ರಾಯಚೂರು : CT Ravis outrage : ಸಿದ್ದರಾಮಯ್ಯ ಈ ನಡುವೆ ನೀಡುತ್ತಿರುವ ಎಲ್ಲಾ ಹೇಳಿಕೆಗಳೂ ವಿವಾದಕ್ಕೆ ಗುರಿಯಾಗುತ್ತಿದೆ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋದ ಹೇಳಿಕೆಯಂತೂ ಬಿಜೆಪಿ ನಾಯಕರ ಪಾಲಿಗೆ ದೊಡ್ಡ ಅಸ್ತ್ರವೇ ಆಗಿದೆ. ಈ ಹೇಳಿಕೆ ನೀಡಿದ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರು ತರಾಟೆ ತೆಗೆದುಕೊಳ್ಳುತ್ತಿದ್ದಾಗಲೇ ಕೊಡಗು ಪ್ರಕರಣದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಇವರು ಮಹಾತ್ಮಾ ಗಾಂಧಿಯನ್ನೇ ಕೊಂದವರು, ಇನ್ನು ನನ್ನನ್ನು ಬಿಡ್ತಾರಾ..? ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಫೋಟೋವನ್ನು ಬಿಜೆಪಿ ನಾಯಕರು ಪೂಜಿಸುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯರ ಈ ಹೇಳಿಕೆಗೆ ಇಂದು ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ತಿರುಗೇಟು ನೀಡಿದ್ದಾರೆ. ವಕೀಲನಾಗಿ ಈ ರೀತಿ ಮಾತನ್ನು ನೀವು ಆಡಬಹುದು. ಆದರೆ ನೀವಿರುವ ವಿಪಕ್ಷ ನಾಯಕ ಸ್ಥಾನಕ್ಕೆ ಈ ಹೇಳಿಕೆಗಳು ಸೂಕ್ತವಾಗಿದೆ. ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ದೇಶದಲ್ಲಿ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು.
ಕೋರ್ಟ್ ಎಲ್ಲಿ ಕೂಡ ಗಾಂಧಿ ಹತ್ಯೆ ಮಾಡಿದ್ದು ಆರ್ಎಸ್ಎಸ್ ಎಂದು ಎಲ್ಲಿಯೂ ಹೇಳಿಲ್ಲ. ಆಗ ಗಾಂಧಿ ಕೊಲೆ ಪ್ರಕರಣದ ತನಿಖೆಗೆ ಸರ್ಕಾರವೇ ನೇಮಿಸಿದ್ದು ಮೂರು ತನಿಖಾ ಆಯೋಗಗಳು ಸಹ ಈ ಹತ್ಯೆಯಲ್ಲಿ ಆರ್ಎಸ್ ಎಸ್ ಪಾತ್ರವಿದೆ ಎಂದು ಹೇಳಿರಲಿಲ್ಲ. ಆದರೆ ಈ ಸಿದ್ದರಾಮಯ್ಯ ಕೇವಲ ಸುಳ್ಳನ್ನು ಮಾತ್ರ ಹೇಳ್ತಿದ್ದಾರೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿ ಕೂಡ ಇರಲಿಲ್ಲ ಎಂದು ಹೇಳುತ್ತಾರೆ. ಗಾಂಧಿ ಹತ್ಯೆಯಾದಾಗ ಬಿಜೆಪಿಯ ಒಂದೂ ಎಂಪಿಯೂ ಅಧಿಕಾರದಲ್ಲಿ ಇರಲಿಲ್ಲ. ಹಾಗಾದರೆ ಆಗ ನೀವು ಆರ್ಎಸ್ಎಸ್ ಬಗ್ಗೆ ತನಿಖೆ ಮಾಡೋದನ್ನು ಯಾಕೆ ಬಿಟ್ಟಿರಿ..? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ : Basan Gowda Patil Yatnal : ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದವರ ಮೇಲೆ ನನಗೆ ಅಭಿಮಾನವಿದೆ : ಶಾಸಕ ಯತ್ನಾಳ್
CT Ravis outrage against Siddaramaiah
Comments are closed.