Arun Singh Warning :ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರ ಅಕ್ರಮವನ್ನು ಶೀಘ್ರದಲ್ಲೇ ಬಯಲಿಗೆಳೆಯುತ್ತೇವೆ : ಅರುಣ್ ಸಿಂಗ್ ವಾರ್ನಿಂಗ್
ಬೀದರ್ Arun Singh Warning: ಒಬ್ಬ ಸರಳ ಹಾಗೂ ಸಜ್ಜನ ಕಾಮನ್ ಮ್ಯಾನ್ ಎಂದೇ ಖ್ಯಾತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಅಪಪ್ರಚಾರ ಮಾಡುತ್ತಿರುವದು ದುರಂತ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದ್ದಾರೆ. ಬೀದರ್ ಉತ್ತರ ಹಾಗೂ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವ ಬೀದರ್ ಗೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದವರು ಕರ್ನಾಟಕದ ಮಾನವನ್ನು ಇಡೀ ದೇಶದಲ್ಲಿ ಹರಾಜು ಮಾಡುವ ಕೆಲಸ ಮಾಡುತ್ತಿದ್ದಾರೆ, ಮುಂಬರುವ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲ್ಲಿದ್ದಾರೆಂದು ಎಂದು ಕಾಂಗ್ರೆಸ್ ಹಾಗೂ ಸಿದ್ದು ವಿರುದ್ದ ಗುಡುಗಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ 23 ಹಿಂದುಗಳ ಹತ್ಯೆಯಾಗಿದ್ದವು,ಗೋಹತ್ಯೆ ಕಾಯ್ದೆಗೆ ವಿರೋದ ವ್ಯಕ್ತಪಡಿಸಿದರು, ಕರ್ನಾಟಕ ಹಾಗೂ ಭಾರತದ ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯಗೆ ಮಾಹಿತಿಯೇ ಇಲ್ಲ ಎಂದು ಅರುಣ್ ಸಿಂಗ್ ಬೀದರ್ ನಲ್ಲಿ ಸಿದ್ದು ವಿರುದ್ದ ಗರಂ ಆದರೂ. ಸಿದ್ದರಾಮಯ್ಯಾ ಸರ್ಕಾರದಲ್ಲಿ ನಡೆದ ಅಕ್ರಮಗಳನ್ನ ತನಿಖೆ ಮಾಡಿಸುತ್ತೆವೆ ಎಂದ ಅರುಣ್ ಸಿಂಗ್ ರಾಜ್ಯವನ್ನ ಲೂಟಿ ಮಾಡಿದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಅಕ್ರಮಗಳನ್ನ ಬಯಲಿಗೆ ತರುತ್ತೆವೆಂದು ಕೈ ಪಕ್ಷದ ನಾಯಕರಿಗೆ ಅರುಣ್ ಸಿಂಗ್ ಎಚ್ಚರಿ ನೀಡಿದರು.
ಇನ್ನು ಇದೇ ಸಂದರ್ಭ ಗಡಿ ಜಿಲ್ಲೆ ಬೀದರ್ ನ ಬಿಜೆಪಿಯಲ್ಲಿರುವ ಬಂಡಾಯವನ್ನು ನಾನು ಶಮನ ಮಾಡುತ್ತೇನೆ ಎಂದು ಅರುಣ್ ಸಿಂಗ್ ಹೇಳಿದರು. ಕೇಂದ್ರದ ಮಂತ್ರಿ ಭಗವಂತ ಖೂಬಾ ಹಾಗೂ ಸಚಿವ ಪ್ರಭು ಚವ್ಹಾಣ, ಮತ್ತು ಶಾಸಕ ಶರಣು ಸಲಗಾರ ಮಧ್ಯ ಉಂಟಾಗಿರುವ ಬಂಡಾಯ ಕಿತ್ತಾಟಕ್ಕೆ ಅಂತ್ಯ ಹಾಡುತ್ತೆನೆ. ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲವೇ ಇಲ್ಲ ಎಂದರು.
ನಮ್ಮಲ್ಲಿ ಬಂಡಾಯ ಇಲ್ಲವೇ ಇಲ್ಲ ಎಲ್ಲರೂ ಒಂದಾಗಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲು ಮಾಡುತ್ತೇವೆ, ಮುಂಬರುವ ದಿನಗಳಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ 5ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೆ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಅರುಣಸಿಂಗ್ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಸದ್ಯ ಎಲ್ಲಾ ಕಿತ್ತಾಟಕ್ಕೆ ನಾನು ಮುಕ್ತಿ ನೀಡುತ್ತೆನೆಂದು ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ಅವರ ಮಾತಿಗೆ ಮನ್ನಣೆಯನ್ನು ಕೇಂದ್ರ ಮಂತ್ರಿ ಭಗವಂತ ಖೂಬಾ ಹಾಗೂ ಸಚಿವ ಪ್ರಭು ಚವಾಣ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : Supreme Court :ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ವಿವಾಹಿತ ಮಹಿಳೆಯರಂತೆ ಅವಿವಾಹಿತ ಮಹಿಳೆಯರೂ ಅರ್ಹರು : ಸುಪ್ರೀಂ
DK Sivakumar, Siddaramaiah’s illegality will soon be exposed: Arun Singh Warning
Comments are closed.