ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಕಹಾನಿ…! ಅಗ್ನಿಸಾಕ್ಷಿ ವೈಷ್ಣವಿ ಹಿಂದೆ ಬಿದ್ದ ಹೀರೋ ಯಾರು ಗೊತ್ತಾ…?!

ಬಿಗ್ ಬಾಸ್ ಮನೆಯಲ್ಲಿ ಹಾಡು,ಹರಟೆ,ಗಲಾಟೆ,ಹೊಡೆದಾಟದ ಜೊತೆ ಪ್ರತಿ ಸೀಸನ್ ನಲ್ಲೂ ತಪ್ಪದೇ ಒಂದು ಅನುರಾಗದ ಕಹಾನಿ ಕಾಮನ್. ಈ ಭಾರಿಯೂ ಬಿಗ್ ಬಾಸ್ ಕನ್ನಡ ಸೀಸನ್ -8 ಆರಂಭವಾದ ಎರಡು ಮೂರು ದಿನದಲ್ಲೇ ಪ್ರೇಮ್ ಕಹಾನಿಯೊಂದು ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ. ಬ್ರೋಗೌಡ ಖ್ಯಾತಿಯ ಶಮಂತ್ ಅಗ್ನಿಸಾಕ್ಷಿಯ ವೈಷ್ಣವಿ ಹಿಂದೆ ಬಿದ್ದಿರೋ ಅನುಮಾನ ದಟ್ಟವಾಗಿದೆ.

ಈ ಹಿಂದಿನ ಎಲ್ಲಾ ಸೀಸನ್ ಗಳಲ್ಲೂ ಒಂದಲ್ಲ ಒಂದು ಲವ್ ಸ್ಟೋರಿ ನಡೆದಿತ್ತು. ಅದರಲ್ಲೂ ಚಂದನ  ಹಾಗೂ ನಿವೇದಿತಾ ಇಲ್ಲಿ ಅರಳಿದ ಪ್ರೀತಿಗೆ ಮದುವೆಯ ಬಂಧ ತೊಡಿಸಿ ಸಕ್ಸಸ್ ಆದರು. ಹೀಗಾಗಿ ಈ ಸೀಸನ್ ನಲ್ಲೂ ಲವ್ ಬರ್ಡ್ಸ್ ಇರೋದು ಕಾಮನ್ ಎಂದುಕೊಳ್ಳಲಾಗಿತ್ತು.

ಅಂತೆಯೇ ಬ್ರೋಗೌಡ ಈಗಾಗಲೇ ವೀಕ್ಷಕರ ಅಟೆನ್ಸನ್ ಪಡೆದುಕೊಳ್ಳೋಕೆ ತಾನು ಬಿಗ್ ಬಾಸ್ ಮನೆಯಲ್ಲಿ ಒಬ್ಬರನ್ನು ಪ್ರೀತಿಸುತ್ತಿರೋದಾಗಿ ಹೇಳಿಕೊಂಡಿದ್ದಾರೆ.  ಆದರೆ ಯಾರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿಲ್ಲ. ನೋಡುಗರಿಗೆ ಮಾತ್ರ ಬ್ರೋ ಗೌಡನ ಪ್ರೀತಿ ಜಾಲದಲ್ಲಿ ಬಿದ್ದಿರೋದು ವೈಷ್ಣವಿನೇ ಇರಬೇಕು ಅನ್ನೋ ಅನುಮಾನ.

ವೈಷ್ಣವಿಯವರಿಗೆ ಕ್ಯಾಪ್ಟನ್ ಕೋಣೆಯ ರೆಸ್ಟ್ ರೂಂ ಬಿಟ್ಟುಕೊಟ್ಟಿದ್ದು, ಅವರ ವಸ್ತುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಇದೆಲ್ಲವನ್ನೂ ಗಮನಿಸಿದ್ರೇ ಬ್ರೋ ಗೌಡ ಅಗ್ನಿಸಾಕ್ಷಿಯ ವೈಷ್ಣವಿ ಹಿಂದೆ ಬಿದ್ದಿದ್ದಾರೆ ಅನ್ನೋದು ಕನ್ಪರ್ಮ್ ಅಂತಿದ್ದಾರೆ ವೀಕ್ಷಕರು.

ಆದರೆ ಈ ಬಿಗ್ ಬಾಸ್ ಮನೆಯ ಪ್ರೀತಿಯ ಕತೆಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕಿಲ್ಲ. ಹಾಗಂತ ಪೂರ್ತಿ ನೆಗ್ಲೆಕ್ಟ್ ಕೂಡ ಮಾಡುವಂತಿಲ್ಲ. ಯಾಕಂದ್ರೆ ಇಲ್ಲಿ ಕೆಲವೊಮ್ಮೆ ಹೃದಯದಿಂದ ಪ್ರೀತಿ ಹುಟ್ಟಿದರೇ ಹಲವು ಸಲ ಗೇಮ್ ಶೋ ಗಾಗಿ ತಲೆಯಿಂದಲೂ ಪ್ರೀತಿ ಹುಟ್ಟಿರುವ ಸಾಧ್ಯತೆ ಇರುತ್ತೆ. ಏನೇ ಆದರೂ ಬ್ರೋ ಗೌಡನ ಪ್ರೀತಿ ಕತೆ ಅಸಲಿಯತ್ತು ಇನ್ಮುಂದಷ್ಟೇ ಗೊತ್ತಾಗಬೇಕಿದೆ.

Comments are closed.