ಕೊಪ್ಪಳ :Halappa Achar challenged the voters : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಲು ಇನ್ನೇನು ಆರು ತಿಂಗಳುಗಳು ಬಾಕಿ ಉಳಿದಿದೆ. ಮುಂದಿನ ಬಾರಿಯೂ ತಾವೇ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ನಾಯಕರು ಇನ್ನಿಲ್ಲದ ಹರಸಾಹಸವನ್ನು ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಿಕೊಳ್ಳುವ ಹಾಗೂ ಪ್ರತಿಪಕ್ಷದ ನಾಯಕರ ಮೇಲೆ ಆರೋಪ – ಪ್ರತ್ಯಾರೋಪಗಳನ್ನು ಮಾಡುವ ಕಾರ್ಯವು ರಾಜ್ಯ ರಾಜಕಾರಣದಲ್ಲಿ ಭರದಿಂದ ಸಾಗುತ್ತಿದೆ. ಆದರೆ ಈ ನಡುವೆ ಸಚಿವ ಹಾಲಪ್ಪ ಆಚಾರ್ ಮಾತ್ರ ತಮ್ಮ ಕ್ಷೇತ್ರದಲ್ಲಿ ಮತದಾರರ ಜೊತೆಯಲ್ಲೇ ಜಟಾಪಟಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಭಾಗಿಯಾಗಿದ್ದರು. ಅಭಿವೃದ್ಧಿ ಕಾರ್ಯಗಳ ಕುರಿತಾಗಿ ವೇದಿಕೆಯಲ್ಲಿಯೇ ಸಚಿವ ಹಾಲಪ್ಪ ಆಚಾರ್ ಹಾಗೂ ಮತದಾರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ನಿಮ್ಮ ಅಧಿಕಾರ ಅವಧಿ ಬಾಕಿ ಉಳಿದಿರುವುದು ಕೇವಲ ಆರು ತಿಂಗಳು. ಹೀಗಾಗಿ ನಮ್ಮ ಕೆಲಸಗಳನ್ನು ಮಾಡಿಕೊಡಿ ಅಂತಾ ಮತದಾರರು ಕಿಡಿ ಕಾರಿದ್ದರು.
ಮತದಾರರು ಈ ರೀತಿ ಹೇಳುತ್ತಿದ್ದಂತೆಯೇ ಗರಂ ಆದ ಸಚಿವ ಹಾಲಪ್ಪ ಆಚಾರ್, ಆರು ತಿಂಗಳ ಬಳಿಕವೂ ನಾನೇ ಅಧಿಕಾರದಲ್ಲಿರ್ತೇನೆ. ಮುಂದಿನ ಬಾರಿಯೂ ಈ ಕ್ಷೇತ್ರಕ್ಕೆ ನಾನೇ ಶಾಸಕನಾಗುತ್ತೇನೆ. ನಾನೇ ಶಾಸಕನಾಗಿ ಮತ್ತೆ ಬಂದು ನಿಮ್ಮ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಸಚಿವ ಹಾಲಪ್ಪ ಆಚಾರ್ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದು ಈ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ನಡುವೆ ನೇರ ಹಣಾಹಣಿ ಇರುತ್ತದೆ.
ಇದನ್ನು ಓದಿ : Gangubai Kathiawadi : ಆಸ್ಕರ್ಗೆ ಅಧಿಕೃತ ಆಯ್ಕೆ ಪಡೆದುಕೊಳ್ಳುತ್ತಾ ಬಾಲಿವುಡ್ನ ಗಂಗೂಬಾಯಿ ಕಾಥಿಯಾವಾಡಿ
ಇದನ್ನೂ ಓದಿ : clashes on live in relationship :ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಬಿರುಕು : ಸಂಗಾತಿಯಿಂದಲೇ ವ್ಯಕ್ತಿಗೆ ಶಾಕ್ ಟ್ರೀಟ್ಮೆಂಟ್
ಇದನ್ನೂ ಓದಿ : Man Lives Atop Palm Tree :ಪತ್ನಿ ಕಾಟದಿಂದ ಬೇಸತ್ತು ಮರವೇರಿ ಕುಳಿತ ಭೂಪ :ಖಾಸಗಿತನಕ್ಕೆ ಧಕ್ಕೆಯೆಂದ ಗ್ರಾಮಸ್ಥರು
Minister Halappa Achar challenged the voters that he will be the MLA next time as well
Comments are closed.