car lorry accident 6 died : ಕಾರು -ಲಾರಿ ಭೀಕರ ಅಪಘಾತ : 6 ಮಂದಿ ದುರ್ಮರಣ, ಮುಡಿಕೊಟ್ಟು ಬರುವಾಗ ದುರಂತ

ಯಾದಗಿರಿ : (car lorry accident 6 died )ವರಮಹಾಲಕ್ಷ್ಮೀ ಹಬ್ಬದ ದಿನದಂದೇ ಭೀಕರ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ೬ ಮಂದಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಆರಕೇರಾ ಗ್ರಾಮದಲ್ಲಿ ನಡೆದಿದೆ.

ವಾಜೀದ್‌ ಹುಸೇನ್‌, ಹುಸೇನ್‌, ನೂರ್‌ ಜಹಾನ್‌ ಬೇಗಂ, ಹೀನಾ ಬೇಗಂ, ಇಮ್ರಾನ್‌ ಹಾಗೂ ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಲಿಂಗಸಗೂರಿನ ಹಟ್ಟಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.

ತೆಲಂಗಾಣದ ಹಜರತ್‌ ಅಬ್ದುಲ್‌ ಶಾ ದರ್ಗಾಕ್ಕೆ ತೆರಳಿ ಮಗುವಿನ ಮುಡಿಕೊಟ್ಟು ವಾಪಾಸಾಗುತ್ತಿದ್ದ ವೇಳೆಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನ ಲಾರಿ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗುರುಮಠಕಲ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Actress Samyuktha Hegde : ಡ್ಯೂಪ್ ಇಲ್ಲದೇ ಫೈಟಿಂಗ್ ತಂದ ಆಪತ್ತು: ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆಗೆ ಮೇಜರ್ ಸರ್ಜರಿ

ಇದನ್ನೂ ಓದಿ : Rain School holiday : ಮುಂದಿನ ನಾಲ್ಕು ದಿನ ಭಾರೀ ಮಳೆ : ಈ ಜಿಲ್ಲೆಯಲ್ಲಿ 2 ದಿನ ಶಾಲೆಗೆ ರಜೆ ಘೋಷಣೆ

car lorry accident 6 died gurumatkal yadagiri

Comments are closed.