ಮಂಗಳವಾರ, ಜೂನ್ 17, 2025
HomeBreakingಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ ತಲೈವಾ…! ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡುಗೆ…!!

ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ ತಲೈವಾ…! ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡುಗೆ…!!

- Advertisement -

ಕೊವೀಡ್ ಎರಡನೇ ಅಲೆಯ ಸಂಕಷ್ಟ ದೇಶದಾದ್ಯಂತ ವ್ಯಾಪಿಸಿದ್ದು, ಸರ್ಕಾರಗಳು ಜನತೆಗೆ ಅಗತ್ಯ ಔಷಧಿಗಳು, ಆಕ್ಸಿಜನ್, ಐಸಿಯು ಬೆಡ್ ಒದಗಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಸರ್ಕಾರದ ಜೊತೆ ಕೈಜೋಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

A13 1
https://kannada.newsnext.live/sandalwood-actor-chetan-write-letter-to-cm-cemetry-workershelp/

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರನ್ನು ಭೇಟಿ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್ 50 ಲಕ್ಷ ರೂಪಾಯಿ ದೇಣಿಗೆಯ ಚೆಕ್ ನ್ನು ಹಸ್ತಾಂತರಿಸಿದ್ದಾರೆ.

A12 1
https://kannada.newsnext.live/corona-patient-no-steroid-minister-sudhakar/

ಕೊವೀಡ್-19 ವಿರುದ್ಧದ ಹೋರಾಟದಲ್ಲಿ ಜನರು ಸರ್ಕಾರದ ಜೊತೆ ಕೈಜೋಡಿಸುವಂತೆ ಹಾಗೂ ಸಿಎಂ ಪರಿಹಾರ ನಿಧಿಗೆ ಹಣ ಕೊಡುಗೆಯಾಗಿ ನೀಡುವಂತೆ ಮುಖ್ಯಮಂತ್ರಿ ಸ್ಟಾಲಿನ್ ಮನವಿ ಮಾಡಿದ್ದರು. ಇದರ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ದಾನ ಮಾಡಿದ್ದಾರೆ.

A14 1

ಸರ್ಕಾರಕ್ಕೆ 50 ಲಕ್ಷ ರೂಪಾಯಿ ಕೊಡುಗೆ ನೀಡಿದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್, ಜನರಿಗೆ ಕೊವೀಡ್ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

A15
https://kannada.newsnext.live/kannada-smallscreen-ginirama-serial-actor-nayananagraj/

ತಮಿಳುನಾಡಿನಲ್ಲಿ ರವಿವಾರವೊಂದೇ ದಿನ 12,450 ಹೊಸ ಕೊವೀಡ್ ಪ್ರಕರಣಗಳು ವರದಿಯಾಗಿದ್ದು, 20,905 ಜನರು ಗುಣಮುಖರಾಗಿದ್ದಾರೆ ಹಾಗೂ 303 ಸಾವಿನ ಪ್ರಕರಣಗಳು ವರದಿಯಾಗಿವೆ.

9000 74
RELATED ARTICLES

Most Popular