RSS is the biggest terrorist organization:‘ಈ ದೇಶದ ಬಹುದೊಡ್ಡ ಭಯೋತ್ಪಾದಕ ಸಂಘಟನೆ ಆರ್​ಎಸ್​ಎಸ್​’ : ಎಸ್​​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್​ ಪ್ರಸಾದ್

ಕಲಬುರಗಿ : RSS is the biggest terrorist organization : ದೇಶದಲ್ಲಿ ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರ ನಿವಾಸದ ಮೇಲೆ ಎನ್​ಐಎ ಸಾಲು ಸಾಲು ದಾಳಿಗಳನ್ನು ನಡೆಸುತ್ತಿರುವುದು ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದ ನಾನಾ ಕಡೆಗಳಲ್ಲಿ ಈ ಎರಡೂ ಸಂಘಟನೆಗಳ ಕಾರ್ಯಕರ್ತರು ದಿಢೀರ್​ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಪಿಎಫ್​​ಐ ಹಾಗೂ ಎಸ್​ಡಿಪಿಐ ಮುಖಂಡರ ಮೇಲೆ ನಡೆಯುತ್ತಿರುವ ದಾಳಿ ಪ್ರಕರಣದ ವಿಚಾರವಾಗಿ ಕಲಬುರಗಿಯಲ್ಲಿ ಎಸ್​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್​ ಪ್ರಸಾದ್​ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳವನ್ನು ಮುಂದಿಟ್ಟುಕೊಂಡು ಎಸ್​ಡಿಪಿಐ ಹಾಗೂ ಪಿಎಫ್​ಐ ಸಂಘಟನೆಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಇದೊಂದು ಕುಕೃತ್ಯ ಹಾಗೂ ಷಡ್ಯಂತ್ರವಾಗಿದೆ. ನಿಜವಾದ ದೇಶಭಕ್ತರು, ಸಂವಿಧಾನ ಪರವಾಗಿದ್ದರಿಂದ ಬಿಜೆಪಿ ಹಾಗೂ ಆರ್​ಎಸ್​ಎಸ್​ ಹೆದರಿಕೊಂಡಿದೆ. ಬಿಜೆಪಿ ಕನಸಿನ, ಬ್ರಾಹ್ಮಣ ಭಾರತವನ್ನು ಕಟ್ಟಲು ಪಿಎಫ್​ಐ ಹಾಗೂ ಎಸ್​ಡಿಪಿಐ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಗುಡುಗಿದ್ದಾರೆ.

ಇದು ಬುದ್ಧನ ಭಾರತ, ಅಂಬೇಡ್ಕರ್​ ಭಾರತ, ಬಸವನ ಭಾರತ, ಶಾಹು ಮಹಾರಾಜ್​ ಭಾರತ , ಇದನ್ನು ನಾವು ಉಳಿಸಿಕೊಳ್ಳುತ್ತೇವೆ. ಇದನ್ನು ನಾಶ ಮಾಡಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಮೊದಲಿನಿಂದಲೂ ಈ ರೀತಿಯ ದಾಳಿಗಳು ನಡೆಯುತ್ತಲೇ ಇದೆ. ಆದರೆ ಕೋರ್ಟ್​ನಲ್ಲಿ ಈ ಎಲ್ಲಾ ಪ್ರಕರಣಗಳು ಬಿದ್ದು ಹೋಗಿದೆ. ಕಾನೂನು ಹೋರಾಟವನ್ನು ನಡೆಸಿ ಆರೋಪ ಮುಕ್ತರಾಗುವ ಶಕ್ತಿ ನಮ್ಮಲ್ಲಿ ಇದೆ ಎಂದು ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ರೆ ಬಿಜೆಪಿ ಬಳಿ ಉತ್ತರವಿಲ್ಲ. ಹೀಗಾಗಿ ಈ ರೀತಿ ದಾಳಿ ಮಾಡ್ತಿದ್ದಾರೆ. ಈ ಭೂಮಿಗೆ ಇಂದ್ರಲೋಕ, ಚಂದ್ರಲೋಕ ಇಳಿಸ್ತೀನಿ ಎಂದು ಕೊಟ್ಟಿರುವ ಆಶ್ವಾಸನೆಗಳ ಬಗ್ಗೆ ಜನರು ಪ್ರಶ್ನೆ ಮಾಡಿದರೆ ಉತ್ತರ ಕೊಡುವ ಯೋಗ್ಯತೆಯಾಗಲಿ ಅರ್ಹತೆಯಾಗಲಿ ಈ ಬಿಜೆಪಿಯವರಿಗಿಲ್ಲ. ಎಲ್ಲಿಂದಲೋ ನಾಲ್ಕು ಚಿರತೆ ಹಿಡಿದುಕೊಂಡು ಬಂದು ಅದಕ್ಕೆ ಹೆಸರಿಡಿ ಅಂತಾರೆ. ದೇಶದಲ್ಲಿ ತಿನ್ನೋಕೆ ಅನ್ನವಿಲ್ಲದೇ ಜನ ಸಾಯ್ತಿದ್ದಾರೆ. ಇಂತಹ ನಾಚಿಕೆಗೆಟ್ಟ ಪ್ರಧಾನಿ ಮಂತ್ರಿಯನ್ನು ನಾವು ಹಿಂದೆಂದೂ ನೋಡೇ ಇಲ್ಲ. ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಪಿಎಫ್​ಐ ಮೇಲೆ ಆರೋಪಗಳನ್ನು ಎತ್ತಿ ಹಾಕಿ ತಾವು ದೇಶಭಕ್ತರು ಎಂದು ತೋರಿಸಿಕೊಳ್ಳುವ ಪ್ರಯತ್ನ ಬಿಜೆಪಿಯದ್ದು ಎಂದು ಗುಡುಗಿದ್ದಾರೆ.

ಈ ಬಿಜೆಪಿ ಸರ್ಪೋಟ್​ ಮಾಡುತ್ತಿರುವ ಈ ದೇಶ ದೊಡ್ಡ ಭಯೋತ್ಪಾದನೆ ಸಂಘಟನೆ ಎಂದರೆ ಅದು ಆರ್​ಎಸ್​ಎಸ್​. ಆರ್​ಎಸ್​ಎಸ್​ ಹತ್ತಿರ ಅಕ್ರಮ ಶಸ್ತ್ರಾಸ್ತ್ರಗಳ ದಾಸ್ತಾನು ಇದೆ. ಆರ್​ಎಸ್​ಎಸ್​ ಹತ್ತಿರ ಅಕ್ರಮ ಹಣದ ವಹಿವಾಟು ಇದೆ .ಆರ್​ಎಸ್​ಎಸ್​ ನೋಂದಾಯಿತ ಸಂಘಟನೆ ಅಲ್ಲ. ಆರ್​ಎಸ್​ಎಸ್​ನವರು ಈ ದೇಶದಲ್ಲಿ ಬಾಂಬ್​ ಕೃತ್ಯಗಳು ನಡೆಸಿದ ಉದಾಹರಣೆಗಳಿವೆ. ನಮ್ಮನ್ನು ಹೆದರಿಸಲು ಈ ರೀತಿಯ ದಾಳಿಯನ್ನು ಮಾಡಲಾಗುತ್ತಿದೆ. ಆದರೆ ಇದೆಲ್ಲದರಿಂದ ನಾವು ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Naleen Kumar Kateel:‘ಸೋನಿಯಾ ಗಾಂಧಿಗೆ ಹಣ ನೀಡಿ ಸಿಎಂ ಆಗಿದ್ದವರು ಸಿದ್ದರಾಮಯ್ಯ’ : ನಳೀನ್​ಕುಮಾರ್​ ಕಟೀಲ್​ ಆರೋಪ

ಇದನ್ನೂ ಓದಿ : Siddaramaiah :‘ಕಟೀಲ್​ ಒಬ್ಬ ವಿದೂಷಕ, ಮೆಚ್ಯೂರಿಟಿ ಇಲ್ಲದ ವ್ಯಕ್ತಿ’ : ನಳೀನ್​ ಕುಮಾರ್​ ಕಟೀಲ್​ ಆರೋಪಕ್ಕೆ ಸಿದ್ದು ತಿರುಗೇಟು

‘RSS is the biggest terrorist organization in this country’: SDPI State General Secretary Bhaskar Prasad

Comments are closed.