ಸೋಮವಾರ, ಜೂನ್ 16, 2025
HomeSportsCricketIndia failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್,...

India failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ

- Advertisement -

ದುಬೈ: (India failure in Asia Cup) ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡದ ಪ್ರಯಾಣ ಬಹುತೇಕ ಕೊನೆಗೊಂಡಿದೆ. ಸೂಪರ್-4 ಹಂತದಲ್ಲಿ ಸತತ ಎರಡು ಸೋಲು ಕಾಣುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ಧ ಗೆದ್ದು ಅಬ್ಬರಿಸಿದ್ದ ರೋಹಿತ್ ಶರ್ಮಾ ಬಳಗ, ಸೂಪರ್-4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದೆ.

ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಯಾರೂ ನಿರೀಕ್ಷೆಯನ್ನೇ ಮಾಡದ ರೀತಿಯಲ್ಲಿ ಸತತ 2 ಪಂದ್ಯಗಳನ್ನು ಸೋತು, ತನ್ನ ಫೈನಲ್ ಹಾದಿಗೆ ತಾನೇ ಕಲ್ಲು ಎಳೆದುಕೊಂಡಿದೆ. ಭಾರತದ ಈ ವೈಫಲ್ಯಕ್ಕೆ ಕಾರಣ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ. ತಂಡದ ಆಯ್ಕೆಯಲ್ಲಿ ಎಡವಿದ್ದೇ ಭಾರತದ ಸೋಲಿಗೆ ಕಾರಣ ಎಂದು ಕ್ರಿಕೆಟ್ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಹಾಗಾದರೆ ದ್ರಾವಿಡ್ ಮತ್ತು ರೋಹಿತ್ ಎಡವಿದ್ದು ಎಲ್ಲಿ?

ಕೋಚ್-ಕ್ಯಾಪ್ಟನ್ (India failure in Asia Cup) ಮಾಡಿದ ತಪ್ಪುಗಳು

  • ಸೂಪರ್-4 ಹಂತದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟು ರಿಷಭ್ ಪಂತ್ ಅವರನ್ನು ಆಡಿಸಿದ್ದು.
  • ಈ ಕಾರಣದಿಂದ ಎರಡೂ ಪಂದ್ಯಗಳಲ್ಲಿ ಫಿನಿಷರ್ ಕೊರತೆ ಎದುರಿಸಿದ ಟೀಮ್ ಇಂಡಿಯಾ.
  • ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಕೈ ಬಿಟ್ಟದ್ದು.
  • ರವೀಂದ್ರ ಜಡೇಜ ಗಾಯಗೊಂಡಾಗ ಅವರ ಬದಲು ತಂಡ ಸೇರಿದ್ದ ಅಕ್ಷರ್ ಪಟೇಲ್ ಅವರನ್ನು ಕಡೆಗಣಿಸಿದ್ದು.
  • ದೀಪಕ್ ಹೂಡ ಬದಲು ಅಕ್ಷರ್ ಪಟೇಲ್ ಅವರನ್ನು ಆಡಿಸಿದ್ದಿದ್ದರೆ ಭಾರತಕ್ಕೆ ಒಬ್ಬ ಪರಿಣಾಮಕಾರಿ ಬೌಲರ್ ಸೇವೆ ಸಿಗುತ್ತಿತ್ತು.
  • ಅಗ್ರಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿರುವ ದೀಪಕ್ ಹೂಡ ಕೆಳ ಕ್ರಮಾಂಕದಲ್ಲಿ ಪರಿಣಾಮಕಾರಿಯಲ್ಲ.
  • ಆದರೆ ಅಕ್ಷರ್ ಪಟೇಲ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಆಟವಾಡುವ ಸಾಮರ್ಥ್ಯವಿರುವ ಆಟಗಾರ.
  • ಅವರನ್ನು ಆಡಿಸಿದ್ದಿದ್ದರೆ ಭಾರತಕ್ಕೆ ಒಬ್ಬ ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಆಯ್ಕೆಯೂ ಸಿಕ್ಕಂತಾಗುತ್ತಿತ್ತು.
  • ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಆಯ್ಕೆ ಬೇಕು ಎಂಬ ಕಾರಣಕ್ಕೆ ರಿಷಭ್ ಪಂತ್ ಅವರನ್ನು ಆಡಿಸಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಡಲಾಯಿತು.
  • ಆದರೆ ಆಡಿದ ಎರಡೂ ಪಂದ್ಯಗಳಲ್ಲಿ ರಿಷಭ್ ಪಂತ್ ತಂಡದ ನೆರವಿಗೆ ನಿಲ್ಲದೆ, ಸೋಲಿಗೆ ಕಾರಣರಾದರು.

ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಟೀಮ್ ಸೆಲೆಕ್ಷನ್’ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : Rohit Sharma: ಯುವ ಆಟಗಾರರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರಾ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ?

ಇದನ್ನೂ ಓದಿ : Asia Cup 2022 India : ಏಷ್ಯಾ ಕಪ್‌ನಲ್ಲಿ ಭಾರತದ ಹಣೆಬರಹ ಇವತ್ತೇ ಡಿಸೈಡ್, ಪಾಕಿಸ್ತಾನದ ಕೈಯಲ್ಲಿದೆ ಟೀಮ್ ಇಂಡಿಯಾ ಭವಿಷ್ಯ

Coach Rahul Dravid Captain Rohit Sharma blamed for India failure in Asia Cup

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular