ಸಿಎಂ ಬಿಎಸ್ವೈ ಹಾಗೂ ಅವರ ಟೀಂ ಕೌರವರಿದ್ದಂತೆ…! ನಾನು ಪಾಂಡವರಂತೆ…! ಗೆಲ್ಲೋದು ಪಾಂಡವರೇ ಎಂದ ಯತ್ನಾಳ…!!

ಹೈಕಮಾಂಡ್ ನೊಟೀಸ್ ಬಳಿಕವೂ ಶಾಸಕ ಬಸನ್ ಗೌಡ್ ಯತ್ನಾಳ ಹಳೆ ಚಾಳಿ ಮುಂದುವರೆಸಿದ್ದು, ಬಿಎಸ್ವೈ ಮತ್ತು ಟೀಂ ಕೌರವರಿದ್ದಂತೆ ಎನ್ನುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸನಗೌಡ್ ಯತ್ನಾಳ ನಾನು ಪಾಂಡವರಂತೆ. ಬಿಎಸ್ವೈ ಹಾಗೂ ಟೀಂ ಕೌರವರಿದ್ದಂತೆ. ಧರ್ಮಯುದ್ಧದಲ್ಲಿ ಕೊನೆಗೆ ಗೆದ್ದಿದ್ದು, ಪಾಂಡವರೇ ಹೊರತು ಕೌರವರಲ್ಲ ಎನ್ನುವ ಮೂಲಕ ಮತ್ತೊಮ್ಮೆ ಸಿಎಂಗೆ ಟಾಂಗ್ ನೀಡಿದ್ದಾರೆ.

ರಾಮ ಒಬ್ಬನೇ ಇದ್ದ.  ಆದ್ರೆ ಯುದ್ಧದಲ್ಲಿ ರಾವಣನಂತ  ದೊಡ್ಡ ರಾಕ್ಷಸನನ್ನೇ ಸಂಹಾರ ಮಾಡಿದ. ನಾನು ರಾಮನ ಹಾಗೇ ರಾವಣರಿಗೆಲ್ಲ ಹೆದರೋದಿಲ್ಲ ಎನ್ನುವ ಮೂಲಕ ಸಿಎಂಹಾಗೂ ತಂಡಕ್ಕೆ ಹೆದರಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ವಂಚಕ ಯುವರಾಜ್ ವಿಚಾರದಲ್ಲಿ ಮಾತನಾಡಿದ  ಯತ್ನಾಳ್, ಕೆಲವರು ನಾಯಕರ ಜೊತೆಗಿನ ಪೋಟೋ ಇಟ್ಕೊಂಡು ವಂಚಿಸುತ್ತಾರೆ. ಇನ್ನು ಕೆಲವರು ಹೆಣ್ಮಕ್ಕಳನ್ನು, ಸಿನಿಮಾ ತಾರೆಯರನ್ನು ದೆಹಲಿಗೆ ಕರೆದೊಯ್ಯುತ್ತಾರೆ. ಅಂತವರೆಲ್ಲ ಈಗ ಮಂತ್ರಿಗಳಾಗಿದ್ದಾರೆ ಎಂದು ಸ್ವಪಕ್ಷಿಯರ ವಿರುದ್ಧ ಗುಡುಗಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ತನಿಖೆಯನ್ನು ಎಸ್ಆಯ್ ಟಿ ಗೆ ನೀಡಿದ್ದು ಸರಿಯಲ್ಲ ಸಿಬಿಐಗೆ ನೀಡಬೇಕಿತ್ತು. ಎಸ್.ಆಯ್.ಟಿ ಮೇಲೆ ಪ್ರಭಾವ ಬೀರಬಹುದು ಆದರೆ ಸಿಬಿಐ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದರು.

ಕೆಲದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಹಾಗೂ ಸಿಎಂ ವಿರುದ್ಧ ಮಾತನಾಡಿದ್ದಕ್ಕಾಗಿ ಶಾಸಕ ಯತ್ನಾಳ್ ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಯತ್ನಾಳ ಸಿಎಂರನ್ನು ಕೌರವ ಎನ್ನುವ ಮೂಲಕ ತಮ್ಮ ಹಳೆಚಾಳಿ ಮುಂದುವರೆಸಿದ್ದಾರೆ.

Comments are closed.