ಮಂಗಳವಾರ, ಜೂನ್ 17, 2025
HomeBreakingಕೊರೋನಾ ಸಂಕಷ್ಟಕ್ಕೆ ಮಿಡಿದ ಕಿಚ್ಚ….! ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಕೈತುತ್ತು ಯೋಜನೆ….!!

ಕೊರೋನಾ ಸಂಕಷ್ಟಕ್ಕೆ ಮಿಡಿದ ಕಿಚ್ಚ….! ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಕೈತುತ್ತು ಯೋಜನೆ….!!

- Advertisement -

ಕೊರೋನಾ ಸಂಕಷ್ಟಕ್ಕೆ ಭಾರತ,ಕರ್ನಾಟಕ ತತ್ತರಿಸಿ ಹೋಗಿದೆ. ದಿನಗೂಲಿ ನೌಕರರು, ಮಧ್ಯಮವರ್ಗದ ಜನರು ಮುಂದೇನು ಎಂಬ ದಾರಿಕಾಣದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥವರ ಸಹಾಯಕ್ಕೆ ಧಾವಿಸಿರುವ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

Sudeep Bigboss 3 E1606633777316

ಈಗಾಗಲೇ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಿಂದ ಸಾವನ್ನಪ್ಪಿದವರ ಕುಟುಂಬದ ಸಂಕಷ್ಟಕ್ಕೆ ಮಿಡಿದ ಸುದೀಪ್ ಆರ್ಥಿಕ ಸಹಾಯ ಘೋಷಿಸಿದ್ದಾರೆ. ಈ ಮಧ್ಯೆ ನಗರದಲ್ಲಿ ಕೊರೋನಾ ವಾರಿಯರ್ಸ್ ಗಳು ಹಾಗೂ ಅಗತ್ಯ ಉಳ್ಳವರಿಗಾಗಿ ಇಂದಿನಿಂದ ಸುದೀಪ್ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ.

Cvv

ಕಿಚ್ಚ್ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಚ್ಚನ ಕೈತುತ್ತು ಎಂಬ ಹೆಸರಿನಡಿ ಊಟ ಒದಗಿಸಲಾಗುತ್ತದೆ.

Sudeep TeachAIDS Interview

ಅಗತ್ಯ ಉಳ್ಳವರು ಈ ವ್ಯವಸ್ಥೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಿಚ್ಚ ಸುದೀಪ್ ಚ್ಯಾರಿಟೇಬಲ್ ಟ್ರಸ್ಟ್ ನ್ನು 6360334455 ದೂರವಾಣಿ ಸಂಖ್ಯೆ ಮೂಲಕ ಸಂರ್ಪಕಿಸಬಹುದಾಗಿದೆ.

Sudeep Kotigobba 1
https://kannada.newsnext.live/twitter-helphand-india-110cr-jack-ceo-corona-covid-19/amp/

ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧೆಡೆ ಅಗತ್ಯ ಉಳ್ಳವರಿಗಾಗಿ ಕಿಚ್ಚ ಸುದೀಪ್ ಟ್ರಸ್ಟ್ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಿದೆ. ಅದರೊಂದಿಗೆ ಈಗ ಆಹಾರದ ವ್ಯವಸ್ಥೆ ಕಲ್ಪಿಸುತ್ತಿದೆ.

Sudeep2
https://kannada.newsnext.live/corona-isolation-center-open-all-district-arun-kalgadde-demand/amp/

ಸಮಾಜಸೇವೆ ಹಾಗೂ ಅಗತ್ಯ ಉಳ್ಳವರ ನೆರವಿಗೆ ಸದಾ ಸಿದ್ಧವಿರುವ ಕಿಚ್ಚ ಸುದೀಪ್, ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 6 ಸ್ಪರ್ಧಿ ನಟಿ ಸೋನು ಪಾಟೀಲ್ ತಾಯಿ ಅನಾರೋಗ್ಯದ ವೇಳೆ ಲಕ್ಷಾಂತರ ರೂಪಾಯಿ ವ್ಯಯಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

9000 41

RELATED ARTICLES

Most Popular