hd kumaraswamy : ಪಿಎಸ್​ಐ ನೇಮಕಾತಿ ಅಕ್ರಮ ಹೊರಬರಲು ಬಿಜೆಪಿಗರೇ ಕಾರಣ ಎಂದ ಹೆಚ್​​.ಡಿ ಕುಮಾರಸ್ವಾಮಿ

ರಾಮನಗರ :hd kumaraswamy :ರಾಜ್ಯದಲ್ಲಿ ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಈಗಾಗಲೇ ಈ ಪ್ರಕರಣದಲ್ಲಿ ಸಾಕಷ್ಟು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ಸಿಐಡಿ ಖೆಡ್ಡಾಗೆ ಬೀಳುತ್ತಲೇ ಇದ್ದಾರೆ. ಈ ಎಲ್ಲದರ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಈ ಪ್ರಕರಣ ಸಂಬಂಧ ಹೊಸ ಬಾಂಬ್​ ಸಿಡಿಸಿದ್ದಾರೆ. ಪೊಲೀಸರೇ ಈ ಅಕ್ರಮವನ್ನು ಹೊರತಂದಿದ್ದಾರೆ. ಬಿಜೆಪಿ ನಾಯಕರು ಪೊಲೀಸ್​ ಕಮಿಷನರ್​​ ಕಮಲ್​ ಪಂತ್​ ವಿರುದ್ಧ ಮಾತನಾಡಿದ ಪರಿಣಾಮವಾಗಿ ಈ ಹಗರಣ ಹೊರ ಬಂದಿದೆ ಎಂದು ಹೇಳಿದರು.


ಬಿಜೆಪಿ ನಾಯಕರು ನಿಷ್ಠಾವಂತ ಪೊಲೀಸ್ ಅಧಿಕಾರಿ ಕಮಲ್​ ಪಂತ್​ ವಿರುದ್ಧ ಮಾತನಾಡಿದ್ದರು. ಚಂದ್ರು ಕೊಲೆ ಪ್ರಕರಣದಲ್ಲಿ ಕಮಲ್​ ಪಂತ್​ ಸುಳ್ಳು ಹೇಳುತ್ತಿದ್ದಾರೆ ಎಂಬುದು ಬಿಜೆಪಿಯ ಆರೋಪವಾಗಿತ್ತು. ಕಮಲ್​ ಪಂತ್​ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಟ್ಟುಕೊಂಡ ಅಧಿಕಾರಿಯಲ್ಲ. ಆದರೆ ಬಿಜೆಪಿಯ ಈ ಸುಳ್ಳು ಆರೋಪದಿಂದ ಕೆರಳಿದ ಕಮಲ್​ ಪಂತ್​ ಬೆಂಬಲಿತ ಅಧಿಕಾರಿಗಳು ಈ ಹಗರಣವನ್ನು ಹೊರ ತಂದಿದ್ದಾರೆ. ಇಲ್ಲವಾದಲ್ಲಿ ಬಿಜೆಪಿ ಸರ್ಕಾರವು ಈ ಹಗರಣವನ್ನು ಮುಚ್ಚಿ ಹಾಕುತ್ತಿತ್ತು ಎಂದು ಹೇಳಿದ್ದಾರೆ.


ಈ ಹಿಂದೆ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸಿದವರೂ ಕೂಡ ಪಿಎಸ್​ಐ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಒಂದು ಪಕ್ಷಕ್ಕೆ ನಿಷ್ಟಾವಂತರಾಗಿ ಇದ್ದವರನ್ನು ಆಯ್ಕೆ ಮಾಡಲು ಹುನ್ನಾರ ನಡೆದಿತ್ತು. ಹಿಂದೂ ಹಿಂದೂ ಎಂದ ಜಪ ಮಾಡುವವರೇ ಸೇರಿ ಈ ಅಕ್ರಮಕ್ಕೆ ಯತ್ನಿಸಿದ್ದರು. ಸಚಿವ ಅಶ್ವತ್ಥ ನಾರಾಯಣ ಬಗ್ಗೆಯಂತೂ ಬಿಜೆಪಿಯಲ್ಲಿ ಇದ್ದವರೇ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ರು.

ಇದನ್ನು ಓದಿ : Asha Bhat : ನಾಯಕಿಯಿಂದ ಗಾಯಕಿ ಪಟ್ಟಕ್ಕೆ: ಇದು ರಾಬರ್ಟ್ ಬೆಡಗಿಯ ಹೊಸ ಕಹಾನಿ

ಇದನ್ನೂ ಓದಿ : Pooja Hegde : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ

psi scam revealed for bjp leaders speak against police commissioner kamal pant says hd kumaraswamy

Comments are closed.