ಬೆಂಗಳೂರು : ಕೊರೊನಾ ವಿಶ್ವವನ್ನೇ ನಡುಗಿಸುತ್ತಿದೆ. ರಾಜ್ಯದಲ್ಲಿ 10 ಮಂದಿ ಕೊರೊನಾಗೆ ತುತ್ತಾಗುತ್ತಲೇ ಕರ್ನಾಟಕವೇ ಬೆಚ್ಚಿ ಬಿದ್ದಿತ್ತು. ಆದ್ರೀಗ ರಾಜ್ಯವೇ ಕೊಂಚ ನೆಮ್ಮದಿಯ ನಿಟ್ಟಿಸಿರು ಬಿಡುವ ಸುದ್ದಿ ಹೊರಬಿದ್ದಿದ್ದು, ರಾಜ್ಯದ ಮೊದಲ ಕೊರೊನಾ ಪೀಡಿತ ಟೆಕ್ಕಿ ಹಾಗೂ ಆತನ ಕುಟುಂಬ ಗುಣಮುಖವಾಗಿದೆ.
ಇತ್ತೀಚಿಗಷ್ಟೇ ಅಮೇರಿಕಾದಿಂದ ಬೆಂಗಳೂರಿಗೆ ಬಂದಿದ್ದ ಟೆಕ್ಕಿಗೆ ಕೊರೊನಾ ಕಾಣಿಸಿಕೊಂಡಿತ್ತು. ನಂತರ ಕುಟುಂಬಸ್ಥರನ್ನು ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಇರೋದು ದೃಢಪಟ್ಟಿತ್ತು. ಟೆಕ್ಕಿ ಕುಟುಂಬಕ್ಕೆ ಕೊರೊನಾ ಕಾಣಿಸಿಕೊಳ್ಳುತ್ತಲೇ ರಾಜ್ಯವೇ ಬೆಚ್ಚಿಬಿದ್ದಿತ್ತು. ಈ ನಡುವಲ್ಲೇ ಕಲಬುರಗಿಯಲ್ಲಿ 74 ವರ್ಷದ ವೃದ್ದ ಸಾವನ್ನಪ್ಪಿದ್ದ.
ಮಾತ್ರವಲ್ಲ ರಾಜ್ಯದಲ್ಲಿ 10 ಮಂದಿ ಕೊರೊನಾ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೀಗ ರಾಜ್ಯದ ಮೊದಲ ಕೊರೊನಾ ಪೀಡಿತ ಟೆಕ್ಕಿ ಕುಟುಂಬ ಗುಣಮುಖವಾಗಿರೋದು ರಾಜ್ಯದ ಜನರಿಗೆ ನೆಮ್ಮದಿ ತರಿಸಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಪೀಡಿತ ಸಂಖ್ಯೆ 6ಕ್ಕೆ ಇಳಿದಂತಾಗಿದೆ.