ಸೋಮವಾರ, ಜೂನ್ 16, 2025
HomekarnatakaKSRTC Bus beginning: ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭ

KSRTC Bus beginning: ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭ

- Advertisement -

ಬೆಳಗಾವಿ: (KSRTC Bus beginning) ಗಡಿವಿವಾದ ತಾರಕಕ್ಕೇರಿದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಕೊಂಡಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ ಆರ್ ಟಿಸಿ ಬಸ್ ಸಂಚಾರ ಇದೀಗ ಮತ್ತೆ ಆರಂಭವಾಗಿದೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿವಿವಾದದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾರಾಷ್ಟ್ರದ ಕೆಲ ಕಿಡಿಗೇಡಿ ಪುಂಡರು ಕೆಎಸ್ ಆರ್ ಟಿಸಿ ಬಸ್ (KSRTC Bus beginning)ಗಳ ಮೇಲೆ ಕಲ್ಲು ಮಸಿ ಬಳಿದು ಉದ್ಧಟತನ ತೋರಿದ್ದರು. ಕರ್ನಾಟಕದ ಬಸ್‌, ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಮಸಿ ಬಳಿದು ಪುಂಡರು ಪುಂಡಾಟ ನಡೆಸಿದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ತಾತ್ಕಾಲಿಕವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳಿಂದ ಸ್ಥಗಿತಕೊಂಡಿದ್ದ ಬಸ್‌ ಸಂಚಾರವನ್ನು ಇದೀಗ ಮತ್ತೆ ಪ್ರಾರಂಭಿಸಿದ್ದು, ಬೆಳಗಾವಿಯಿಂದ ಪ್ರತಿದಿನ ಮಹಾರಾಷ್ಟ್ರಕ್ಕೆ 400ಕ್ಕೂ ಹೆಚ್ಚು ಬಸ್ ಸಂಚಾರ ನಡೆಸಲು ಆರಂಭಿಸಿವೆ.

ಇದೀಗ ಎರಡು ದಿನ ಸ್ಥಗಿತಕೊಂಡಿದ್ದ ಬಸ್‌ ಸಂಚಾರ ಮತ್ತೆ ಪ್ರಾರಂಭವಾಗಿದ್ದು, ಬೆಳಗಾವಿ ವಿಭಾಗದಿಂದ 150 ಬಸ್‌ಗಳ ಸಂಚಾರ ಆರಂಭವಾಗಲಿದ್ದು, ಚಿಕ್ಕೊಡಿ ವಿಭಾಗದಿಂದ 250 ಬಸ್‌ ಗಳ ಸಂಚಾರ ಆರಂಭವಾಗಲಿದೆ. ಗಡಿ ವಿವಾದದ ಪರಿಸ್ಥಿತಿಯನ್ನು ಅವಲೋಕಿಸಿ ಹಂತ ಹಂತವಾಗಿ ಬಸ್‌ ಗಳ ಸಂಚಾರ ಆರಂಭ ಮಾಡಲಾಗುವುದು ಎಂದು NWKSRTC ವಿಭಾಗದ ಡಿಟಿಒ ಲಮಾಣಿ ಅವರು ಹೇಳಿದ್ದಾರೆ. ಬೆಳಗಾವಿಯಿಂದ ಪ್ರತಿದಿನ 400ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು, ಮುಂಬೈ, ನಾಸೀಕ್‌, ಮೀರಜ್‌, ಪುಣೆ, ಔರಂಗಾಬಾದ್‌, ಸಿಂಧದುರ್ಗಕ್ಕೆ ಬಸ್‌ ಸಂಚಾರ ಆರಂಭವಾಗಿದೆ.

ಇದನ್ನೂ ಓದಿ : M-K border dispute: ಎಮ್‌ಇಎಸ್‌ ಬಳಿಕ ಎಮ್‌ಎನ್‌ಎಸ್‌ ನಿಂದ ಕಿಡಿಗೇಡಿ ಕೃತ್ಯ: ಕರ್ನಾಟಕ ಬ್ಯಾಂಕ್‌ ಗಳ ಮೇಲೂ ಕಪ್ಪು ಮಸಿ

ಇದನ್ನೂ ಓದಿ : Traffic Rules : ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಲು ಮಂಗಳೂರು ನಗರ ಪೊಲೀಸರ ಹೊಸ ತಂತ್ರ

(KSRTC Bus beginning) Bus traffic was stopped for the last two days due to border dispute. The KSRTC bus service between Belgaum and Maharashtra, which was temporarily suspended for two days, has now resumed.

RELATED ARTICLES

Most Popular