Halappa Achar : ‘ಮತ್ತೆ ನಾನೇ ಶಾಸಕನಾಗಿ ಬರ್ತೀನಿ ನೋಡ್ತಿರಿ’ : ಮತದಾರರಿಗೆ ಸವಾಲ್​ ಎಸೆದ ಸಚಿವ ಹಾಲಪ್ಪ ಆಚಾರ್​

ಕೊಪ್ಪಳ :Halappa Achar challenged the voters : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಲು ಇನ್ನೇನು ಆರು ತಿಂಗಳುಗಳು ಬಾಕಿ ಉಳಿದಿದೆ. ಮುಂದಿನ ಬಾರಿಯೂ ತಾವೇ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ನಾಯಕರು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಿಕೊಳ್ಳುವ ಹಾಗೂ ಪ್ರತಿಪಕ್ಷದ ನಾಯಕರ ಮೇಲೆ ಆರೋಪ – ಪ್ರತ್ಯಾರೋಪಗಳನ್ನು ಮಾಡುವ ಕಾರ್ಯವು ರಾಜ್ಯ ರಾಜಕಾರಣದಲ್ಲಿ ಭರದಿಂದ ಸಾಗುತ್ತಿದೆ. ಆದರೆ ಈ ನಡುವೆ ಸಚಿವ ಹಾಲಪ್ಪ ಆಚಾರ್​ ಮಾತ್ರ ತಮ್ಮ ಕ್ಷೇತ್ರದಲ್ಲಿ ಮತದಾರರ ಜೊತೆಯಲ್ಲೇ ಜಟಾಪಟಿ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಭಾಗಿಯಾಗಿದ್ದರು. ಅಭಿವೃದ್ಧಿ ಕಾರ್ಯಗಳ ಕುರಿತಾಗಿ ವೇದಿಕೆಯಲ್ಲಿಯೇ ಸಚಿವ ಹಾಲಪ್ಪ ಆಚಾರ್​ ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ನಿಮ್ಮ ಅಧಿಕಾರ ಅವಧಿ ಬಾಕಿ ಉಳಿದಿರುವುದು ಕೇವಲ ಆರು ತಿಂಗಳು. ಹೀಗಾಗಿ ನಮ್ಮ ಕೆಲಸಗಳನ್ನು ಮಾಡಿಕೊಡಿ ಅಂತಾ ಮತದಾರರು ಕಿಡಿ ಕಾರಿದ್ದರು.

ಮತದಾರರು ಈ ರೀತಿ ಹೇಳುತ್ತಿದ್ದಂತೆಯೇ ಗರಂ ಆದ ಸಚಿವ ಹಾಲಪ್ಪ ಆಚಾರ್​, ಆರು ತಿಂಗಳ ಬಳಿಕವೂ ನಾನೇ ಅಧಿಕಾರದಲ್ಲಿರ್ತೇನೆ. ಮುಂದಿನ ಬಾರಿಯೂ ಈ ಕ್ಷೇತ್ರಕ್ಕೆ ನಾನೇ ಶಾಸಕನಾಗುತ್ತೇನೆ. ನಾನೇ ಶಾಸಕನಾಗಿ ಮತ್ತೆ ಬಂದು ನಿಮ್ಮ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಸಚಿವ ಹಾಲಪ್ಪ ಆಚಾರ್​​ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದು ಈ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್​ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನಡುವೆ ನೇರ ಹಣಾಹಣಿ ಇರುತ್ತದೆ.

ಇದನ್ನು ಓದಿ : Gangubai Kathiawadi : ಆಸ್ಕರ್​ಗೆ ಅಧಿಕೃತ ಆಯ್ಕೆ ಪಡೆದುಕೊಳ್ಳುತ್ತಾ ಬಾಲಿವುಡ್​ನ ಗಂಗೂಬಾಯಿ ಕಾಥಿಯಾವಾಡಿ

ಇದನ್ನೂ ಓದಿ : clashes on live in relationship :ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿ ಬಿರುಕು : ಸಂಗಾತಿಯಿಂದಲೇ ವ್ಯಕ್ತಿಗೆ ಶಾಕ್​ ಟ್ರೀಟ್​ಮೆಂಟ್​

ಇದನ್ನೂ ಓದಿ : Man Lives Atop Palm Tree :ಪತ್ನಿ ಕಾಟದಿಂದ ಬೇಸತ್ತು ಮರವೇರಿ ಕುಳಿತ ಭೂಪ :ಖಾಸಗಿತನಕ್ಕೆ ಧಕ್ಕೆಯೆಂದ ಗ್ರಾಮಸ್ಥರು

Minister Halappa Achar challenged the voters that he will be the MLA next time as well

Comments are closed.