ಉಡುಪಿ : ಕುಡಿದ ಮತ್ತಲ್ಲಿ ಟ್ಯಾಂಕರ್‌ ಚಾಲನೆ, ತಪ್ಪಿತು ಬಾರೀ ದುರಂತ

Udupi Drunk driver : ಉಡುಪಿ : ಟ್ಯಾಂಕರ್ ಚಾಲಕನೋರ್ವ ರಾತ್ರಿ ಕುಡಿದ ಮತ್ತಲ್ಲಿ ಗ್ಯಾಸ್‌ ಟ್ಯಾಂಕರ್‌ ಚಲಾಯಿಸುವ ಮೂಲಕ ಅವಾಂತರ ಸೃಷ್ಟಿಸಿದ್ದಾನೆ. ಕೊನೆಗೆ ಉಡುಪಿಯ ಸಾರ್ವಜನಿಕರು ಟ್ಯಾಂಕರ್‌ ಅಡ್ಡಗಟ್ಟಿ, ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಕಾಬಿಟ್ಟಿಯಾಗಿ ಚಲಾಯಿಸಿಕೊಂಡು ಬಂದಿದ್ದಾನೆ. ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿದ ಘಟನೆ ನಡೆದಿದೆ.

ಕೊನೆಯಲ್ಲಿ ಟ್ಯಾಂಕರ್‌ ಚಾಲಕನನ್ನು ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ಅವರು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ಬಹಳಷ್ಟು ವೇಗವಾಗಿ ಯರ್ರಾ ಬಿರ್ರಿಯಾಗಿ ಬರುತ್ತಿದ್ದ.

ಇದನ್ನೂ ಗಮನಿಸಿದ ಸಾರ್ವಜನಿಕರ ವಾಹನವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ. ಬಳಿಕ ಸಾರ್ವಜನಿಕರು ಚಾಲಕನನ್ನು ಥಳಿಸಿದ್ದಾರೆ,

ಬಳಿಕ ವಿಶುಶೆಟ್ಟಿಯವರು ಬಂದು ಆತನಿಗೆ ಹಲ್ಲೆಯಾಗುವುದನ್ನು ತಡೆದು ಕೂಡಲೆ ಪೋಲಿಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ‌. ನಂತರ ರಸ್ತೆಯ ಮದ್ಯದಲ್ಲಿ ನಿಂತಿದ್ದ ಟ್ಯಾಂಕರ್ ಅನ್ನು ಚಾಲಕರೊಬ್ಬರ ಸಹಾಯದಿಂದ ಠಾಣೆಗೆ ತಲುಪಿಸಿದ್ದಾರೆ.

Udupi: Drunk driver drives tanker, another tragedy averted

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories