Ramesh jarakiholi-DK Shivkumar: “ನನ್ನ ಡಿಕೆಶಿ ಸಂಬಂಧ ಹಾಳಾಗಲು ಬೆಳಗಾವಿ ಗ್ರಾಮೀಣ ಶಾಸಕಿ ಕಾರಣ” : ಜಾರಕಿಹೊಳಿ

ಬೆಳಗಾವಿ: (Ramesh jarakiholi-DK Shivkumar) ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಇಂದು ಬೆಳಗಾವಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನೀಡಿದ್ದು, ಸಿಡಿ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ರಿಲೀಸ್‌ ಮಾಡುವುದಾಗಿ ತಿಳಿಸಿದ್ದರು. ಅದರೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದೆ, ತನ್ನ ಡಿಕೆಶಿ ಸಂಬಂಧ ಹಾಳಾಗಲು ಕಾರಣ ಗ್ರಾಮೀಣ ಕ್ಷೇತ್ರದ ಶಾಸಕಿ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾರಕಿಹೊಳಿ ” ನಾನು ಡಿಕೆಶಿ ಅಣ್ಣ ತಮ್ಮಂದಿರಂತಿದ್ದೆವು. ಬೆಳಗಾವಿಯ ಗ್ರಾಮಂತರ ಶಾಸಕಿಯಿಂದ ನಮ್ಮ ಸಂಬಂಧ ಹಾಳಾಯ್ತು” ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳದೇ ಸಾಹುಕಾರ್‌ ಆರೋಪ ಮಾಡಿದ್ದಾರೆ. ಅಣ್ಣ- ತಮ್ಮಂದಿರ ಹಾಗೇ ನಾನು ಡಿಕೆಶಿ ಇದ್ದೆವು. ಅದು ಹಾಳಾಗಲು ಕಾರಣ ಬೆಳಗಾವಿಯ ಗ್ರಾಮೀಣ ಶಾಸಕಿ ಎಂದು ಕಿಡಿಕಾರಿದ್ದಾರೆ.

1985 ರಲ್ಲಿ ನಾನು ಹಾಗೂ ಡಿಕೆಶಿ ಇಬ್ಬರು ರಾಜಕೀಯಕ್ಕೆ ಎಂಟ್ರಿ ನೀಡಿದ್ದು. ನಾನು ಗೋಕಾಕ್‌ ವಿಧಾನ ಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಿ ಸೋತೆ. ಡಿಕೆಶಿ ಕೂಡ ಸೋತರು. ಅಂದು ಪಕ್ಷ ಬಿಡುವ ವೇಳೆ ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವೊಲಿಸಿದ್ದರು. ಇದಕ್ಕಾಗಿ ನಿನ್ನ ಪತಿ ಸರಿಯಿಲ್ಲ, ಹಾಗಾಗಿ ತಾನು ಪಕ್ಷ ತೊರೆಯುವುದಾಗಿ ಹೇಳಿದ್ದು, ಡಿಕೆಶಿ ಪತ್ನಿಗೆ ಹೇಳಿ ತಾನು ಕಾಂಗ್ರೆಸ್‌ ಪಕ್ಷವನ್ನು ಬಿಡುತ್ತಿದ್ದೇನೆ . ಒಳ್ಳೆಯ ಸ್ನೇಹಿತ ಹಾಗೂ ಗ್ರಾಮೀಣ ಶಾಸಕಿ ಸಲುವಾಗಿ ರಾಜ್ಯ ಹಾಳಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ಜಾರಕಿಹೊಳಿ ಸಿಡಿ ಬಗ್ಗೆ ಮಾತನಾಡಿದ್ದು, “ಅವರು ನೂರಾರು ಸಿಡಿ ಮಾಡಿದ್ದಾರೆ. ದೊಡ್ಡ ದೊಡ್ಡ ಉನ್ನತ ಹುದ್ದೆಯ ಅಧಿಕಾರಿಗಳ ಸಿಡಿ ಮಾಡಿದ್ದಾರೆ. ಈ ಗ್ಯಾಂಗ್‌ ಅನ್ನು ಸದೆ ಬಡಿಯಬೇಕಾದಲ್ಲಿ ಸಿಬಿಐ ತನಿಖೆಯಾಗಬೇಕು. ಈ ಮಹಿಳೆ ಮಾತನಾಡಿದಾಗ ನಾನು ಅವಳ ಬಗ್ಗೆ ಬೇರೆ ಮಾತನಾಡಿದ್ದೆ. ಅವಳ ಬಗ್ಗೆ ಮಾತನಾಡಿದ್ದನ್ನು ಕಟ್‌ ಮಾಡಿ ಕಿತ್ತೂರು ಚೆನ್ನಮ್ಮನ ಹೆಸರು ಹಾಕಿ ಎಡಿಟ್‌ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ , “ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿಕೆ ಶಿವಕುಮಾರ್‌ ನಾಲಾಯಕ್ಕು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ನೂರ ಇಪ್ಪತ್ತೆಂಟು ಸಾಕ್ಷಿಗಳಿಗೆ, ಆದರೆ ಯಾವುದನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ.” ಎಂದು ಡಿಕೆಶಿ ವಿರುದ್ದ ಸಾಹುಕಾರ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : Ramesh jarakiholi press meet: ರಮೇಶ್‌ ಜಾರಕಿಹೊಳಿ ಮಹತ್ವದ ಸುದ್ದಿಗೋಷ್ಠಿ: ಮಸಲತ್ತು ಮಾಡಿದ ನಾಯಕನ ರಿವಿಲ್‌ ಮಾಡಿದ ಸಾಹುಕಾರ

ಇದನ್ನೂ ಓದಿ : ಪಿ‌ಎಂ ಮೋದಿ ಕುರಿತಾದ ಸಾಕ್ಷ್ಯಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಬಾರೀ ಬೇಡಿಕೆ: ಕ್ಷೇತ್ರದ ಪ್ರಚಾರಕ್ಕೆ ರಾಜಾಹುಲಿ ಬೆನ್ನು ಬಿದ್ದ ಶಾಸಕರು

Ramesh jarakiholi-DK Shivkumar: “Belagavi rural MLA is responsible for my relationship with DK” : Jarakiholi

Comments are closed.