Ajay Jadeja : ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸೋಲು : ಎಂಎಸ್ ಧೋನಿಯನ್ನು ಟೀಕಿಸಿದ ಅಜಯ್ ಜಡೇಜಾ

ಮುಂಬೈ : ಕಳೆದ ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ಬಾರಿ ಸೋಲಿನಿಂದಲೇ ಐಪಿಎಲ್‌ ಪದಾರ್ಪಣೆ ಮಾಡಿದೆ. ಹೊಸ ನಾಯಕ ರವೀಂದ್ರ ಜಡೇಜಾಗೆ ಲಕ್‌ ಕೈ ಹಿಡಿಯುತ್ತಿಲ್ಲ. ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ 2022 ರ ಪಂದ್ಯದಲ್ಲಿ 211 ರನ್ ಚೇಸಿಂಗ್ ಮಾಡುವಾಗ ಲಕ್ನೋ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ (Ajay Jadeja) ಎಂಎಸ್ ಧೋನಿ (MS Dhoni ) ಅವರನ್ನು ಟೀಕಿಸಿದ್ದಾರೆ.

ಪಂದ್ಯದ ಸಮಯದಲ್ಲಿ, ಸಿಎಸ್‌ಕೆ ವಿಕೆಟ್‌ಕೀಪರ್ ಎಂಎಸ್ ಧೋನಿ ಅವರು ಫೀಲ್ಡಿಂಗ್ ಬದಲಾವಣೆ ಮಾಡುತ್ತಿರುವುದು ಕಂಡು ಬಂದಿದೆ. ಕ್ಯಾಮರಾಗಳು ಧೋನಿ ಅವರ ಮೇಲೆ ಕೇಂದ್ರೀಕರಿಸಿದವು, ಆದರೆ ಹೊಸದಾಗಿ ನೇಮಕಗೊಂಡ ನಾಯಕ ರವೀಂದ್ರ ಜಡೇಜಾ ಔಟ್‌ಫೀಲ್ಡ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಐಪಿಎಲ್‌ ಋತುವಿನ ಆರಂಭಕ್ಕೂ ಮುನ್ನ ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕತ್ವ ತ್ಯಜಿಸಿದ್ದರು.‌

ರವೀಂದ್ರ ಜಡೆಜಾ ಅವರನ್ನು ಭವಿಷ್ಯದ ನಾಯಕನನ್ನಾಗಿ ರೂಪಿಸುವ ಸಲುವಾಗಿಯೇ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಸೀಸನ್‌ನಲ್ಲಿ ಸಿಎಸ್‌ಕೆ ಎರಡನೇ ಪಂದ್ಯವಾದ ಲಕ್ನೋ ವಿರುದ್ದದ ಪಂದ್ಯದಲ್ಲಿ ಜಡೇಜಾ ಬದಲು ಧೋನಿಯೇ ಫೀಲ್ಡಿಂಗ್‌ ಸೆಟ್ಟಿಂಗ್‌ ಮಾಡುತ್ತಿದ್ದರು. ಈ ಕುರಿತು ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ಅವರು ಸೂಪರ್ ಜೈಂಟ್ಸ್ ವಿರುದ್ಧ ಧೋನಿ ಅಧಿಕಾರ ವಹಿಸಿಕೊಂಡಿರುವುದನ್ನು ಟೀಕಿಸಿದ್ದಾರೆ ಮತ್ತು ಇದು ರವೀಂದ್ರ ಜಡೇಜಾ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.

ನಾನು ಏನು ನೋಡಿದರೂ ಅದು ತಪ್ಪಾಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಎಂಎಸ್ ಧೋನಿಗೆ ನನಗಿಂತ ದೊಡ್ಡ ಅಭಿಮಾನಿ ಯಾರೂ ಇಲ್ಲ. ಅವರ ಮನೋಧರ್ಮ ಮತ್ತು ಕೆಲಸಗಳಿಂದಾಗಿ ನಾನು ಅವರ ಅಭಿಮಾನಿ. ನಿಮ್ಮ ಅರ್ಹತೆ ಅವಲಂಬಿಸಿರುವ ಕೊನೆಯ ಆಟ ಇದಾಗಿದ್ದರೆ, ನಾನು ಇನ್ನೂ ಅರ್ಥಮಾಡಿಕೊಳ್ಳುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ, ಕೆಲವೊಮ್ಮೆ ನೀವು ನಿಯಂತ್ರಣವನ್ನು ಹಿಂತೆಗೆದುಕೊಳ್ಳುತ್ತೀರಿ ಏಕೆಂದರೆ ಅದರ ಅವಶ್ಯಕತೆಯಿದೆ. ಆದರೆ ಎರಡನೇ ಪಂದ್ಯದಲ್ಲಿ ನಾವು ಇದನ್ನು ನೋಡಿದ್ದೇವೆ ಮತ್ತು ಅದು ರವೀಂದ್ರ ಜಡೇಜಾ ಎಂಬ ಕಾರಣಕ್ಕೆ ನಾನು ಹೇಳುತ್ತಿಲ್ಲ ಎಂದು ಅಜೇಯ್ ಜಡೇಜಾ ಕ್ರಿಕ್‌ಬಜ್‌‌ಗೆ ನೀಡಿದ ಸಂದರ್ಶನವೊಂದಲ್ಲಿ ಹೇಳಿಕೊಂಡಿದ್ದಾರೆ.

ಎಂಎಸ್ ಧೋನಿ ದೊಡ್ಡ ಹೆಸರು. ನಾನು ಅಂತಹ ವಿಷಯಗಳನ್ನು ಹೇಳಲು ಇಷ್ಟಪಡುವುದಿಲ್ಲ ಆದರೆ ನಾವು ಇಲ್ಲಿ ಆಟದ ಬಗ್ಗೆ ಮಾತನಾಡುತ್ತಿದ್ದೇವೆ, ಆದ್ದರಿಂದ ನನ್ನ ಮನಸ್ಸಿನಲ್ಲಿ ಯಾವುದೇ ಅನುಮಾನವಿಲ್ಲ, ನಾನು ಇಂದು ನೋಡಿದ್ದು ನನಗೆ ಇಷ್ಟವಾಗಲಿಲ್ಲ” ಎಂದು ಅವರು ಹೇಳಿದರು. ಸಿಎಸ್‌ಕೆ ನಾಯಕತ್ವವನ್ನು ತ್ಯಜಿಸುವುದು ಧೋನಿ ಅವರ ನಿರ್ಧಾರವಾಗಿದೆ ಮತ್ತು ರವೀಂದ್ರ ಜಡೇಜಾಗೆ ಕಲಿಯುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಜಡೇಜಾ ಹೇಳಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಅವರಿಗಿಂತ ಉತ್ತಮ ನಾಯಕ ಬೇರೊಬ್ಬರು ಇರಲಾರರು. ಧೋನಿ ಮಾರ್ಗದರ್ಶನದಲ್ಲಿ ರವೀಂದ್ರ ಜಡೇಜಾ ಹೊಸ ನಾಯಕನಾಗಿ ಸಿದ್ದವಾಗಲು ಅವಕಾಶವಿದೆ. ಆದರೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎರಡೂ ಪಂದ್ಯಗಳನ್ನು ಚೆನ್ನೈ ಈಗಾಗಲೇ ಸೋತಿದ್ದು, ಭಾನುವಾರ ಪಂಜಾಬ್‌ ವಿರುದ್ದ ಪಂದ್ಯ ವನ್ನಾಡಲಿದೆ.

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್‌ ಖ್ಯಾತ ಆಟಗಾರನಿಗೆ ಗಾಯ : ಐಪಿಎಲ್‌ನಿಂದ ಹೊರ ಬಿದ್ದ ಆಲ್‌ರೌಂಡರ್‌

ಇದನ್ನೂ ಓದಿ : ಕೆಕೆಆರ್ ತಂಡಕ್ಕೆ ಆಘಾತ, ಖ್ಯಾತ ಆಲ್‌ರೌಂಡರ್‌ ಆಂಡ್ರೆ ರೆಸೆಲ್‌ಗೆ ಗಾಯ

( Ajay Jadeja Criticises MS Dhoni for Running the Show Against Lucknow Super Giants)

Comments are closed.