ಮಂಗಳೂರಲ್ಲಿ ಮತ್ತೆ ವಿವಾದಿತ ಗೋಡೆ ಬರಹ : ಪೊಲೀಸರ ನಿದ್ದೆಗೆಡಿಸಿದ ಕಿಡಿಗೇಡಿಗಳ ಕೃತ್ಯ

ಮಂಗಳೂರು : ಕಳೆದೆರಡು ದಿನಗಳ ಹಿಂದೆಯಷ್ಟೇ ಉಗ್ರರ ಪರ ಗೋಡೆ ಬರಹ ರಾರಾಜಿಸಿದ ಬೆನ್ನಲ್ಲೇ, ಇದೀಗ ಮಂಗಳೂರಿನ ಮತ್ತೊಂದು ಕಡೆಯಲ್ಲಿ ವಿವಾದಾತ್ಮಕ ಗೋಡೆ ಬರಹವನ್ನು ಬರೆಯಲಾಗಿದೆ.

ನಗರದ ಕೋರ್ಟ್ ರಸ್ತೆಯಲ್ಲಿರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯ ಮೇಲೆ ಉರ್ದು ಭಾಷೆಯಲ್ಲಿ ಪ್ರವಾದಿಗಳಿಗೆ ಕೋಪ ಬಂದರೆ ಒಂದೆ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂಬ ಅರ್ಥದಲ್ಲಿ ಗೋಡೆ ಬರಹವನ್ನು ಬರೆಯಲಾಗಿದೆ. ನಗರದಲ್ಲಿ ಎರಡನೇ ಬಾರಿಗೆ ಗೋಡೆ ಬರಹ ರಾರಾಜಿಸಿರುವ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ್ದಾರೆ.

ಈ ಹಿಂದೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನ ಗೋಡೆಯ ಮೇಲೆ ಉಗ್ರರ ಪರವಾಗಿ ಗೋಡೆ ಬರಹವನ್ನು ಬರೆಯಲಾಗಿತ್ತು. ನಂತರದಲ್ಲಿ ಪೊಲೀಸರು ಗೋಡೆ ಬರಹಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ಗೋಡೆ ಬರಹ ಕಾಣಿಸಿಕೊಂಡಿದೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿದ್ದಾರೆ.

Comments are closed.