CT Ravi’s outrage : ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ ರವಿ ವ್ಯಂಗ್ಯ

ರಾಯಚೂರು : CT Ravis outrage : ಸಿದ್ದರಾಮಯ್ಯ ಈ ನಡುವೆ ನೀಡುತ್ತಿರುವ ಎಲ್ಲಾ ಹೇಳಿಕೆಗಳೂ ವಿವಾದಕ್ಕೆ ಗುರಿಯಾಗುತ್ತಿದೆ. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋದ ಹೇಳಿಕೆಯಂತೂ ಬಿಜೆಪಿ ನಾಯಕರ ಪಾಲಿಗೆ ದೊಡ್ಡ ಅಸ್ತ್ರವೇ ಆಗಿದೆ. ಈ ಹೇಳಿಕೆ ನೀಡಿದ ಸಿದ್ದರಾಮಯ್ಯರನ್ನು ಬಿಜೆಪಿ ನಾಯಕರು ತರಾಟೆ ತೆಗೆದುಕೊಳ್ಳುತ್ತಿದ್ದಾಗಲೇ ಕೊಡಗು ಪ್ರಕರಣದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಇವರು ಮಹಾತ್ಮಾ ಗಾಂಧಿಯನ್ನೇ ಕೊಂದವರು, ಇನ್ನು ನನ್ನನ್ನು ಬಿಡ್ತಾರಾ..? ಮಹಾತ್ಮಾ ಗಾಂಧಿಯನ್ನು ಕೊಂದ ನಾಥೂರಾಮ್​ ಗೋಡ್ಸೆ ಫೋಟೋವನ್ನು ಬಿಜೆಪಿ ನಾಯಕರು ಪೂಜಿಸುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯರ ಈ ಹೇಳಿಕೆಗೆ ಇಂದು ಮಂತ್ರಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಸುಳ್ಳು ಹಾಗೂ ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ತಿರುಗೇಟು ನೀಡಿದ್ದಾರೆ. ವಕೀಲನಾಗಿ ಈ ರೀತಿ ಮಾತನ್ನು ನೀವು ಆಡಬಹುದು. ಆದರೆ ನೀವಿರುವ ವಿಪಕ್ಷ ನಾಯಕ ಸ್ಥಾನಕ್ಕೆ ಈ ಹೇಳಿಕೆಗಳು ಸೂಕ್ತವಾಗಿದೆ. ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ದೇಶದಲ್ಲಿ ನೆಹರೂ ನೇತೃತ್ವದ ಕಾಂಗ್ರೆಸ್​ ಸರ್ಕಾರವೇ ಅಧಿಕಾರದಲ್ಲಿತ್ತು.

ಕೋರ್ಟ್​ ಎಲ್ಲಿ ಕೂಡ ಗಾಂಧಿ ಹತ್ಯೆ ಮಾಡಿದ್ದು ಆರ್​ಎಸ್​ಎಸ್​ ಎಂದು ಎಲ್ಲಿಯೂ ಹೇಳಿಲ್ಲ. ಆಗ ಗಾಂಧಿ ಕೊಲೆ ಪ್ರಕರಣದ ತನಿಖೆಗೆ ಸರ್ಕಾರವೇ ನೇಮಿಸಿದ್ದು ಮೂರು ತನಿಖಾ ಆಯೋಗಗಳು ಸಹ ಈ ಹತ್ಯೆಯಲ್ಲಿ ಆರ್​ಎಸ್​ ಎಸ್​ ಪಾತ್ರವಿದೆ ಎಂದು ಹೇಳಿರಲಿಲ್ಲ. ಆದರೆ ಈ ಸಿದ್ದರಾಮಯ್ಯ ಕೇವಲ ಸುಳ್ಳನ್ನು ಮಾತ್ರ ಹೇಳ್ತಿದ್ದಾರೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿ ಕೂಡ ಇರಲಿಲ್ಲ ಎಂದು ಹೇಳುತ್ತಾರೆ. ಗಾಂಧಿ ಹತ್ಯೆಯಾದಾಗ ಬಿಜೆಪಿಯ ಒಂದೂ ಎಂಪಿಯೂ ಅಧಿಕಾರದಲ್ಲಿ ಇರಲಿಲ್ಲ. ಹಾಗಾದರೆ ಆಗ ನೀವು ಆರ್​ಎಸ್​ಎಸ್​ ಬಗ್ಗೆ ತನಿಖೆ ಮಾಡೋದನ್ನು ಯಾಕೆ ಬಿಟ್ಟಿರಿ..? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : Basan Gowda Patil Yatnal : ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದವರ ಮೇಲೆ ನನಗೆ ಅಭಿಮಾನವಿದೆ : ಶಾಸಕ ಯತ್ನಾಳ್​

ಇದನ್ನೂ ಓದಿ : ShivaMogga’s unknown letter case : ಶಿವಮೊಗ್ಗ ಅನಾಮಧೇಯ ಪತ್ರ ಕೇಸ್​ಗೆ ಬಿಗ್​ ಟ್ವಿಸ್ಟ್​ : ಅಕ್ರಮ ಸಂಬಂಧಕ್ಕಾಗಿ ನಡೆದಿತ್ತು ಹುನ್ನಾರ

CT Ravis outrage against Siddaramaiah

Comments are closed.