ಖಳನಟನ ಮಾನವೀಯತೆಗೆ ಮೆಚ್ಚಿದ ಜನತೆ…! ತಾಂಡಾ ಜನರಿಂದ ನಿರ್ಮಾಣವಾಯ್ತು ಗುಡಿ…!!

ತೆಲಂಗಾಣ: ಜನರಿಗೆ ಸಿನಿಮಾ ನಟ-ನಟಿಯರು ಅಂದ್ರೇ ಒಂದು ತೂಕ ಪ್ರೀತಿ ಜಾಸ್ತಿ. ಆದರೇ ಈ ಭಾರಿ ಈ ಪ್ರೀತಿ ಖಳನಟನವರೆಗೂ ಹಬ್ಬಿದೆ. ಕೊರೋನಾ ಸಂಕಷ್ಟದಲ್ಲಿ ಜನರ ಕಷ್ಟಕ್ಕೆ ಮಿಡಿದ ಸೋನುಸೂದ್ ಗಾಗಿ ಜನರು ದೇವಾಲಯ ನಿರ್ಮಿಸಿದ್ದು ತಮ್ಮ‌ ಪ್ರೀತಿಗೆ ಸಾಕ್ಷಿ ನೀಡಿದ್ದಾರೆ.

ಹೌದು ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಖಳನಟನಾಗಿ ಮಿಂಚಿದ ಸೋನುಸೂದ್ ರಿಯಲ್ ಲೈಫ್ ನಲ್ಲಿ ಜನರ ಪಾಲಿಗೆ ದೇವರಾಗಿ ಪರಿಣಮಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ತಲುಪಿಸಿದ ಸೋನು ಸೂದ್ ಅದೇಷ್ಟೋ ಜನರಿಗೆ ಊಟ-ತಿಂಡಿ ಬಟ್ಟೆ ಕೊಟ್ಟು ನೆರವಾಗಿದ್ದಾರೆ.


ಅಶಕ್ತ ಹೆಣ್ಣುಮಕ್ಕಳ ಕುಟುಂಬಕ್ಕೆ ಟ್ರ್ಯಾಕ್ಟರ್ ಕೊಟ್ಟಿದ್ದಲ್ಲದೇ ನೂರಾರು ಜನರ ವಿವಿಧ ಸಂಕಷ್ಟಕ್ಕೆ ಕೈಯಿಂದ‌ ಲಕ್ಷಾಂತರ ರೂಪಾಯಿ ವ್ಯಯಿಸಿ ನೆರವಿನ ಹಸ್ತ ಚಾಚಿದ್ದಾರೆ.

ಇಂಥ ಸೋನು ಸೂದ್ ಲಕ್ಷಾಂತರ ಜನರ ಪಾಲಿಗೆ ದೇವರಾಗಿದ್ದು, ಇವರ ಮೇಲಿನ ಪ್ರೀತಿ ಅಭಿಮಾನದಿಂದ ತೆಲಂಗಾಣದ ಸಿದ್ಧಿಪೇಟ್ ದ ಡುಬ್ಬಾ ತಾಂಡಾದ ಜನತೆ ಸೋನು ಸೂದ್ ಅವರಿಗಾಗಿ ದೇವಾಲಯವೊಂದನ್ನು ನಿರ್ಮಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಲ್ಲಿನ ನಿವಾಸಿಗಳು, ಸೋನು ಸೂದ್ ಕೊರೋನಾ ಸಂಕಷ್ಟದಲ್ಲಿ ಜನರಿಗೆ ನೆರವಾಗಿದ್ದಾರೆ.‌ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸಿದ್ದಾರೆ.

ಕಾರ್ಮಿಕರಿಗೆ ಬಸ್,ಕಾರು,ವಿಮಾನ ವ್ಯವಸ್ಥೆ ಮಾಡಿಸಿದ್ದಾರೆ. ಹೀಗಾಗಿ ಅವರಿಗೆ ಗುಡಿ ನಿರ್ಮಿಸಿ ಪೂಜಿಸುವ ಉದ್ದೇಶದಿಂದ ಗುಡಿ ನಿರ್ಮಿಸಿದ್ದೇವೆ ಎಂದಿದ್ದಾರೆ.


ಸೋನು ಸೂದ್ ಪ್ರಾಂತ್ಯ ಬೇಧವಿಲ್ಲದೇ ದೇಶದ ಎಲ್ಲೆಡೆಗೂ ಸಹಾಯ ಹಸ್ತ ಚಾಚಿದ್ದು ಕರ್ನಾಟಕದಲ್ಲೂ ಹಲವರಿಗೆ ನೆರವಾಗಿದ್ದಾರೆ.

Comments are closed.