ನಾಲ್ವರಿಗೆ ಜೀವದಾನ ಮಾಡಿದ ಮೃತ ಇಂಜಿನಿಯರ್…!!!

ಮೈಸೂರು : ಇಂಜಿನಿಯರ್ ಓರ್ವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆದ್ರೆ ಸಾವಿನ ನಂತರದಲ್ಲಿಯೂ ನಾಲ್ವರಿಗೆ ಜೀವದಾನ ಮಾಡೋ ಮೂಲಕ ಸಾರ್ಥಕತೆ ಕಂಡಿದ್ದಾರೆ.

https://kannada.newsnext.live/lockdown-again-in-the-state-cm-yeddyurappa-warning/

ಮೈಸೂರಿನ ಇಂಜಿನಿಯರ್ ಚಂದನ್ ಮಲ್ಲಪ್ಪ (28 ವರ್ಷ) ಎಂಬವರು ಸಾವಿನ ನಂತರದಲ್ಲಿ ನಾಲ್ವರಿಗೆ ಅಂಗಾಂಗ ದಾನ ಮಾಡಿದ್ದಾರೆ. ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಂದನ್ ಮಲ್ಲಪ್ಪ ಅವರನ್ನು ಮೈಸೂರ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೃತಕ ಉಸಿರಾಟದ ನಂತರದಲ್ಲಿ ಮೆದುಳು ನಿಷ್ಕ್ರೀಯಗೊಂಡಿತ್ತು.

https://kannada.newsnext.live/china-184-marketing-websites-ban-saudi-arabia/

ಚಿಕಿತ್ಸೆ ಫಲಕಾರಿಯಾಗದೆ ಚಂದನ್ ಸಾವಿನ ಬಳಿಕ ಹೃದಯದ ಕೊಳವೆ, ಲಿವರ್, ಎರಡು ಕಿಡ್ನಿಯನ್ನು ದಾನ ಮಾಡಿದ್ದಾರೆ. ಈ ಮೂಲಕ ಸಾವಿನ ಬಳಿಕವೂ ಇತರರಿಗೆ ಮಾದರಿಯಾಗಿದ್ದಾರೆ.

Comments are closed.