವಾಹ ಪೀಡಿತ ಜನತೆಗೆ ಸೂಕ್ತ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸೂಕ್ತ ಚರ್ಚೆಯನ್ನು ನಡೆಸಲು ರಾಜ್ಯ ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕುದೆ. ಪ್ರವಾಹದಿಂದಾಗಿ ಮನೆಯನ್ನು ಕಳೆದುಕೊಂಡವರಿಗೆ 5 ಲಕ್ಷಗಳವರೆಗೆ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನೇಕರು ಭಾರೀ ಮಳೆಯಿಂದಾಗಿ ಮನೆಯ ಕೆಲವು ಅಗತ್ಯ ವಸ್ತುಗಳನ್ನು ಕಳೆದುಕೊಂಡಿದ್ದಾರೆ . ಇಂತವರ ಕಡೆಯೂ ಸರ್ಕಾರ ಗಮನಹರಿಸಬೇಕು. ಸರ್ಕಾರವು ನೆರೆ ಪೀಡಿತರಿಗಾಗಿ ಸಹಾಯವಾಣಿಗಳನ್ನು ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ನೆರೆ ಅನಾಹುತಕ್ಕೆ ಮಾಧ್ಯಮಗಳು ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ್ದ ಸಂಸದ ತೇಜಸ್ವಿ ಸೂರ್ಯರಿಗೂ ಇದೇ ವೇಳೆ ಟಾಂಗ್ ನೀಡಿದ ಅವರು, ಸ್ವತಃ ಅಟಲ್ ಬಿಹಾರಿ ವಾಜಪೇಯಿ ಬೆಂಗಳೂರಿನ ಸೌಂದರ್ಯವನ್ನು ಹೊಗಳಿದ್ದರು. ಆದರೆ ಅದರ ಘನತೆಯನ್ನು ಈಗಿನ ಬಿಜೆಪಿ ಸರ್ಕಾರ ಕಳೆಯುತ್ತಿದೆ. ನಾವು ಬೆಂಗಳೂರಿನ ಘನತೆಯನ್ನು ಹೆಚ್ಚಿಸಲು ಯತ್ನಿಸುತ್ತಿದ್ದೇವೆ. ಹೀಗಾಗಿ ಬೆಂಗಳೂರು ಜನತೆಯ ಧ್ವನಿಯಾಗುವ ಸಲುವಾಗಿ ಈ ಸಮಿತಿ ರಚಿಸಿದ್ದೇವೆ ಎಂದು ಹೇಳಿದರು .
ಇದನ್ನು ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?
ಇದನ್ನೂ ಓದಿ : leopard in Tumkur : ಬರಿಗೈನಲ್ಲಿ ಚಿರತೆ ಸೆರೆ ಹಿಡಿದ ಮೂವರು ಯುವಕರು : ಮೈ ಝುಂ ಎನ್ನಿಸುತ್ತೆ ಈ ಭಯಾನಕ ವಿಡಿಯೋ
Congress has formed a committee to collect people’s opinion regarding rain damage in Bangalore
Comments are closed.