ದಿಢೀರ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಪಿವಿ ಸಿಂಧು .. !!!! : ಅಷ್ಟಕ್ಕೂ ಅಸಲಿ ವಿಚಾರ ಏನು ಗೊತ್ತಾ ?

ಹೊಸದಿಲ್ಲಿ : ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.. !! ಟ್ವಿಟರ್, ಇನ್ ಸ್ಟಾ ಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿಯ ಕುರಿತು ಪೋಸ್ಟ್ ಮಾಡಿದ್ದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಒಲಿಂಪಿಕ್ ಪದಕ ತಂದುಕೊಟ್ಟ ಪಿ.ವಿ.ಸಿಂಧು ಸಣ್ಣ ವಯಸ್ಸಿನಲ್ಲಿಯೇ ನಿವೃತ್ತಿ ಘೋಷಿಸಿರೋದು ಆಘಾತವನ್ನು ತಂದಿತ್ತು. ಆದರೆ ಮೂರು ಪುಟಗಳ ಟ್ವೀಟ್ ನಲ್ಲಿ ತಾವು ಯಾವುದಕ್ಕೆ ವಿದಾಯ ಘೋಷಿಸಿದ್ದೇನೆ ಅಂತಾ ಬರೆದಿದ್ದಾರೆ. ಆದರೆ ಮೊದಲ ಪುಟವನ್ನು ನೀಡಿದವರು ಸಿಂಧು ಬ್ಯಾಡ್ಮಿಂಟನ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆಂದು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ.

ಆದರೆ ಮೂರು ಪುಟಗಳಲ್ಲಿ ಬೇರೆಯದೇ ವಿಚಾರವನ್ನು ಉಲ್ಲೇಖಿಸಿದ್ದಾರೆ. “ಹೊಸದಾದ ಭಾವನೆಗಳೊಂದಿಗೆ ಬರಲು ಯೋಚಿಸುತ್ತಿದ್ದೇನೆ. ಸಾಕಷ್ಟು ದಿನಗಳಿಂದ ಇದರಿಂದ ತುಂಬಾ ಹೆಣಗಾಡುತ್ತಿದ್ದೇನೆ. ಇದು ನನ್ನಲ್ಲಿ ತಪ್ಪು ಭಾವನೆಗಳನ್ನು ಮೂಡಿಸುತ್ತಿದೆ. ಈ ಕಾರಣದಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ,” ಎಂದು ತಮ್ಮ ಹೇಳಿಕೆಯಲ್ಲಿ 25ರ ಪ್ರಾಯದ ಆಟಗಾರ್ತಿ ತಿಳಿಸಿದ್ದಾರೆ.

ಸದ್ಯ ಕೋವಿಡ್‌-19 ಸಾಂಕ್ರಾಮಿಕ ಸೋಂಕು ನನಗೆ ತುಂಬಾ ಆತಂಕವನ್ನು ಉಂಟುಮಾಡಿದೆ. ಕಠಿಣ ಪರಿಶ್ರಮ ಪಟ್ಟು ಬಲಿಷ್ಠ ಎದುರಾಳಿಯನ್ನು ಸೋಲಿಸಬೇಕು. ಈ ಹಿಂದೆಯೂ ಇದನ್ನೇ ಮಾಡಿದ್ದೆ, ಆದರೆ ಇದೀಗ ಮಾರಣಾಂತಿಂಕ ವೈರಸ್‌ನಿಂದ ನನ್ನನ್ನು ಮಾನಸಿಕವಾಗಿ ಕುಗ್ಗುತ್ತಿದ್ದೇನೆ. ಇಡೀ ಜಗತ್ತು ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ,” ಎಂದು ಸಿಂಧು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಜಗತ್ತಿನಲ್ಲಿ ಪ್ರಸ್ತುತ ಇರುವ ಸನ್ನಿವೇಶ ಹಾಗೂ ಋಣಾತ್ಮಕ ಭಾವನೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದ ಸಿಂಧು, ಇಡೀ ಪ್ರಪಂಚಕ್ಕೆ ಪ್ರಸ್ತುತ ಇರುವ ಸನ್ನಿವೇಶ ಅರ್ಥವಾಗಲು ಈ ರೀತಿ ಬರೆದಿದ್ದಾರೆಂದು ಅವರು ಹೇಳಿಕೆಯನ್ನು ಸಂಪೂರ್ಣವಾಗಿ ಓದಿದರೆ ಅರ್ಥವಾಗುತ್ತದೆ.

“ಡೆನ್ಮಾರ್ಕ್‌ ಓಪನ್‌ ಬಳಿಕ ನಾನು ನಿವೃತ್ತಿಯನ್ನು ಪಡೆಯುತ್ತಿಲ್ಲ. ಆದರೆ, ಮುಂದಿನ ಏಷ್ಯಾ ಕಪ್‌ಗೆ ಬಲಿಷ್ಠವಾಗಿ ಅಂಗಣಕ್ಕೆ ಮರಳುತ್ತೇನೆ ಹಾಗೂ ಇದಕ್ಕಾಗಿ ಇನ್ನಷ್ಟು ಕಠಿಣ ಪರಿಶ್ರಮ ಪಡುತ್ತೇನೆ.

ಕೊರೊನಾ ವೈರಸ್‌ ಕುರಿತು ಇರುವ ಅಸಡ್ಡೆ, ಋಣಾತ್ಮಕ ಅಂಶಗಳು, ಕೆಟ್ಟ ಆಲೋಚನೆಗಳಿಂದ ನಿವೃತ್ತಿ ಪಡೆಯುತ್ತೇನೆ ಹಾಗೂ ಮುಂದಿನ ಟೂರ್ನಿಗಳಿಗೆ ಶಕ್ತಿಯುತವಾಗಿ ಮರಳುತ್ತೇನೆ,” ಎಂದು ಪಿ.ವಿ ಸಿಂಧು ಹೇಳಿದ್ದಾರೆ.

Comments are closed.