Vastu Tips : ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದಲ್ಲಿ ದಾರಿದ್ರ್ಯ ವಕ್ಕರಿಸುವುದು ಗ್ಯಾರಂಟಿ

Vastu Tips: ಕೆಲವರ ಜೀವನ ಹೇಗಿರುತ್ತೆ ಅಂದರೆ ಅವರು ಎಷ್ಟೇ ಒಳ್ಳೆಯ ಆದಾಯವನ್ನು ಹೊಂದಿದ್ದರೂ ಸಹ ಅವರ ಬಳಿ ಉಳಿತಾಯ ಎನ್ನುವುದು ಇರೋದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಹ ಸಾಲ ತೀರುವುದೇ ಇಲ್ಲ. ಯಾವಾಗಲೂ ತೊಂದರೆ ಹಾಗೂ ದುಃಖ ಇವರನ್ನು ಬೆನ್ನಟ್ಟುತ್ತಲೇ ಇರುತ್ತದೆ. ಒಳ್ಳೆಯ ಗಳಿಕೆ ಇದ್ದರೂ ಸಹ ಹಣ ಕೈಯಲ್ಲಿ ಉಳಿಯವುದೇ ಇಲ್ಲ. ಮನೆಯಲ್ಲಿ ಸದಾ ಉದ್ವಿಗ್ನ ವಾತಾವರಣವೇ ಇರುತ್ತದೆ. ಹಾಗಾದರೆ ಈ ರೀತಿ ಮನುಷ್ಯನ ಜೀವನದಲ್ಲಿ ದುರಾದೃಷ್ಟ ಬಂದು ವಕ್ಕರಿಸೋಕೆ ಕಾರಣವೇನು..? ಇದಕ್ಕು ವಾಸ್ತು ಶಾಸ್ತ್ರಕ್ಕೂ ಏನಾದರೂ ಸಂಬಂಧ ಇದೆಯಾ ಎಂದು ಕೇಳಿದರೆ ನಿಮಗೆ ಸಿಗುವ ಉತ್ತರ ಹೌದು ಎಂದಾಗಿದೆ. ಏಕೆಂದರೆ ನೀವು ಮನೆಯಲ್ಲಿ ಇಡುವ ಕೆಲವು ವಸ್ತುಗಳ ನಿಮಗೆ ಈ ರೀತಿ ತೊಂದರೆಯನ್ನುಂಟು ಮಾಡುತ್ತದೆ. ಹಾಗಾದರೆ ಆ ವಸ್ತುಗಳು ಯಾವುದು ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ :


ಮಹಾಭಾರತದ ಫೋಟೋಗಳು :

ಮನೆಯಲ್ಲಿ ಯಾವುದೇ ಕಾರಣಕ್ಕೂ ಎಲ್ಲಿಯೂ ಮಹಾ ಭಾರತದ ಫೋಟೋಗಳನ್ನು ಇರಿಸಬಾರದು. ಇದು ಮನೆಯಲ್ಲಿ ಜಗಳ, ವಾಗ್ವಾದ ಹಾಗೂ ಉದ್ವಿಗ್ನ ಪರಿಸ್ಥಿತಿಗಳನ್ನು ನಿರ್ಮಿಸುತ್ತದೆ. ಅಲ್ಲದೇ ಯಾವುದೇ ಕಾರಣಕ್ಕೂ ನಿಮ್ಮ ಬೆಡ್​​ರೂಮ್​ ಹಾಗೂ ಡ್ರಾಯಿಂಗ್​ ರೂಮ್​ಗಳಲ್ಲಿ ಇಂತಹ ಫೋಟೋಗಳನ್ನು ಇಡಬಾರದು.
ತಾಜ್​ ಮಹಲ್​ :

ತಾಜ್​ ಮಹಲ್​​ ಚಿತ್ರವನ್ನು ಎಂದಿಗೂ ಮನೆಯಲ್ಲಿ ಇಡಬಾರದು. ತಾಜ್​ ಮಹಲ್​​ ಬೇಗಂ ಮುಮ್ತಾಜ್​​​ರ ಸಮಾಧಿಯಾಗಿದೆ. ಹೀಗಾಗಿ ಮನೆಯಲ್ಲಿ ಸಮಾಧಿಯ ಫೊಟೋಗಳು ಅಥವಾ ಪೇಟಿಂಗ್ಸ್​​ನ್ನು ಇರಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರಲಿದೆ.
ಸಿಕ್ಕು ಸಿಕ್ಕಾದ ವೈರ್​ :

ವೈರ್​ಗಳನ್ನು ಎಂದಿಗೂ ಮನೆಯಲ್ಲಿ ಸಿಕ್ಕು ಸಿಕ್ಕಾದ ಸ್ಥಿತಿಯಲ್ಲಿ ಇರಿಸಬಾರದು. ಲ್ಯಾಪ್​ಟಾಪ್​ ಅಥವಾ ಸ್ಮಾರ್ಟ್​ಫೋನ್​​ನ ಚಾರ್ಜರ್​​ ವೈರ್​​ಗಳನ್ನು ಸಿಕ್ಕು ಹಾಕಿಕೊಳ್ಳದಂತೆ ನೋಡಿಕೊಳ್ಳಿ. ಹೀಗಾದಾಗ ಮನೆಯಲ್ಲಿ ಧನಾತ್ಮಕ ಶಕ್ತಿಯೂ ಸಹ ಸಿಕ್ಕಿ ಹಾಕಿಕೊಳ್ಳುತ್ತದೆ.
ಬಾಡಿದ ಹೂವುಗಳು :

ಮನೆಯಲ್ಲಿ ಎಂದಿಗೂ ಬಾಡಿದ ಹೂವುಗಳನ್ನು ಇರಿಸಬಾರದು. ನಿಮ್ಮ ಮಲಗುವ ಕೋಣೆ ಅಥವಾ ಡ್ರಾಯಿಂಗ್​​ ರೂಮ್​​​ಗಳಲ್ಲಿ ಇರಿಸುವ ಹೂವುಗಳು ಎಂದಿಗೂ ಬಾಡದಂತೆ ನೋಡಿಕೊಳ್ಳಿ. ಮನೆಯಲ್ಲಿ ಬಾಡಿದ ಹೂವುಗಳು ಅಶುಭದ ಸಂಕೇತವಾಗಿದೆ.
ನಲ್ಲಿಯಿಂದ ತೊಟ್ಟಿಕ್ಕುವ ನೀರು :

ಮನೆಯ ನಲ್ಲಿಯಿಂದ ತೊಟ್ಟಿಕ್ಕುವ ನೀರು ನಾಶದ ಸಂಕೇತವಾಗಿದೆ. ಅಡುಗೆ ಮನೆಯಲ್ಲಿ ಅಥವಾ ಸ್ನಾನದ ಗೃಹಗಳಲ್ಲಿ ಸ್ವಯಂ ಚಾಲಿತವಾಗಿ ನೀರು ಸೋರಿಕೆಯಾಗಬಾರದು.ಇದು ಅಶುಭದ ಸಂಕೇತವಾಗಿದೆ.

ನಿಂತ ನೀರು :

ಮನೆಯಲ್ಲಿ ಸಮೀಪದಲ್ಲಿ ಎಲ್ಲಾದರೂ ನೀರು ನಿಂತಿದ್ದರೆ ಕೂಡಲೇ ಅದನ್ನು ಸರಿ ಪಡಿಸಿ. ಅಡುಗೆ ಮನೆ, ಸ್ನಾನದ ಗೃಹ ಅಥವಾ ಮನೆಯ ಅಂಗಳಗಳಲ್ಲಿ ನೀರು ನಿಲ್ಲುವುದು ಕೂಡ ಅಶುಭವಾಗಿದೆ. ಇದು ಮನೆಯ ಆರ್ಥಿಕತೆಗೆ ಅಡ್ಡಿ ತರಲಿದೆ.

ಇದನ್ನು ಓದಿ : KL Rahul: ಪ್ರೇಯಸಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟರ್ ಕೆ.ಎಲ್ ರಾಹುಲ್

ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !

vastu tips inauspicious things which make you poor do not keep in house including tajmahal and mahabharat paintings

Comments are closed.