ರಾಜ್ಯದಲ್ಲಿಯೂ ಕರ್ಪ್ಯೂ ಮುಂದುವರಿಕೆ ..!! ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು ..?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕರ್ಪ್ಯೂ ಜಾರಿ‌ ಮಾಡಲಾಗಿದೆ.‌ ಜಾರಿಯಲ್ಲಿರುವ ಎರಡು ವಾರಗಳ ಕರ್ಪ್ಯೂವನ್ನು ನಾಲ್ಕು ವಾರಗಳ ಕಾಲ ವಿಸ್ತರಣೆ ಮಾಡುವ ಕುರಿತು ಆರೋಗ್ಯ ಸಚಿವ ಸುಧಾಕರ್ ಅವರು ಸೂಚನೆಯನ್ನು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ 4 ವಾರಗಳ ಕಾಲ ಕರ್ಪ್ಯೂ ‌ಜಾರಿ ಮಾಡಲಾಗಿದೆ. ಮೂರು ವಾರಗಳ ಕರ್ಪ್ಯೂ ‌ನಂತರ ದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಯಾಗುತ್ತಿದೆ. ರಾಜ್ಯದಲ್ಲಿಯೂ ಕೊರೊನಾ ಸೋಂಕು ಇಳಿಕೆಯಾಗದೇ ಇದ್ದಲ್ಲಿ ಕರ್ಪ್ಯೂವನ್ನು ಇನ್ನಷ್ಟು ದಿನಗಳ ವಿಸ್ತರಣೆ ಮಾಡಲಾವುದು ಎಂದಿದ್ದಾರೆ.

ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 48 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿತ್ತು. ದಿನೇ ದಿನೇ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗು ತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.

Comments are closed.