weekend with ramesh : ಮತ್ತೆ ಬರ್ತಿದೆ ವೀಕೆಂಡ್​ ವಿತ್​ ರಮೇಶ್​ : ಸಾಧಕರ ಆಯ್ಕೆಗೆ ವೀಕ್ಷಕರಿಗೆ ಅವಕಾಶ

weekend with ramesh : ಕನ್ನಡ ಕಿರುತೆರೆಯಲ್ಲಿ ಸಧ್ಯ ಧಾರವಾಹಿಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳೆ ಹೆಚ್ಚು ಸದ್ದು ಮಾಡುತ್ತಿವೆ . ಬಿಗ್​ ಬಾಸ್​, ರಾಜಾ ರಾಣಿ, ಜೋಡಿ ನಂ.1, ಇಸ್ಮಾರ್ಟ್ ಜೋಡಿ ಹೀಗೆ ಎಲ್ಲಾ ಚಾನೆಲ್​ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ನಡೆಯುತ್ತಲೇ ಇದೆ. ಈ ಎಲ್ಲದರ ನಡುವೆ ಇದೀಗ ಕರುನಾಡಿನಲ್ಲಿ ಮನೆ ಮಾತಾಗಿದ್ದ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಮತ್ತೊಮ್ಮೆ ಆರಂಭಗೊಳ್ಳುವ ಸೂಚನೆ ಸಿಕ್ಕಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್​ ಇದೀಗ ಮತ್ತೊಮ್ಮೆ ವೀಕೆಂಟ್​ ಟೆಂಟ್​ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ

2019ರ ಜುಲೈ ತಿಂಗಳಲ್ಲಿ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಕೊನೆಗೊಂಡಿತ್ತು. ಇದಾದ ಬಳಿಕ 3 ವರ್ಷಗಳೇ ಕಳೆದರೂ ಹೊಸ ಸೀಸನ್​ ಮಾತ್ರ ಆರಂಭಗೊಂಡಿರಲಿಲ್ಲ. ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಬಳಿಯಲ್ಲಿ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರು ಕೂಡ. ಇದೀಗ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ರಾಘವೇಂದ್ರ ಹುಣಸೂರು ಮತ್ತೊಮ್ಮೆ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮವನ್ನು ಶುರು ಮಾಡೋದಾಗಿ ಹಿಂಟ್​ ನೀಡಿದ್ದಾರೆ.

ಈ ಸಂಬಂಧ ಫೇಸ್​ಬುಕ್​ನಲ್ಲಿ ಪೋಸ್ಟ್​ ಶೇರ್ ಮಾಡಿರುವ ರಾಘವೇಂದ್ರ ಹುಣಸೂರು , ವೈಯಕ್ತಿಕವಾಗಿ ನನಗೆ ಫೇವರಿಟ್​ ಎನಿಸಿರುವ ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮ ಆರಂಭಗೊಂಡು ಎಂಟು ವರ್ಷಗಳೇ ಕಳೆದಿವೆ. ಕಿರುತೆರೆಯಲ್ಲಿ ಇನ್ನೊಂದು ಸೀಸನ್​ ಆರಂಭಿಸಬಹುದೇ..? ಸಾಧಕರ ಸೀಟ್​ನಲ್ಲಿ ಕುಳಿತುಕೊಳ್ಳಲು ಯಾರು ಅರ್ಹರು..? ದಯವಿಟ್ಟು ತಿಳಿಸಿ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರಿಗೆ ಈ ಬಾರಿಯ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದೇ ತಡ ಅನೇಕರ ಹೆಸರನ್ನು ಕಮೆಂಟ್​ ಬಾಕ್ಸಿನಲ್ಲಿ ಬರೆಯಲಾಗಿದೆ. ಗವಿ ಮಠದ ಸ್ವಾಮೀಜಿಗಳು , ರಾಹುಲ್​ ದ್ರಾವಿಡ್​, ಅನಿಲ್​ ಕುಂಬ್ಳೆ , ಬೈರಪ್ಪ, ಯಡಿಯೂರಪ್ಪ,ತಾರಾ, ಹಂಸಲೇಖ, ಸುಧಾರಾಣಿ ಹೀಗೆ ನೆಟ್ಟಿಗರ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇದೆ.

ಇದನ್ನು ಓದಿ :car lorry accident 6 died : ಕಾರು -ಲಾರಿ ಭೀಕರ ಅಪಘಾತ : 6 ಮಂದಿ ದುರ್ಮರಣ, ಮುಡಿಕೊಟ್ಟು ಬರುವಾಗ ದುರಂತ

ಇದನ್ನೂ ಓದಿ : Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್‌ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು

raghavendra hunsur hints at weekend with ramesh new season in zee kannada

Comments are closed.