Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ

ಧಾರವಾಡ : Kodi mutt sree: ಕೋಡಿಮಠದ ಶ್ರೀ ಶಿವಾನಂದ ಶಿವಯೋಹಿ ರಾಜೇಂದ್ರ ಸ್ವಾಮೀಜಿಗಳು ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ ಮಾಸದಲ್ಲಿ ರಾಜ್ಯದಲ್ಲಿ ಭಾರೀ ತೊಂದರೆ ಉಂಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂವತ್ಸರದ ಪ್ರಾರಂಭದಲ್ಲಿಏ ನಾನು ಭವಿಷ್ಯವೊಂದನ್ನು ನುಡಿದಿದ್ದೆ. ಮಳೆ,ಸಿಡಿಲು, ಬೆಂಕಿ ಕಾಟ , ಮತಾಂಧತೆ ಹೆಚ್ಚಾಗಿ ಸಾವು ನೋವು ಉಂಟಾಗುತ್ತೆ . ಜನ ಅಶಾಂತಿಯಿಂದ ಇರುತ್ತಾರೆ, ಭೂಮಿ ಕುಸಿಯುತ್ತೆ, ನಡುಗುತ್ತೆ ಎಂದು ಎಚ್ಚರಿಕೆ ನೀಡಿದ್ದೆ. ಈಗ ನೋಡಿ ಹಾಗೆ ಆಗಿದೆ ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ಇನ್ನು ಮುಂದೆಯೂ ಮಳೆಯಾಗುವ ಲಕ್ಷಣಗಳಿವೆ . ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳಿವೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣವಿದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತದೆ. ಭೂಮಿಯೊಳಗೆ ವಿಷಜಂತುಗಳು ಹೊರಗೆ ಬಂದು ತೊಂದರೆ ನೀಡುತ್ತದೆ. ಪ್ರಕೃತಿಯಲ್ಲಿ ದೊಡ್ಡ ಮಟ್ಟದ ಅಲ್ಲೋಲ ಕಲ್ಲೋಲ ಸಂಭವಿಸಲಿದೆ ಎಂದು ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ.


ರಾಜ್ಯಕ್ಕೆ ಒಂದು ಅವಘಡ ಕಾದಿದೆ. ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆ ಆಗಲಿದೆ. ಅಪಮೃತ್ಯು ಆಗಲಿದೆ. ರಾಜ್ಯದಲ್ಲಿ ಮತಾಂಧತೆ, ಜಾತೀಯತೆ, ಆಕ್ರೋಶ ಹೆಚ್ಚಲಿದೆ. ಇನ್ನೊಂದು ವರ್ಷದಲ್ಲಿ ಕೊರೊನಾ ವೈರಸ್​ ತೊಲಗಲಿದೆ. ಆದರೆ ಅದು ಹೋಗುವಾಗ ವಿಪರೀತ ಕ್ಷಾಮ ,ದುಃಖವನ್ನು ಕೊಟ್ಟು ಹೋಗುತ್ತದೆ. ಕುಡಿಯೋದಕ್ಕೆ ನೀರೂ ಸಿಗದ ಪರಿಸ್ಥಿತಿ ಎದರಾಗುತ್ತದೆ. ಜಗತ್ತಿನ ಇತಿಹಾಸದಲ್ಲಿಯೇ ಇಂತಹದ್ದೊಂದು ಕಾಯಿಲೆ ಬಂದಿಲ್ಲ ಎಂದು ಹೇಳಿದ್ರು.


ಕಷ್ಟ ಬಂದಾಗ ದೇವರು ಅಂತಾ ಮಠ , ಮಂದಿರಕ್ಕೆ ಹೋಗುತ್ತೇವೆ. ಆದರೆ ಮಠ, ಮಂದಿರಕ್ಕೂ ಕೊರೊನಾ ಬಂತು. ಜನವರಿವರೆಗೂ ಕೊರೊನಾ ಇರಲಿದೆ. ಆದರೆ ಅದು ಹೋಗುವಾಗ ತುಂಬಾ ಕಷ್ಟ ನೀಡುತ್ತದೆ. ಆ ಸಂವತ್ಸರ ಶುಭ ಆಗೋದಿಲ್ಲ ಅಶುಭ ಎಂದು ಹೇಳಿದ್ದೆ. ಗುಡ್ಡ ಕುಸಿತ, ಭೂಕಂಪ ಹೆಚ್ಚಾಗುವ ನಿರೀಕ್ಷೆಯಿದೆ. ದುಷ್ಟ ಪ್ರಾಣಿಗಳಿಂದಲೂ ಕಷ್ಟವಿದೆ .ಹೊರಗಡೆ ಹೋಗುವಾಗ ಒಂದು ಬಡಗಿ ಹಿಡಿದುಕೊಂಡು ಹೋಗಬೇಕು. ಅಂಗಾಂಗ ಕಾಯಿಲೆಗಳು ಬೆಉತ್ತವೆ. ಆಶ್ವೀಜದಿಂದ ಯುಗಾದಿವರೆಗೆ ಅಂಗಾಂಗ ಕಾಯಿಲೆ ಹೆಚ್ಚಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನು ಓದಿ : Rishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ ರೌಟೇಲಾ

ಇದನ್ನೂ ಓದಿ : Mallikarjun Kharge:ಎಐಸಿಸಿ ಚುನಾವಣೆಗೆ ಯಾರೂ ಬೇಕಾದರೂ ಸ್ಪರ್ಧಿಸಬಹುದು: ಮಲ್ಲಿಕಾರ್ಜುನ್​ ಖರ್ಗೆ ಸ್ಪಷ್ಟನೆ

Kodi mutt sree prediction on natural disaster in ugadi

Comments are closed.