Lightning Strikes:ಸೆಲ್ಪಿ ತೆಗೆದುಕೊಳ್ಳುವ ವೇಳೆ ದುರಂತ…! ಸಿಡಿಲು ಬಡಿದು 11 ಜನರ ಸಾವು…!!

ರಾಜಸ್ಥಾನ: ಮಳೆ ಹಾಗೂ ಗುಡುಗು ಸಿಡಿಲಿನ ವೇಳೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದವರಿಗೆ ಸಿಡಿಲು ಬಡಿದ ಪರಿಣಾಮ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ.

ರಾಜಸ್ಥಾನದ ಜೈಪುರದ 12 ನೇ ಶತಮಾನದ ಅಮೆರ್  ಪ್ಯಾಲೇಸ್ ನಲ್ಲಿ ಈ ಘಟನೆ ನಡೆದಿದೆ. ಅಮೆರ್ ಪ್ಯಾಲೇಸ್ ನ ಟವರ ಮೇಲೆರಿದ್ದ ಪ್ರವಾಸಿಗರು ಸೆಲ್ಪಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದೆ.

ಸಿಡಿಲು ಬಡಿದ ವೇಳೆ ಟವರ್ ಮೇಲೆ 27 ಜನರಿದ್ದು, ಈ ಪೈಕಿ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.ಸಿಡಿಲಿನ ತೀವ್ರತೆ ಹಾಗೂ ಭಯಕ್ಕೆ ಹಲವರು ಟವರ್ ನಿಂದ ಜಿಗಿದಿದ್ದು, ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಪ್ರವಾಸಿ ತಾಣದಲ್ಲಿ ನಡೆದ ಈ ದುರಂತಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ  ಪರಿಹಾರ ಘೋಷಿಸಿದ್ದಾರೆ.

Comments are closed.