Kodi Mutt Seer : ದೇಶಕ್ಕೆ ಪ್ರಳಯ ಹಾಗೂ ಸುನಾಮಿ ಕಾದಿದೆ : ಕೋಡಿಶ್ರೀ ಭಯಾನಕ ಭವಿಷ್ಯ

ಬೆಂಗಳೂರು : (Kodi Mutt Seer) ರಾಜ್ಯದಲ್ಲಿ ಈಗಾಗಲೇ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದ್ದು, ಅಪಾರ ಪ್ರಮಾಣದಲ್ಲಿ ಜಾನುವಾರು,ಜೀವಹಾನಿ ಹಾಗೂ ಕೋಟ್ಯಾಂತರ ರೂಪಾಯಿ ಬೆಳೆಹಾನಿಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಜನರು ಬೀದಿಗೆ ಬರೋ ಭಯದಲ್ಲಿದ್ದಾರೆ. ಇದರ ಮಧ್ಯೆಯೇ ಸದಾ ತಮ್ಮ ಭವಿಷ್ಯದಿಂದ ಜಾಗೃತಿ ಮೂಡಿಸುವ ಕೋಡಿಮಠದ ಸ್ವಾಮೀಜಿ ಮತ್ತೊಮ್ಮೇ ಭಯಾನಕ ಭವಿಷ್ಯ ನುಡಿದಿದ್ದು, ದೇಶಾದ್ಯಂತ ಜಲಪ್ರಳಯ ಹಾಗೂ ಸುನಾಮಿ ಕಾದಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯಾದ್ಯಂತ ಮಳೆ ವಿಚಾರದ ಬಗ್ಗೆ ಮಾತನಾಡಿದ ಕೋಡಿಮಠದ ಸ್ವಾಮೀಜಿಯವರು ರಾಜ್ಯ ಹಾಗೂದೇಶದಲ್ಲಿ ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ,ಸುನಾಮಿ ಸಹ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಮಂಡ್ಯದ ಬೂಕನಕೆರೆ ಗ್ರಾಮದಲ್ಲಿ ಕೋಡಿ ಶ್ರೀ ಗಳು ಭವಿಷ್ಯ ನುಡಿದಿದ್ದು, ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿದೆ.ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ.ಕೊರೊನಾ ಬಗ್ಗೆ ಈ ಹಿಂದೆ ಹೇಳಿದ್ದೆ.ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಎಲ್ಲಾ ಮಾತುಗಳು ನಿಜವಾಗಿದೆ.ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ.ಇದಕ್ಕೆಲ್ಲಾ ಪರಿಹಾರ ದೇವರನ್ನು ಪೂಜಿಸುವುದು ಎಂದಿದ್ದಾರೆ.ಅಲ್ಲದೇ ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ.ಯೋಗ್ಯ ಸಾಧುಗಳಿದ್ದಾರೆ ಗದ್ದುಗೆಗಳಿವೆ ಎಲ್ಲರೂ ಸೇರಿ ಪ್ರಾರ್ಥಿಸಿದ್ರೆ ಜಗತ್ತು ಉಳಿಯುತ್ತದೆ.

ಮಠದ ವಿರುದ್ಧ ಶರಣರ ವಿರುದ್ಧ ಆರೋಪ ವಿಚಾರ.ಮಾರ್ಮಿಕವಾಗಿ ಉತ್ತರಿಸಿದ ಕೋಡಿ ಶ್ರೀ.ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಟೀಕಿಸಿದ್ದಾರೆ.ಅಲ್ಲದೇ ಇನ್ಮುಂದೇ ಕಾವಿಧಾರಿಗಳ ಮೇಲೆ ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ. ಪರಿಸರ ನಾಶ, ಮಳೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಂದ ಜನರು ಪರಿತಪಿಸುವ ಸ್ಥಿತಿ ಬರಲಿದೆ ಎಂದು ಬೂಕನಕೆರೆಯಲ್ಲಿ ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ.ಆದರೆ ಸದಾ ಕಾಲ ತಮ್ಮ ರಾಜಕೀಯ ಭವಿಷ್ಯದಿಂದಲೂ ಸಂಚಲನ ಮೂಡಿಸುತ್ತಿದ್ದ ಸ್ವಾಮೀಜಿ ಈ ಭಾರಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.

https://www.youtube.com/watch?v=wk34Sfix8eA&t=107s

ಇದನ್ನೂ ಓದಿ: ಮಂಗಳೂರು ಪಾಲಿಕೆಯ ನೂತನ ಮೇಯರ್, ಉಪಮೇಯರ್ ಆಯ್ಕೆ

ಇದನ್ನೂ ಓದಿ: ಟಿವಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9

ಇದನ್ನೂ ಓದಿ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ದಿನ ಗಣನೆ: ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಗಜಪಡೆ

ಈ ಹಿಂದೆ ಬಿಎಸ್ವೈ ಅಧಿಕಾರ ಕಳೆದುಕೊಳ್ಳುವುದು ಹಾಗೂ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಅಲ್ಲದೇ ಕೊರೋನಾ ಕಾಲದಲ್ಲೂ ಶ್ರೀಗಳು ನುಡಿದ ಹಲವು ಭವಿಷ್ಯ ನಿಜ ವಾಗಿತ್ತು.

Kodi Mutt Seer Sri Shivananda Shivayogi Rajendra Swamiji predicts year 2022

Comments are closed.