RCB fan insulted Panjurli Daiva : ಆರ್‌ಸಿಬಿ ಅಭಿಮಾನಿಯಿಂದ ಪಂಜುರ್ಲಿ ದೈವಕ್ಕೆ ಇದೆಂಥಾ ಅವಮಾನ..? ಎಲ್ಲಾ ಕಾಂತಾರಾ ಎಫೆಕ್ಟ್!

ಬೆಂಗಳೂರು: ಕಾಂತಾರ ಸಿನಿಮಾ ನಂತರ ಕರಾವಳಿಯ ದೈವಗಳ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿರುವುದು ನಿಜ. ಕರಾವಳಿಗಷ್ಟೇ ಸೀಮಿತವಾಗಿದ್ದ (RCB fan insulted Panjurli Daiva) ದೈವಾರಾಧನೆಯ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಕುತೂಹಲ ಮೂಡಲು ಕಾರಣ ಕಾಂತಾರ (Kantara) ಸಿನಿಮಾ. ಆದರೆ ಕಾಂತಾರ ಸಿನಿಮಾ ಎಫೆಕ್ಟ್’ನಿಂದ ಕರಾವಳಿಯ ದೈವಗಳಿಗೆ ಅವಮಾನವಾಗುತ್ತಿರುವುದೂ ಅಷ್ಟೇ ನಿಜ.

ಕರಾವಳಿಯಲ್ಲಿ ದೈವಗಳಿಗೆ ವಿಶೇಷ ಸ್ಥಾನವಿದೆ. ಆ ಭಾಗದಲ್ಲಿ ಜನರು ದೇವರಿಗಿಂತ ಹೆಚ್ಚು ದೈವಗಳನ್ನು ನಂಬುತ್ತಾರೆ. ಆ ನಂಬಿಕೆಗೆ ಧಕ್ಕೆ ತರುವಂತಹ ಕೆಲ ಘಟನೆಗಳು ಕಾಂತಾರ ಸಿನಿಮಾ ನಂತರ ಕಂಡು ಬರುತ್ತಿವೆ. ಜನ ದೈವಗಳ ವೇಷ ಹಾಕಿ ಹುಚ್ಚಾಟ ಮೆರೆಯುತ್ತಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲೂ ಅಂಥದ್ದೇ ಘಟನೆಯೊಂದು ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾನೆ.

ದೈವಗಳ ಬಗ್ಗೆ ಕುತೂಹಲ ಒಳ್ಳೆಯದು. ಆದರೆ ಈ ರೀತಿ ವೇಷ ಹಾಕಿ ದೈವಗಳಿಗೆ ಅಪಚಾರ ಎಸಗುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂತಾರ ಸಿನಿಮಾ ನಂತರ ದೈವರಿಗಳಿಗೆ ಪ್ರಚಾರ ಸಿಕ್ಕಿದಷ್ಟೇ ಅಪಚಾರವೂ ನಡೆಯುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಇನ್ನು ಐಪಿಎಲ್ ಪಂದ್ಯದ ವಿಚಾರಕ್ಕೆ ಬರೋದಾದ್ರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ನಡೆದ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ಸಾಧಿಸಿ ಐಪಿಎಲ್-2023 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್’ಗಳ ಸವಾಲಿನ ಮೊತ್ತ ಕಲೆ ಹಾಕಿತು. ಮುಂಬೈ ಪರ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ 46 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ 84 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು : ಸಂಭ್ರಮಿಸಿದ ವಿರಾಟ್ ಕೊಹ್ಲಿ ಟೀಮ್‌

ನಂತರ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ 16.2 ಓವರ್’ಗಳಲ್ಲಿ ಕೇವಲ 2 ವಿಕೆಟ್ ಒಪ್ಪಿಸಿ 172 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ ವಿಕೆಟ್’ಗೆ 14.5 ಓವರ್’ಗಳಲ್ಲಿ 148 ರನ್’ಗಳ ಜೊತೆಯಾಟವಾಡಿದರು. ಕ್ಯಾಪ್ಟನ್ ಫಾಫ್ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್’ಗಳ ನೆರವಿನಿಂದ 73 ರನ್ ಗಳಿಸಿ ಔಟಾದರೆ, ಟೂರ್ನಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಕಿಂಗ್ ಕೊಹ್ಲಿ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 82 ರನ್ ಸಿಡಿಸಿ ತಂಡಕ್ಕೆ 8 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟರು. ಏಪ್ರಿಲ್ 6ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಆರ್’ಸಿಬಿ ಪಡೆ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

RCB fan insulted Panjurli Daiva : Panjurli Daiva is so insulted by RCB fan..? All Kantara effect!

Comments are closed.