ನಿಶ್ಚಯವಾಗಿದ್ದ ಪ್ರಿಯತಮೆಯ ಮನೆಗೆ ಹೋಗಿ ಬಲಂತವಾಗಿ ತಾಳಿಕಟ್ಟಿದ ಪ್ರೇಮಿ..!

ಹಾಸನ : ಮದುವೆ ನಿಶ್ಚಯವಾಗಿದ್ದ ಯುವತಿಗೆ ಮಾಜಿ ಪ್ರಿಯಕರನೋರ್ವ ಬಲವಂತವಾಗಿ ತಾಳಿಕಟ್ಟಿ ಮದುವೆಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ಕುಶಾಲನಗರ ಬಡಾವಣೆಯ ಯುವತಿ ಅರಕೆರೆ ಗ್ರಾಮದ ಸತೀಶ್ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಸೋಮವಾರ ಮದುವೆ ನಿಗದಿಯಾಗಿತ್ತು. ಆದರೆ ಸತೀಶ್ ಸ್ನೇಹಿತರು ಆತನನ್ನು ಯುವತಿಯ ಮನೆಗೆ ಕರೆದೊಯ್ದು ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ.

ಮದುವೆಯ ಬೆನ್ನಲ್ಲೇ ಯುವತಿಯ ತಾಯಿ ಸಕಲೇಶಪುರ ಪೊಲೀಸ್ ಠಾಣೆಗೆ ಬಂದು ತನ್ನ ಮಗಳನ್ನು ಬಲವಂತವಾಗಿ ಮದುವೆ ಯಾಗಿದ್ದಾನೆ ಅಂತಾ ದೂರು ಕೊಟ್ಟಿದ್ದಾರೆ. ತನ್ನ ಮಗಳಿಗೆ ನ್ಯಾಯ ಒದಗಿಸುವಂತೆಯೂ ಮನವಿ ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಸಕಲೇಶಪುರ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

https://kannada.newsnext.live/mangalore-yakshagana-dailogue-tantre-ba-tantu-video-viral/


.

Comments are closed.